ಬ್ರೇಕಿಂಗ್ ನ್ಯೂಸ್
21-09-25 10:23 pm HK News Desk ಕರ್ನಾಟಕ
ಗದಗ, ಸೆ.21 : ಹಲವು ತಿಂಗಳ ಜಗ್ಗಾಟದ ಬಳಿಕ ಪಂಚಮಸಾಲಿ ಲಿಂಗಾಯತ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಛಾಟನೆ ಮಾಡಲಾಗಿದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ಈ ನಿರ್ಧಾರ ತೆಗೆದುಕೊಂಡಿದೆ.
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ ಅವರು, ಪಂಚಮಸಾಲಿ ಸಮುದಾಯದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಮಾಡಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲಿಂಗಾಯತ ಧರ್ಮ ವಿರೋಧಿ ಹೇಳಿಕೆ, ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಸ್ವಾಮೀಜಿ ಮೇಲೆ ಹಲವು ಆರೋಪ ಹೊರಿಸಿ, ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಅಸೂಟಿ ಹೇಳಿದರು. ಭಾನುವಾರ ನಡೆದ ಸಭೆಯಲ್ಲಿ ಸ್ವಾಮೀಜಿಯನ್ನು ಉಚ್ಛಾಟಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. ಸ್ವಾಮೀಜಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿದ್ದಾರೆ. ಈ ಬಗ್ಗೆ 2014ರಲ್ಲಿ ಸ್ವಾಮೀಜಿಗೆ ನೋಟಿಸ್ ನೀಡಿದ್ದೆವು ಎಂದು ನೀಲಕಂಠ ಅಸೂಟಿ ಹೇಳಿದರು.
ಪಂಚಮಸಾಲಿಗೆ ಮೀಸಲಾತಿ ವಿಚಾರದಲ್ಲಿ ಸ್ವಾಮೀಜಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು. ಇತ್ತೀಚೆಗೆ ಕಾಶಪ್ಪನವರ್ ಬಣವು ಸ್ವಾಮೀಜಿ ವಿರುದ್ಧ ತಿರುಗಿ ಬಿದ್ದಿತ್ತು. ಆನಂತರ ಆಸ್ಪತ್ರೆಗೆ ದಾಖಲಾಗಿದ್ದ ಬಸವ ಮೃತ್ಯುಂಜಯ ಸ್ವಾಮೀಜಿಯನ್ನು ಇದೀಗ ಪೀಠದಿಂದಲೇ ಕಿತ್ತು ಹಾಕಲಾಗಿದೆ.
ಸ್ವಾಮೀಜಿಗಳ ಬಗ್ಗೆ ಬಹಳಷ್ಟು ಕಂಪ್ಲೆಂಟ್ ಇದ್ದವು. ಟ್ರಸ್ಟ್ ಮಾತು ಕೇಳುತ್ತಿರಲಿಲ್ಲ..ಅವ್ರದು ದೊಡ್ಡ ಫೈಲೇ ಇದೆ. ಈ ಸಭೆಯಲ್ಲಿ ಪೀಠದಿಂದ ಅವ್ರನ್ನ ಉಚ್ಛಾಟಿಸಬೇಕು ಎಂದು ನಿರ್ಣಯ ಆಯ್ತು.. ಟ್ರಸ್ಟ್ ಬೈಲಾದ ವಿರುದ್ಧವಾಗಿ ಆಸ್ತಿ ಮಾಡಿದ್ದಾರೆ. ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. ಬಹಳ ದಿನದಿಂದ ಕಾಯ್ದಿದ್ದೇವೆ. 2014 ರಲ್ಲಿ ನೋಟಿಸ್ ನೀಡಿದ್ದೇವೆ. ಪೂರ್ಣ ಬಹುಮತದಿಂದ ಟ್ರಸ್ಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಬಸವತತ್ವ ನಾವು ಯಾವತ್ತೂ ಹಿಂದೂ ಎನ್ನುವುದಿಲ್ಲ. ಹಿಂದೂ ಧರ್ಮದ ವಿರುದ್ಧವೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ಹಿಂದೂ ಧರ್ಮದ ಅನಿಷ್ಠದ ವಿರುದ್ಧ ಅಂತದ್ರಲ್ಲಿ ಈ ಇಬ್ಬರು ಸ್ವಾಮೀಜಿಗಳು ಹಿಂದೂ ಪದ ಬಳಕೆ ಮಾಡ್ತಾರೆ ಅಂದ್ರೆ ಇವರು ಹೇಗೆ ಇರಬೇಕು ಹೇಳಿ. ರಾಜಕೀಯ ಒತ್ತಡದಿಂದ ಅವ್ರು ಹಿಂದೂ ಪದ ಬಳಕೆ ಮಾಡುವಂತೆ ಹೇಳಿದ್ದಾರೆ ಎಂದು ಅಸೂಟಿ ಹೇಳಿದ್ದಾರೆ.
After months of infighting, Basava Jayamrutyunjaya Swamiji has been removed from the post of head of the Panchamasali Lingayat Peetha. The decision was taken by the Akhila Bharat Lingayat Panchamasali Samaj Trust.
08-06-26 12:37 pm
HK News Staffer
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
ಬೆಂಗಳೂರು ಖಾತೆಗಾಗಿ ರಾಮಲಿಂಗಾರೆಡ್ಡಿ ಬಂಡಾಯ: ಮನವೊಲ...
05-06-26 06:19 pm
ರಾಮಲಿಂಗಾ ರೆಡ್ಡಿ ಕಚೇರಿ ಎದುರಲ್ಲಿ ಪ್ರತಿಭಟನೆ ; ಕಾ...
05-06-26 05:23 pm
06-06-26 10:42 pm
HK News Desk
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
20 ವರ್ಷಗಳ ಹಿಂದೆ ಬರೆದಿದ್ದ ಪರೀಕ್ಷೆಗೆ ಈಗ ಬಂತು ಸರ...
03-06-26 09:17 pm
07-06-26 03:38 pm
Mangalore Correspondent
Apex Capital Fraud Investment, Mangalore: ಬಿಜ...
07-06-26 01:57 pm
ಮುರಿನಕಟ್ಟೆ ಧ್ವಂಸ ಪ್ರಕರಣಕ್ಕೆ ಮತ್ತೆ ಕಾವು ; ಭಟ್ಕ...
05-06-26 01:25 pm
ಪಿನಾಕಿನಿ ಹೊಳೆಯಲ್ಲಿ ಹೆಚ್ಚಾದ ಹೂಳು, ಬದಲಾದ ಹರಿವಿನ...
04-06-26 12:51 pm
ಇನ್ನು ವಿಧಾನಮಂಡಲದಲ್ಲೂ ಡಿಜಿಟಲ್ ಟಚ್ ! 6 ತಿಂಗಳಲ್ಲ...
02-06-26 04:18 pm
08-06-26 03:14 pm
HK News Staffer
ಪಬ್ಜಿ ಚಟಕ್ಕೆ ಬಿದ್ದು ಅಪ್ಪ - ಅಕ್ಕನನ್ನ ಚಟ್ಟಕ್ಕೆ...
08-06-26 02:20 pm
ಹಾಸನದ ಜಿಲ್ಲಾ ನ್ಯಾಯಾಲಯದ ಎದುರೇ ರೌಡಿಶೀಟರ್ ಬರ್ಬರ...
08-06-26 12:33 pm
ಕೋಟೆಕಾರು ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧ...
07-06-26 03:08 pm
ಉಡುಪಿಗೆ ತೆರಳುತ್ತಿದ್ದ ಬಸ್ಗೆ ಹುಲಿಕಲ್ ಘಾಟ್ನಲ್...
06-06-26 09:01 pm