ಬ್ರೇಕಿಂಗ್ ನ್ಯೂಸ್
01-09-25 05:03 pm HK News Desk ಕರ್ನಾಟಕ
ಮೈಸೂರು, ಸೆ.1 : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕೆ ಚಲೋ ಮಾಡ್ತಿದ್ದಾರೆ. ಆದ್ರೆ ಅವರಿಗೆ ಇದರಿಂದ ಲಾಭ ಸಿಗಲ್ಲ. ನಮಗೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವವಿದೆ. ಅದಕ್ಕಾಗಿಯೇ ಎಸ್ಐಟಿ ರಚನೆ ಮಾಡಿದ್ದೆವು. ಹಾಗಾದರೆ ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡಲಿಲ್ಲ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ದೂರುದಾರ ಹೇಳಿದಂತೆ, ಅಲ್ಲಿ ಏನೂ ಸಿಗಲಿಲ್ಲ ಅಂತ ಈಗ ಹೋರಾಟ ಎಂದು ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಾಡುತ್ತಿದ್ದಾರೆ. ಹಿಂದೂಗಳು ಒಟ್ಟಾಗುತ್ತಾರೆ ಎಂದು ಏನೇನೋ ಹೇಳುತ್ತಾರೆ. ನಾವೂ ಹಿಂದೂಗಳೇ ಅಲ್ವಾ.. ಎಲ್ಲ ಹಿಂದೂಗಳು ಅವರ ಪರ ಇಲ್ಲ. ರಾಮನ ಹೆಸರಲ್ಲು ರಾಜಕೀಯ ಮಾಡಿದ್ದರು. ಈಗ ನಮ್ಮ ಊರಿನಲ್ಲೂ ರಾಮ ಮಂದಿರ ಮಾಡಿದ್ದೇವೆ.
ಹಿಂದೂಗಳು ಅಂದ್ರೆ ರಾಜಕೀಯ ಮಾಡೋದಲ್ಲ. ಅಪಪ್ರಚಾರ ಮಾಡೋದು ಅಲ್ಲ. ಸುಳ್ಳು ಹೇಳೋದು ಅಲ್ಲ. ಮನುಷ್ಯತ್ವ ಇಲ್ಲದವರನ್ನು ಏನಂತ ಕರೀಬೇಕು? ಎಂದು ಪ್ರಶ್ನೆ ಮಾಡಿದರು.
ದಸರಾ ವಿಚಾರದಲ್ಲೂ ಬಿಜೆಪಿಯವರು ರಾಜಕಾರಣ ಮಾಡಿದ್ರು. ಅವರ ಮನೆಯಲ್ಲು ರಾಜಕಾರಣ ಮಾಡ್ತಾರೆ. ಸುಳ್ಳು ಹೇಳೋದು ಬಿಟ್ಟರೆ ಬಿಜೆಪಿ ಅವರಿಗೆ ಬೇರೇನೂ ಬರಲ್ಲ. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಅಂತ ಭಾನು ಮುಷ್ತಾಕ್ ಅವರನ್ನು ಗೌರವಿಸಲು ದಸರಾ ಉದ್ಘಾಟನೆಗೆ ಕರೆದಿದ್ದೇವೆ. ಅದರಲ್ಲಿ ಬೇರೇನೂ ವಿಷಯ ಇಲ್ಲ ಎಂದರು.
ಚಾಮುಂಡಿ ಬೆಟ್ಟ ಚಲೋ ಮಾಡ್ತೀವಿ ಎಂಬ ಅಶೋಕ್ ಹೇಳಿಕೆ ವಿಚಾರದ ಪ್ರತಿಕ್ರಿಯಿಸಿದ ಅವರು, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿನೇ. ಆದ್ರೆ ದಸರಾ ಹಬ್ಬ ಎಲ್ಲರ ಹಬ್ಬ. ನಾವು ಮಾಡೋದು ದಸರಾ ಹಬ್ಬ. ಅದಕ್ಕೆ ಧರ್ಮ ಜಾತಿ ಏನು ಇಲ್ಲ ಎಂದರು. ಡಿಕೆಶಿ ಒಂದು ಕಾಲು ಹೊರಗಿಟ್ಟಿದ್ದಾರೆ 50 ಜನ ಎಂ.ಎಲ್. ಎ ಹೋಗುತ್ತಾರೆ ಎಂಬ ಯತ್ನಾಳ ಹೇಳಿಕೆಗೆ, ಅದೆಲ್ಲ ಏನೂ ಇಲ್ಲ ಎಂದು ಹೇಳುತ್ತ ಸಿಎಂ ಹೊರ ನಡೆದರು.
Chief Minister Siddaramaiah hit out at the BJP on Sunday, accusing the party of using the Dharmasthala issue for political mileage. He questioned why the BJP, which is now opposing the Special Investigation Team (SIT), had not raised objections when the SIT was first constituted.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm