ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ ಜತೆ ಹೊಟ್ಟೆ ತುಂಬ ಮಾತುಕತೆ ಮಾಡಿದ್ದಾರೆ ; ಒಂದು ನಿರ್ಣಯಕ್ಕೆ ಬಂದಿದ್ದಾರೆ, ಯಾರಿಗೂ ಗೊತ್ತಾಗಿಲ್ಲ ;  ದೇಶಪಾಂಡೆ

01-12-25 08:28 pm       HK News Desk   ಕರ್ನಾಟಕ

''ಮುಖ್ಯಮಂತ್ರಿ ಬದಲಾವಣೆ ಗೊಂದಲ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಇಬ್ಬರೂ ಕುಳಿತು ಮಾತನಾಡಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಆ ನಿರ್ಣಯ ಏನೆಂಬುದು ನಮಗ್ಯಾರಿಗೂ ಗೊತ್ತಾಗಿಲ್ಲ'' ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಸ್ಪಷ್ಟಪಡಿಸಿದರು.

ಶಿರಸಿ, ಡಿ 01 : ''ಮುಖ್ಯಮಂತ್ರಿ ಬದಲಾವಣೆ ಗೊಂದಲ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ಇಬ್ಬರೂ ಕುಳಿತು ಮಾತನಾಡಿ ಒಂದು ನಿರ್ಣಯಕ್ಕೆ ಬಂದಿದ್ದಾರೆ. ಆ ನಿರ್ಣಯ ಏನೆಂಬುದು ನಮಗ್ಯಾರಿಗೂ ಗೊತ್ತಾಗಿಲ್ಲ'' ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ದೇಶಪಾಂಡೆ ಸ್ಪಷ್ಟಪಡಿಸಿದರು.

 ''ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ ಜತೆ ಹೊಟ್ಟೆ ತುಂಬ ಮಾತುಕತೆ ಮಾಡಿದ್ದಾರೆ. ಯಾವುದೋ ಒಂದು ಹೊಂದಾಣಿಕೆಗೂ ಬಂದಿದ್ದಾರೆ. ಈ ವಿಷಯವಾಗಿ ಪೂರ್ಣವಿರಾಮ ಬಿದ್ದಿದೆ. ಹೀಗಿರುವಾಗ ಚರ್ಚೆ ಮಾಡುವ ಅಗತ್ಯ ಇಲ್ಲ'' ಎಂದರು.

''ರಾಜ್ಯದಲ್ಲಿಅಭಿವೃದ್ಧಿಯಾಗುತ್ತಿಲ್ಲಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅಭಿವೃದ್ಧಿಯಾಗುತ್ತಿದ್ದು, ಜನರ ಅಪೇಕ್ಷೆ ಇನ್ನೂ ಹೆಚ್ಚಿರಬಹುದು. ಎಲ್ಲ ಶಾಸಕರಿಗೂ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳ ಜತೆ ಜನರನ್ನು ಕಷ್ಟದಿಂದ ದೂರ ಮಾಡಲು ಐದು ಗ್ಯಾರಂಟಿ ಯೋಜನೆ ಕಾಂಗ್ರೆಸ್‌ ನೀಡುವ ಪ್ರಯತ್ನವನ್ನು ಕಾಂಗ್ರೆಸ್‌ ಸರಕಾರ ಮಾಡಿದೆ ಎಂದರು.

State Administrative Reforms Commission Chairman Deshpande stated that Chief Minister Siddaramaiah and Deputy Chief Minister D.K. Shivakumar held an extensive breakfast meeting and arrived at a decision regarding the CM change speculation, though the outcome is unknown to others.