ಬ್ರೇಕಿಂಗ್ ನ್ಯೂಸ್
08-10-25 11:04 pm Bangalore Correspondent ಕರ್ನಾಟಕ
ಬೆಂಗಳೂರು, ಅ.9 : ಕಾಂತಾರ- 1 ಸಿನಿಮಾವು ವಿಶ್ವಾದ್ಯಂತ ಭರ್ಜರಿ ಕಮಾಯಿ ಮಾಡುತ್ತಿದೆ. ಉತ್ತರ ಭಾರತದಲ್ಲಿ ಕಾಂತಾರ ಹಿಂದಿ ವರ್ಷನ್ಗೂ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಆರು ದಿನಗಳಿಗೆ ಈ ಸಿನಿಮಾದ ಗಳಿಕೆಯು 425+ ಕೋಟಿ ರೂ. ಆಗಿದೆ.
ಅಕ್ಟೋಬರ್ 2ರಂದು ತೆರೆಗೆ ಬಂದು, ಅ.8ಕ್ಕೆ ಏಳು ದಿನಗಳಾಗಿವೆ. ಒಂದು ವಾರ ತುಂಬುವುದಕ್ಕೆ 1 ದಿನ ಇರುವಾಗಲೇ ಕಾಂತಾರ 425+ ಕೋಟಿ ರೂ. ಗಳಿಕೆ ಆಗಿದೆ. ಅ.8ರ ಗಳಿಕೆಯೂ ಸೇರಿದರೆ. 450+ ಕೋಟಿ ಆಗುವುದು ನಿಶ್ಚಿತ.
2022ರಲ್ಲಿ ತೆರೆಕಂಡಿದ್ದ 'ಕಾಂತಾರ' ಸಿನಿಮಾದ ಒಟ್ಟಾರೆ ಗಳಿಕೆ 450 ಕೋಟಿ ರೂ. ಆಗಿತ್ತು. ಇದೀಗ ಹಳೆ ದಾಖಲೆಯನ್ನು ಏಳು ದಿನಗಳಲ್ಲೇ ಬ್ರೇಕ್ ಮಾಡಿದೆ. ಅಲ್ಲದೆ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ 2ನೇ ಸಿನಿಮಾ ಎಂಬ ಖ್ಯಾತಿಗೂ 'ಕಾಂತಾರ- 1' ಪಾತ್ರವಾಗಲಿದೆ. ಗಳಿಕೆಯ ವಿಚಾರದಲ್ಲಿ 'ಕೆಜಿಎಫ್: ಚಾಪ್ಟರ್ 2' ಮೊದಲ ಸ್ಥಾನದಲ್ಲಿದೆ.
ಕಾಂತಾರ: ಚಾಪ್ಟರ್ 1 ಸಿನಿಮಾದ ಕನ್ನಡ ವರ್ಷನ್ಗೆ ಆರು ದಿನಗಳಲ್ಲಿ ಭಾರತದಲ್ಲಿ ಸಿಕ್ಕಿರುವ ಹಣ ಭರ್ತಿ 90 ಕೋಟಿ ರೂಪಾಯಿ. ಹಿಂದಿ ವರ್ಷನ್ನಿಂದ 94 ಕೋಟಿ ಗಳಿಕೆಯಾದರೆ, ತೆಲುಗು ವರ್ಷನ್ನಿಂದ 58 ಕೋಟಿ ಹಣ ಸಿಕ್ಕಿದೆ. ತಮಿಳು ವರ್ಷನ್ನಿಂದ 28 ಕೋಟಿ ಸಿಕ್ಕರೆ, ಮಲಯಾಳಂ ವರ್ಷನ್ನಿಂದ 23 ಕೋಟಿ ರೂಪಾಯಿ ಗಳಿಕೆ ಆಗಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ತಿಳಿಸಿವೆ. ಎರಡನೇ ವಾರಾಂತ್ಯದ ಗಳಿಕೆಯೂ ಸೇರಿದರೆ, 'ಕಾಂತಾರ: ಚಾಪ್ಟರ್ 1' ಚಿತ್ರದ ಒಟ್ಟಾರೆ ಗಳಿಕೆ 600+ ಕೋಟಿ ದಾಟುವುದರಲ್ಲಿ ಅನುಮಾನ ಇಲ್ಲ.
ಸದ್ಯ ರಿಷಬ್ ಶೆಟ್ಟಿ ಉತ್ತರ ಭಾರತ ಪ್ರವಾಸದಲ್ಲಿದ್ದು, ಚಿತ್ರವನ್ನ ಪ್ರಮೋಟ್ ಮಾಡುತ್ತಿದ್ದಾರೆ. ಈಚೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಕಾಂತಾರ ಟೀಮ್ ಭೇಟಿ ಮಾಡಿದೆ. ಕಾಂತಾರ -1 ಚಿತ್ರವನ್ನು ನೋಡಿ ಖುಷಿಯಾಗಿರುವ ರೇಖಾ ಗುಪ್ತಾ, ''ಈ ಸಿನಿಮಾವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸಿದೆ. ನಮ್ಮ ಸಂಪ್ರದಾಯಗಳ ಸಾರವನ್ನು ಜೀವಂತಗೊಳಿಸಿದೆ'' ಎಂದು ಹೇಳಿದ್ದಾರೆ.
Kantara: Chapter 1 has taken the global box office by storm, earning an astonishing ₹425 crore in just six days and expected to cross ₹450 crore within a week of release. The film, which hit screens on October 2, is receiving overwhelming appreciation across all regions especially for its Hindi version, which is performing exceptionally well in North India.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm