ಬ್ರೇಕಿಂಗ್ ನ್ಯೂಸ್
10-11-25 02:58 pm HK News Desk ಕರ್ನಾಟಕ
ಕಾರವಾರ, ನ.10 : ರಾಜ್ಯ ಸರ್ಕಾರದ ಪ್ರಸ್ತಾವಿತ ಎರಡು ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರ ನಿರಾಕರಣೆ ಮಾಡಿದೆ. ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.
ಪರಿಸರ ಕಾಳಜಿ ಮತ್ತು ಅರಣ್ಯ ಕಾನೂನುಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಸದಸ್ಯರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪ್ರಸ್ತಾವನೆ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 27 ರಂದು ನಡೆದ ಸಮಿತಿಯ 11ನೇ ಸಭೆಯ ನಡಾವಳಿಗಳ ಪ್ರಕಾರ, ಪ್ರಸ್ತಾವಿತ ಯೋಜನಾ ಪ್ರದೇಶವು ಪಶ್ಚಿಮ ಘಟ್ಟಗಳ ಮಧ್ಯ ಇರುವ ಶರಾವತಿ ಕಣಿವೆಯ ಸಿಂಹ ಬಾಲದ ಮಕಾಕ್ ಅಭಯಾರಣ್ಯದಲ್ಲಿ ಇದೆ. ಯೋಜನೆಗೆ 15 ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಅವುಗಳಲ್ಲಿ ಹಲವು ಮರಗಳಿಗೆ ಜಾಗತಿಕ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟಗಳೇ ಮೂಲವಾಗಿವೆ. ಅರಣ್ಯ ಪ್ರದೇಶಗಳು 0.5 ಮತ್ತು 0.2 ರ ಮೇಲಾವರಣ ಸಾಂದ್ರತೆಯೊಂದಿಗೆ "ಪರಿಸರ-ವರ್ಗ 1 ಮತ್ತು ಪರಿಸರ- ವರ್ಗ 3" ಅಡಿಯಲ್ಲಿ ಬರುತ್ತವೆ ಎಂದು ಸಮಿತಿ ಹೇಳಿದೆ.
ಅಲ್ಲದೆ, ಈ ಪ್ರದೇಶವು ಉಷ್ಣ ವಲಯದ ಆರ್ದ್ರ ನಿತ್ಯ ಹರಿದ್ವರ್ಣ, ಅರೆ-ನಿತ್ಯಹರಿದ್ವರ್ಣ ಮತ್ತು ಶೋಲಾ ಹುಲ್ಲುಗಾವಲಿನ ಕಾಡನ್ನು ಹೊಂದಿದೆ. ಇವು ಹೆಚ್ಚು ದುರ್ಬಲ ಮತ್ತು ಸಂಕೀರ್ಣ ಪರಿಸರ ವ್ಯವಸ್ಥೆಗಳಾಗಿವೆ. ಇವುಗಳನ್ನು ನಾಶಪಡಿಸಿದರೆ, ಮತ್ತೆ ಅವುಗಳ ಮೂಲ ಸ್ಥಿತಿಯನ್ನು ಪುನಃ ಸ್ಥಾಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸಿಂಹ ಬಾಲದ ಕೋತಿಗಳ ಉಳಿವಿಗೆ ಅಪಾಯ
ಪ್ರಸ್ತಾಪಿತ ಯೋಜನಾ ಪ್ರದೇಶದಲ್ಲಿ ಸಿಂಹ ಬಾಲದ ಕೋತಿ, ಹುಲಿ, ಚಿರತೆ, ಸ್ಲಾತ್ ಕರಡಿ, ಕಾಡು ನಾಯಿಗಳು, ಕಾಳಿಂಗ ಸರ್ಪ, ಮಲಬಾರ್ ದೈತ್ಯ ಅಳಿಲು ಮತ್ತು ಇತರ ಅಪರೂಪದ ಪ್ರಭೇದಗಳ ಜೀವಿಗಳಿವೆ. ಶರಾವತಿ ಕಣಿವೆಯ ಅಭಯಾರಣ್ಯದಲ್ಲಿ 730 ಸಿಂಹ ಬಾಲದ ಕೋತಿಗಳು ಇರುವುದನ್ನು ವನ್ಯಜೀವಿ ಗಣತಿ ಉಲ್ಲೇಖಿಸಿತ್ತು ಮತ್ತು ಆವಾಸಸ್ಥಾನಕ್ಕಾಗುವ ಹಾನಿ ಸಿಂಹ ಬಾಲದ ಕೋತಿಗಳ ಉಳಿವಿಗೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂದು ಸಮಿತಿ ಎಚ್ಚರಿಸಿದೆ.
ಯೋಜನೆಯ ಪ್ರತಿಪಾದಕರು ಪರಿಹಾರವಾಗಿ ನೀಡುವ ಅರಣ್ಯೀಕರಣ ಸ್ಥಳವು ಸಿಂಹ ಬಾಲದ ಕೋತಿಗಳ ಆವಾಸ ಸ್ಥಾನದ ನಷ್ಟವನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ ಮತ್ತು ಆರ್ದ್ರ ನಿತ್ಯಹರಿದ್ವರ್ಣ ಕಾಡುಗಳು ಸಂಕೀರ್ಣ ಪರಿಸರ ವ್ಯವಸ್ಥೆಗಳಾಗಿವೆ ಮತ್ತು ಅವುಗಳನ್ನು ಪುನರಾವರ್ತಿಸುವುದು ಕಷ್ಟ ಎಂದು ಸಮಿತಿ ತಿಳಿಸಿದೆ.
The Central Government has rejected Karnataka’s proposal for the 2,000 MW Sharavathi Pumped Storage Hydroelectric Project, citing serious environmental and forest law violations. The project would have required the diversion of 54 hectares of dense forest in the Western Ghats, one of the world’s key biodiversity hotspots.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm