ಬ್ರೇಕಿಂಗ್ ನ್ಯೂಸ್
01-09-25 01:25 pm Bangalore Correspondent ಕರ್ನಾಟಕ
ಬೆಂಗಳೂರು, ಸೆ 01 : ಎಸ್ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ನನ್ನ ಅಧ್ಯಾಯ ಮುಗಿದಿದ್ದು ನಾನು ಇನ್ನು ಯಾವುದಕ್ಕೂ ಮುಂದೆ ಹೋಗುವುದಿಲ್ಲ. ಏನೋ ತಪ್ಪು ಆಗಿದೆ, ತಪ್ಪು ಸರಿಪಡಿಸಿಕೊಳ್ಳುತ್ತೇನೆ ಎಂದು ಧರ್ಮಸ್ಥಳದಲ್ಲಿ ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ ಸುಜಾತ ಭಟ್ ಹೇಳಿದ್ದಾರೆ.
ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಫೋನ್ ಎಸ್ಐಟಿಯಲ್ಲಿದೆ. ಅವರು ನನ್ನ ಕಾಲ್ ರೆಕಾರ್ಡ್ ಎಲ್ಲವನ್ನೂ ಈಗ ನೋಡುತ್ತಿರಬಹುದು. 15 ದಿನ ಬಿಟ್ಟು ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ನಾನು ತಪ್ಪು ಮಾಡಿದ್ದೇನೆ. ಆದರೆ ಯಾರೂ ಬೇಕು ಎಂದು ತಪ್ಪು ಮಾಡುವುದಿಲ್ಲ. ಹಣೆ ಬರಹ ಹಾಳಾದಾಗ ಹೀಗೆ ಆಗುತ್ತದೆ.
ಚಿನ್ನಯ್ಯನನ್ನು ಬಾಡಿಗಾರ್ಡ್ ಎಂದು ಹೇಳಿ ಪರಿಚಯಿಸಿದ್ದರು. ನನ್ನನ್ನು ಅವರು ದೆಹಲಿಗೆ ಕರೆದುಕೊಂಡು ಹೋಗಿದ್ದರು. ದೆಹಲಿಯಲ್ಲಿ ನಾನು ವಕೀಲರ ಬಳಿ ಮಾತನಾಡಿಲ್ಲ. ಆದರೆ ಒಂದು ಕಡೆ ಕಾರಿನಲ್ಲಿ ಕೂರಿಸುತ್ತಿದ್ದರು. ಯಾರ ಜೊತೆಗೆ, ಅವರು ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ನಡೆದ ಎಲ್ಲಾ ವಿಚಾರವನ್ನು ವಿವರವಾಗಿ ತಿಳಿಸಿದ್ದೇನೆ. ಈ ಹೋರಾಟಕ್ಕೆ ನಾನು ಯಾರನ್ನೂ ಸಂಪರ್ಕ ಮಾಡಿರಲಿಲ್ಲ. ಆದರೆ ಅವರೇ ನನ್ನ ಮನೆಗೆ ಬಂದು ಸಂಪರ್ಕ ಮಾಡಿದ್ದರು.
ನನ್ನ ಬಳಿ ಯಾವುದನ್ನೂ ಕೂಲಂಕಷವಾಗಿ ಹೇಳಿಲ್ಲ. ನಾನು ಬೇರೆ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೆ. ಆದರೆ ನನ್ನನ್ನು ಅವರು ಬಳಸಿಕೊಂಡಿದ್ದಾರೆ ಎಂಬ ನೋವು ನನಗೆ ಇದೆ. ಮುಂದೆ ವೃದ್ದಾಶ್ರಮನೋ ಏನೋ ನೋಡಬೇಕು. ನನಗೆ ಇದರಿಂದ ಹೊರಗೆ ಬರಲು ಕಾಲಾವಕಾಶ ಬೇಕು.
ಆಸ್ತಿ ಗಲಾಟೆ ವಿವರ, ನನ್ನ ಬದುಕಿನ ಎಲ್ಲಾ ವಿವರವನ್ನು ಕೇಳಿದ್ದಾರೆ. ವಾಸಂತಿ ಬದುಕಿದ್ದಾಳೆ, ಸತ್ತಿಲ್ಲ. ಅವಳ ಸಾವಿನ ಬಗ್ಗೆ ಅನುಮಾನ ಇದೆ ಎಂದಿದ್ದೇನೆ ಎಂದು ಹೇಳಿದರು.
ವಿಚಾರಣೆಯಿಂದ ನನಗೆ ಮುಕ್ತಿ ಕೊಡಿ ಎಂದು ಕೇಳಿದ್ದೇನೆ. ಎಸ್ಐಟಿ ಅವರು ಬಹಳ ಚೆನ್ನಾಗಿ ನಡೆಸಿಕೊಂಡಿದ್ದಾರೆ. ಬಸ್ ಟಿಕೇಟ್ ಕೂಡ ಅವರೇ ಬುಕ್ ಮಾಡಿ ನೀಡಿದ್ದಾರೆ. ನೀಡಿರುವ ದೂರನ್ನು ನಾನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
Sujata Bhatt, the woman who had filed a complaint in the Dharmasthala missing persons case claiming her daughter had gone missing, has now made a stunning revelation. Speaking to a media outlet, she admitted to making mistakes and revealed that she has given a full statement to the Special Investigation Team (SIT).
01-09-25 05:03 pm
HK News Desk
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
R. Ashoka: ಸೆ.01 ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎ...
31-08-25 07:17 pm
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 05:05 pm
Mangalore Correspondent
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
Udupi, Diksha Sets New World Record, Bharatan...
31-08-25 12:49 pm
01-09-25 03:07 pm
Udupi Correspondent
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm