ಬ್ರೇಕಿಂಗ್ ನ್ಯೂಸ್
09-06-25 03:02 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 9 : ಬಿಜೆಪಿಯವರು ಎನ್ಐಎ ದಳವನ್ನು ಹಾಸ್ಯಾಸ್ಪದವಾಗಿ ಮಾಡ್ತಿದ್ದಾರೆ. ಗಂಭೀರವಾದ ಪ್ರಕರಣ ಎನ್ ಐಎಗೆ ವಹಿಸಿದ್ರೆ ಗಂಭೀರತೆ ಇರುತ್ತೆ. ಸುಹಾಸ್ ಶೆಟ್ಟಿ ರೌಡಿಶೀಟರ್. ಇಂಥವರಿಗೆ ಎನ್ಐಎ ಮೂಲಕ ರಕ್ಷಣೆ ಕೊಡ್ತಾ ಹೋದ್ರೆ ಕರ್ನಾಟಕ ಯುಪಿ, ಬಿಹಾರ ಆಗುತ್ತೆ. ನಾವಿದನ್ನು ಸುಪ್ರೀಂ ಕೋರ್ಟಿಗೂ ಒಯ್ಯುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಅಲ್ಲಿ ಪ್ರತೀಕಾರಕ್ಕಾಗಿ ಕೊಲೆಗಳಾಗಿವೆ. ಸುಹಾಸ್ ಶೆಟ್ಟಿ ಮೇಲೂ ಎರಡು ಕೊಲೆ ಕೇಸ್ ಇದೆ. ಫಾಜಿಲ್ ಮತ್ತು ಇನ್ನೊಬ್ಬ ದಲಿತ ಹುಡುಗ ಕೀರ್ತಿ ಅನ್ನೋನನ್ನು ಕೊಲೆ ಮಾಡಿದ್ದು. ಆ ಕೇಸನ್ನೂ ಎನ್ಐಎ ತನಿಖೆ ಮಾಡುತ್ತಾ.. ಎನ್ಐಎ ಇರೋದು ಭಯೋತ್ಪಾದಕ ಕೃತ್ಯಗಳ ತನಿಖೆಗೆ. ರೌಡಿಗಳ ಹತ್ಯೆ, ರಾಜಕೀಯ ಹತ್ಯೆಗಳನ್ನೆಲ್ಲ ಎನ್ಐಎ ತನಿಖೆ ಮಾಡೋದಾ. ಅದಕ್ಕೆ ರಾಜ್ಯ ಪೊಲೀಸರಿಲ್ವಾ. ಮಹಾರಾಷ್ಟ್ರ ನಂತರ ಇಡೀ ದೇಶದಲ್ಲಿ ಕರ್ನಾಟಕ ಪೊಲೀಸರು ಹೆಚ್ಚು ದಕ್ಷರಿದ್ದಾರೆ. ಹಾಗಿದ್ದ ಮೇಲೆ ಒಂದು ಕೊಲೆ ಕೇಸನ್ನು ತನಿಖೆ ಮಾಡೋಕೆ ಎನ್ಐಎ ಬರಬೇಕಾ ಎಂದು ಪ್ರಶ್ನೆ ಮಾಡಿದರು.
ಕೋಮುವಾದ, ಕೋಮು ಹತ್ಯೆಯನ್ನು ವೈಭವೀಕರಿಸುವ ದೊಡ್ಡ ಹುನ್ನಾರ ಇದರ ಹಿಂದಿದೆ. ಇದಕ್ಕೆಲ್ಲ ಅವಕಾಶ ಕೊಟ್ಟರೆ ಮತ್ತಷ್ಟು ಕೋಮು ದಳ್ಳುರಿ ಆಗಬಹುದು ಎಂದ ಅವರು, ಇಲ್ಲಿ ಕೊಲೆ ಆಗಿರೋರು, ಜೈಲಿಗೆ ಹೋಗಿರೋರು ಕೇವಲ ಪಾತ್ರಧಾರಿಗಳು. ಸೂತ್ರಧಾರಿಗಳು ಯಾರೂ ಜೈಲಿಗೆ ಹೋಗಿಲ್ಲ. ವಿನಾಯಕ ಬಾಳಿಗ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತ. ಆತನನ್ನು ನಮೋ ಬ್ರಿಗೇಡ್ ಅಧ್ಯಕ್ಷ ನರೇಶ್ ಶೆಣೈ ಹತ್ಯೆ ಮಾಡಿಸಿದ್ದ. ಬಾಳಿಗಾ ಅಕ್ಕ ತಂಗಿಯರು ನನ್ನ ಬಳಿ, ಸಿಕ್ಕ ಸಿಕ್ಕ ಕಡೆಗೆಲ್ಲಾ ಹೋಗಿ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡ್ರು. ಬಾಳಿಗಾ ಹತ್ಯೆಯನ್ನು ಎನ್ಐಎ ತನಿಖೆ ಮಾಡಿಸಬೇಕಿತ್ತು. ಹತ್ಯೆಗೈದ ನರೇಶ್ ಶೆಣೈ ರಾಜಾರೋಷ ತಿರುಗಾಡ್ತಾನೆ. ಹತ್ಯೆ ಮಾಡಿದವರು ಜೈಲಿನಲ್ಲಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕೋಸ್ಕರ ಹಿಂದುಳಿದವರನ್ನು ಬಳಸಿಕೊಳ್ಳುತ್ತಿದ್ದಾರೆ.
ನಾವು ಈ ಕೇಸನ್ನು ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋಗ್ತೀವಿ. ಎನ್ ಐಎ ತನಿಖೆ ಮಾಡ್ತಿರೋ ಮನುಷ್ಯ ಫಾಸಿಲ್ ಕೊಲೆ ಅಪರಾಧಿ. ಇವೆಲ್ಲಾ ಪ್ರತೀಕಾರದ ಕೊಲೆಗಳು. ಈ ಎಲ್ಲಾ ಕೊಲೆಗಳನ್ನ ಎನ್ ಐಎ ತನಿಖೆ ಮಾಡುತ್ತಾ ಎಂದು ಪ್ರಶ್ನೆ ಮಾಡಿದರು. ಎನ್ಐಎ ತನಿಖೆ ಕೊಡುವುದು ಕೇಂದ್ರ ಗೃಹ ಸಚಿವ. ಅಮಿತಾ ಷಾರನ್ನು ಫೇಕ್ ಎನ್ಕೌಂಟರ್ ಕೇಸಲ್ಲಿ ಎರಡು ವರ್ಷ ಗುಜರಾತಿಗೆ ಹೋಗಬಾರದು ಅಂತ ಸುಪ್ರೀಂ ಕೋರ್ಟ್ ನಿಷೇಧ ಹಾಕಿತ್ತು. ಅಂಥವರು ಈಗ ಎನ್ಐಎಯನ್ನು ದುರುಪಯೋಗ ಮಾಡುತ್ತಿದ್ದಾರೆ.
ಸುಹಾಸ್ ಶೆಟ್ಟಿಯನ್ನ ರೌಡಿಶೀಟರ್ ಲಿಸ್ಟ್ ಗೆ ಸೇರಿಸಿದ್ದು ಬಿಜೆಪಿಯವ್ರೇ. ಈಗ ರೌಡಿ ಮೋರ್ಚಾ ಮಾಡಿ ಎನ್ಐಎ ಮೂಲಕ ರಕ್ಷಣೆ ಕೊಡ್ತಿದ್ದಾರೆ. ಇಂಥವರಿಗೆಲ್ಲ ರಕ್ಷಣೆ ಕೊಡ್ತಾ ಹೋದ್ರೆ ಕರ್ನಾಟಕ ಯುಪಿ, ಬಿಹಾರ ಆಗುತ್ತೆ. ಇಂಥ ಕೊಲೆ ಸರಣಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಮಣಿಪುರ ಆಗಬಹುದು ಎಂದಿದ್ದೆ. ಈ ರೀತಿ ಕೋಮು ದ್ವೇಷದ ತನಿಖೆ ಮಾಡಿಸಿದರೆ ಇನ್ನೇನಾಗಬಹುದು. ನಾವು ಇದನ್ನು ಎಷ್ಟು ಮಾತ್ರಕ್ಕೂ ಒಪ್ಪಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
Senior Congress leader BK Hariprasad launched a scathing attack on the BJP over the transfer of the Suhas Shetty murder case to the National Investigation Agency (NIA), warning that if such practices continue, Karnataka could begin to resemble states like Bihar or Uttar Pradesh in terms of law and order.
24-06-25 05:23 pm
Bangalore Correspondent
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm