ಬ್ರೇಕಿಂಗ್ ನ್ಯೂಸ್
10-06-25 06:49 pm HK News Desk ಕರ್ನಾಟಕ
ಕಾರವಾರ, ಜೂ.10 : ಒಳ್ಳು ಒನಕೆಯ ನುಂಗಿ, ಕಲ್ಲು ಗೂಟವ ನುಂಗಿ.. ಕೋಡಗನ ಕೋಳಿ ನುಂಗಿತ್ತಾ... ಅನ್ನುವ ತತ್ವಪದವನ್ನು ನೀವೆಲ್ಲ ಕೇಳಿರುತ್ತೀರಿ. ಅದೇ ರೀತಿ ಇಲ್ಲಿ ಕೋಡಗನ ಬದಲು ಹಾವು ವಿಚಿತ್ರವಾಗಿ ವರ್ತಿಸಿ, ಈ ಪದ್ಯ ನೆನಪಿಸಿದೆ. ಯಾಕಂದ್ರೆ, ಇಲ್ಲೊಂದು ನಾಗರಹಾವು ಹರಿತ ಚಾಕುವನ್ನು ನುಂಗಿ ಒದ್ದಾಡಿ ಸುದ್ದಿಯಾಗಿದೆ.
ಇಲಿ, ಕೋಳಿ, ಮೊಟ್ಟೆ, ಕಪ್ಪೆಯನ್ನು ಹಾವುಗಳು ನುಂಗುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ಆದರೆ ತನ್ನ ಆಹಾರ ಅನ್ಕೊಂಡು ನಾಗರ ಹಾವು ಚಾಕುವನ್ನೇ ನುಂಗಿದ್ದು ಆನಂತರ ವಿಲ ವಿಲ ಒದ್ದಾಡಿದ ಪ್ರಸಂಗ ಕುಮಟಾದಲ್ಲಿ ನಡೆದಿದೆ.


ಕುಮಟಾ ತಾಲೂಕಿನ ಹೆಗಡೆಯ ಗೋವಿಂದ ನಾಯ್ಕರ ಅಡುಗೆ ಮನೆಯಲ್ಲಿದ್ದ ಚಾಕು ಮನೆಯ ಹೊರಗಡೆ ಬಿದ್ದಿತ್ತು. ಆದರೆ ಅಲ್ಲಿ ಹಾವು ಓಡಾಡುತ್ತಿರುವುದನ್ನು ಕಂಡ ಮನೆಯವರು ಸ್ಥಳಕ್ಕೆ ಹೋಗಲು ಹೆದರಿದ್ದರು. ಕೆಲ ಹೊತ್ತಲ್ಲಿ ಅಲ್ಲಿದ್ದ ಚಾಕು ಕಣ್ಮರೆಯಾಗಿತ್ತು. ಹಾವು ಮಾತ್ರ ಏನೋ ತಿಂದು ಮಲಗಿರುವಂತೆ ಬಿದ್ದುಕೊಂಡಿತ್ತು. ಹಾವು ಅಲ್ಲಿಂದ ಕದಲದೇ ಇದ್ದುದರಿಂದ ಮತ್ತು ಚಾಕು ಕೂಡ ಇಲ್ಲದಿರುವುದನ್ನು ನೋಡಿ ಅನುಮಾನದಲ್ಲಿ ಉರಗ ತಜ್ಞ ಪವನ್ ನಾಯ್ಕ ಅವರನ್ನು ಕರೆಸಿದ್ದರು.
ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಹಾವು ಚಾಕು ನುಂಗಿ ಒದ್ದಾಡುತ್ತಿರುವುದು ಖಚಿತವಾಗಿದೆ. ಚಾಕುವಿನ ತುದಿ ಗಂಟಲಿನಲ್ಲಿ ಸಿಲುಕಿದ್ದು, ಅದನ್ನು ಹೊರಹಾಕಲು ಹಾವು ಒಡ್ಡಾಡುತ್ತಿರುವುದು ಕಂಡುಬಂದಿದೆ. ಚಾಕುವನ್ನು ಹೊರತೆಗೆಯದಿದ್ದರೆ ಹಾವು ಸಾಯುತ್ತದೆ ಎಂದು ಪವನ್ ಕೂಡಲೇ ಅದನ್ನು ಪಶು ಆಸ್ಪತ್ರೆಯ ಸಹಾಯಕ ಅದ್ವೈತ ಭಟ್ ಅವರ ಮನೆಗೆ ಕೊಂಡೊಯ್ದು ಅರ್ಧ ಗಂಟೆಗೂ ಆಪರೇಶನ್ ಮಾಡಿಸಿದ್ದಾರೆ. ಕೊನೆಗೆ, ಚಾಕುವನ್ನು ಹಾವಿನ ಹೊಟ್ಟೆಯಿಂದ ಹೊರ ತೆಗೆದು ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
Kumta Snake Swallows Knife in Bizarre Incident at Kumta, Rescued After Emergency Operation.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm