ಬ್ರೇಕಿಂಗ್ ನ್ಯೂಸ್
24-09-25 03:55 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.24 : ಖ್ಯಾತ ಸಾಹಿತಿ, ಪದ್ಮವಿಭೂಷಣ ಎಸ್.ಎಲ್ ಭೈರಪ್ಪ(94) ಇನ್ನಿಲ್ಲ. ತನ್ನ ಬರವಣಿಗೆಯಿಂದಲೇ ದೇಶ- ವಿದೇಶದಲ್ಲಿ ಓದುಗರನ್ನು ಸೃಷ್ಟಿಸಿದ್ದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೆಲ ಕಾಲದ ಅಸೌಖ್ಯದ ಬಳಿಕ ನಿಧನರಾದರು.
ವಯಸ್ಸಿನ ಕಾರಣದಿಂದ ಮರೆವಿನ ಕಾಯಿಲೆ ಎದುರಿಸುತ್ತಿದ್ದ ಭೈರಪ್ಪ ಅವರು ಕಳೆದ ಮೂರು ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ಕನ್ನಡದ ಸಾಹಿತಿಯೊಬ್ಬರು ಕೇವಲ ಬರವಣಿಗೆಯಿಂದಲೇ ಅತಿ ಎತ್ತರಕ್ಕೇರಿದ ವ್ಯಕ್ತಿಯೆಂದರೆ ಎಸ್.ಎಲ್ ಭೈರಪ್ಪ.
ಹಾಸನ ಜಿಲ್ಲೆಯ ಸಂತೇಶಿವರ ಎಂಬಲ್ಲಿ 29-7-1934ರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪ ತನ್ನ ಬರವಣಿಗೆಯ ತಾಕತ್ತಿನಿಂದಲೇ ಉತ್ತುಂಗಕ್ಕೇರಿದವರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ಹೊಂದಿದ್ದ ತಂದೆ, ಪ್ಲೇಗ್ ಮಾರಿಯಿಂದ ಇಡೀ ಸಮಾಜ ತತ್ತರಗೊಂಡಿದ್ದಾಗಲೇ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಂತ ಹಂತವಾಗಿ ಮೇಲಕ್ಕೇರುತ್ತಾ ಹೋಗಿದ್ದರು. ಇವರಿಗೆ 5ನೇ ವಯಸ್ಸಿದ್ದಾಗಲೇ ತಾಯಿ ಪ್ಲೇಗ್ ನಿಂದಾಗಿ ಸಾವು ಕಂಡಿದ್ದರಿಂದ ಅವರ ಜೀವನ ತುಂಬ ಕಷ್ಟಕ್ಕೆ ದೂಡಲ್ಪಟ್ಟಿತ್ತು.
ತನ್ನ 13ನೇ ವಯಸ್ಸಿನಲ್ಲೇ ಗಾಂಧೀಜಿಯ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದವರು ಭೈರಪ್ಪರು. ಆಬಳಿಕ ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಪದವಿ ಪೂರೈಸಿದ ಅವರು ಅಲ್ಲಿಯೇ ಎಂಎ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ಬರೋಡಾದ ವಿವಿಯಿಂದ ಸತ್ಯ ಮತ್ತು ಸೌಂದರ್ಯ ವಿಷಯದಲ್ಲಿ ಇಂಗ್ಲಿಷ್ ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದಿದ್ದರು.
ಹುಬ್ಬಳ್ಳಿ, ಗುಜರಾತಿನ ಸರದಾರಿ ಪಟೇಲ್ ವಿವಿ, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದ ಶಾಸ್ತ್ರೀಯ ಶಿಸ್ತಿನ ಓದಿನ ನಡುವೆ ಕಾದಂಬರಿಗಳನ್ನು ಬರೆಯತೊಡಗಿದ್ದರು. ಆಯಾ ಕಾಲದಲ್ಲಿ ಅವರು ತಮ್ಮದೇ ನೇರ ನೋಟದಲ್ಲಿ ಬರೆದ ಕಾದಂಬರಿಗಳೆಲ್ಲ ತೀವ್ರ ಚರ್ಚೆಗೂ ಒಳಗಾಗಿದೆ. ನಾಲ್ಕು ದಶಕಗಳಲ್ಲಿ ಅವರು 21 ಕಾದಂಬರಿಗಳನ್ನು ಬರೆದಿದ್ದು ಹಲವಾರು ಭಾಷೆಗಳಿಗೆ ಅನುವಾದಗೊಂಡು ಕನ್ನಡದ ಬರಹಕ್ಕೆ ದೇಶಾದ್ಯಂತ ಓದುಗರನ್ನು ಸೃಷ್ಟಿಸಿದ್ದಾರೆ. ಗೃಹ ಭಂಗ, ವಂಶ ವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಜನಪ್ರಿಯವಾಗಿವೆ.
Celebrated Kannada writer and Padma Vibhushan awardee Santeshivara Lingannaiah Bhyrappa (94) passed away in Bengaluru on Tuesday. He had been undergoing treatment at Rashtrotthana Hospital following age-related ailments.
12-04-26 07:58 pm
HK News Staffer
ಪಿಯುಸಿ ಫಸ್ಟ್ ಕ್ಲಾಸ್ ಪಾಸಾದ ಜೀವಾವಧಿ ಶಿಕ್ಷೆಗೀಡಾದ...
10-04-26 06:53 pm
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
12-04-26 10:59 pm
HK News Desk
ಕೇರಳ ಪಾಲಿಟಿಕ್ಸ್ : ಅಧಿಕಾರ ಪಲ್ಲಟಕ್ಕೆ ಮುಸ್ಲಿಂ -...
11-04-26 09:05 pm
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
12-04-26 09:05 pm
Mangaluru Staffer
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm