ಬ್ರೇಕಿಂಗ್ ನ್ಯೂಸ್
20-05-25 07:18 pm HK News Desk ಕರ್ನಾಟಕ
ವಿಜಯಪುರ, ಮೇ 20 : ಪಾಕಿಸ್ತಾನ ವಿಷಯದಲ್ಲಿ ರಾಷ್ಟ್ರದ್ರೋಹಿ ಹೇಳಿಕೆ ನೀಡ್ತಿರೋರನ್ನ ಗುಂಡಿಟ್ಟು ಕೊಲ್ಲಬೇಕು. ಪ್ರಿಯಾಂಕ ಖರ್ಗೆ, ಸಂತೋಷ ಲಾಡ್, ದಿನೇಶ್ ಗುಂಡೂರಾವ್, ಕೊತ್ತೂರು ಮಂಜುನಾಥ, ಹರಿಪ್ರಸಾದ್ ಹೇಳಿಕೆಗೆ ಕಿಡಿ ಕಿಡಿಯಾದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಅಂಥವರನ್ನು ಮೊದಲು ಗುಂಡಿಟ್ಟು ಕೊಲ್ಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
140 ಕೋಟಿ ಜನ ಹಿಂದುಸ್ತಾನ ಪರವಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕರು ದೇಶದ ಪರವಾಗಿದ್ದೀವಿ ಎಂದು ಸೈನಿಕರ ಬಗ್ಗೆ ಹೊಗಳಿದ್ದಾರೆ. ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಹಿಂದುಸ್ತಾನ ಪರವಾಗಿದ್ದರೆ, ದೊಡ್ಡ ಖರ್ಗೆ ಹಿಂದುಸ್ತಾನ್ ಪರ, ಮರಿ ಖರ್ಗೆ ಪ್ರಿಯಾಂಕ್ ಖರ್ಗೆ ಪಾಕಿಸ್ತಾನ ಪರ. ಸ್ಪಷ್ಟವಾಗಿ ಹೇಳಿ ನಾವು ಪಾಕಿಸ್ತಾನ ಪರ ಇರ್ತೀವಿ ಅಂತ. ಈ ಬಗ್ಗೆ ಗೊಂದಲ ನಿರ್ಮಾಣ ಮಾಡ್ತಿರೋ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್, ಲಾಡ್, ದಿನೇಶ್ ಗುಂಡೂರಾವ್ ಇರಬಹುದು. ಇಂತಹ ಅನೇಕ ವ್ಯಕ್ತಿಗಳು ಸೈನಿಕರಿಗೆ ಪರೋಕ್ಷವಾಗಿ ಟೀಕೆ ಮಾಡುತ್ತಿದ್ದಾರೆ.
ಅವನ್ಯಾವನೋ ಮಂಜುನಾಥ ಅಂತೆ, ಅವನಿಗೆ ವಿಮಾನದ ಲೆಕ್ಕ ಕೊಡಬೇಕಂತೆ. ಎಷ್ಟು ಪ್ಲೈಟ್ ಹೋದ್ವು, ಎಷ್ಟು ಪಾಕಿಸ್ತಾನಿಯರನ್ನು ಕೊಂದ್ರು ಅಂತ ಕೇಳಿ ಸುಳ್ಳು ಅಂತ ಹೇಳ್ತಿದ್ದಾರೆ. ಇವರನ್ನು ಮೊದಲು ಗುಂಡಿಟ್ಟು ಹೊಡಿಯಬೇಕು. ಇವರು ದೇಶದ್ರೋಹಿಗಳು, ಇಡೀ ಪ್ರಪಂಚದ ಜನ ಭಾರತದ ಜೊತೆಗೆ ಇರಬೇಕಾದ್ರೆ, ಇವರೊಂದಿಷ್ಟು ಜನ ಪಾಕಿಸ್ತಾನ ಪರವಾಗಿ ಕೂಗಾಡ್ತಿದ್ದಾರೆ. ಪಾಕಿಸ್ತಾನ ಪರವಾಗಿ ಮಾತನಾಡ್ತಿರೋ ತರಹ ಭಾವನೆ ತರುತ್ತಿದ್ದಾರೆ. ಇವರು ದೇಶದ್ರೋಹಿಗಳು. ಇಂತಹವರಿಗೆ ಗುಂಡಿಟ್ಟು ಹೊಡೆದ್ರೆ ಕಾಂಗ್ರೆಸ್ ನಲ್ಲಿನ ಅನೇಕರು ತುಂಬಾ ಸಂತೋಷ ಪಡುತ್ತಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮದ ಬಗ್ಗೆ ಕಾಂಗ್ರೆಸ್ ನವರು ಮೆಚ್ಚಿದ್ದಾರೆ. ದಿನಾ ಟಿವಿ, ಪೇಪರ್ ನಲ್ಲಿ ಬರಬೇಕು ಎಂದು ಕೆಲವರು ಮಾತನಾಡುತ್ತಾರೆ. ಪಾಕಿಸ್ತಾನ ಪರವಾಗಿ ಮಾತನಾಡುತ್ತಿರೋ ಇಂತವರು ಭಾರತ ಹೊರಗೆ, ಒಳಗೆ ಇರೋರಿಗೆ ಉತ್ತೇಜನ ಕೊಡುತ್ತಿದ್ದಾರೆ. ಇವರೆಲ್ಲ ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ಕೊಟ್ಟಂಗೆ. ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರಿಗೆ ಗುಂಡಿಟ್ಟು ಕೊಂದ್ರೆ ದೇಶದಲ್ಲಿ ರಾಷ್ಟ್ರ ದ್ರೋಹಿ ಕೆಲ್ಸ ನಿಲ್ಲುತ್ತೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Former Karnataka Minister K.S. Eshwarappa has stirred a major controversy by calling for those making "anti-national" statements about Pakistan to be shot. His fiery reaction came in response to recent comments made by Congress leaders Priyanka Kharge, Santosh Lad, Dinesh Gundu Rao, Kottur Manjunath, and B.K. Hariprasad.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm