ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ರೈಲಿನಡಿಗೆ ಹಾರಿ ಆತ್ಮಹತ್ಯೆ, ಹೆಬ್ರಿಯಲ್ಲಿ ವೈನ್ ಶಾಪ್ ಹೊಂದಿದ್ದ ಸುದೀಪ್ 

14-10-25 11:24 am       HK News Desk   ಕರ್ನಾಟಕ

ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಸೋಮವಾರ ತಡರಾತ್ರಿ ಬಾರ್ಕೂರ ಬಳಿ ರೈಲ್ವೇ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಲಿಸುತ್ತಿರುವ ರೈಲಿನಡಿ ಹಾರಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ಕಾರ್ಕಳ, ಅ.14 : ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (40) ಸೋಮವಾರ ತಡರಾತ್ರಿ ಬಾರ್ಕೂರ ಬಳಿ ರೈಲ್ವೇ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಲಿಸುತ್ತಿರುವ ರೈಲಿನಡಿ ಹಾರಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ಸುದೀಪ್ ಹೆಬ್ರಿಯ ನಿವಾಸಿಯಾಗಿದ್ದು, ಹೆಬ್ರಿ ಪೇಟೆಯಲ್ಲಿ ವೈನ್ ಶಾಪ್ ನಡೆಸುತ್ತಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸುದೀಪ್ ಭಂಡಾರಿಯವರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ಸಹೋದರಿಯನ್ನ ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ಪೊಲೀಸರು ಧಾವಿಸಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದು, ಮೃತದೇಹ ಶವ ಪರೀಕ್ಷೆಗೆ ಕಳುಹಿಸಲಾಗಿದೆ. 

ಹಣಕಾಸು ಮುಗ್ಗಟ್ಟಿನ ಕಾರಣವೋ, ಬೇರಾವುದೋ ಕಾರಣ ಇದೆಯೋ ಎನ್ನುವ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬರಬೇಕು. ಯಾವುದೇ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿಲ್ಲ. ನಿನ್ನೆ ತಡರಾತ್ರಿ ರೈಲು ಬರುತ್ತಿದ್ದಾಗಲೇ ಹಾರಿ ಸಾವಿಗೆ ಶರಣಾಗಿದ್ದಾರೆ. ರಾಜಕೀಯದಲ್ಲಿ ಇರಲಿಲ್ಲ. ಸ್ವಲ್ಪ ಹಣಕಾಸು ತೊಂದರೆ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

Sudeep Bhandary (40), son of late former Karkala MLA Gopal Bhandary, died by suicide late Monday night after reportedly jumping in front of a moving train near Barkur. Sudeep, a resident of Hebri, owned a wine shop in Hebri town.
The exact reason for the suicide remains unknown, and no death note was found at the scene. Police suspect financial distress may have been a factor.