ನಾಯಕತ್ವ ಗೊಂದಲ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮಾತೇ ಫೈನಲ್​ ; ಸಿದ್ದು ಪರ ದಿನೇಶ ಗುಂಡೂರಾವ್ ಬ್ಯಾಟಿಂಗ್..!

12-12-25 01:36 pm       HK News Desk   ಕರ್ನಾಟಕ

ಎಲ್ಲಾ ಗೊಂದಲಗಳ ಕುರಿತು ಈಗಾಗಲೇ ಸಿಎಂ, ಡಿಸಿಎಂ ಮಾತನಾಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಹೇಳಿಕೆ ಕೊಡುವ ಸಂದರ್ಭದಲ್ಲಿ ಬಹುಶಃ ಇದಕ್ಕಿಂತ ಬೇರೆ ಮಾರ್ಗದರ್ಶನ ನಮಗೆ ಬೇಕಿಲ್ಲ. ಮುಖ್ಯಮಂತ್ರಿಗಳು ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಅದು ನಮಗೂ ಕೂಡ ಮಾರ್ಗದರ್ಶನ ಆಗಿದೆ. ಅದೇ ನಮಗೆ ಅಂತಿಮ ಎನ್ನುವ ಮೂಲಕ ಸಿಎಂ ಪರ ಸಚಿವ ದಿನೇಶ ಗುಂಡೂರಾವ್ ಬ್ಯಾಟಿಂಗ್ ಬೀಸಿದರು.

ಬೆಳಗಾವಿ, ಡಿ 12 : ಎಲ್ಲಾ ಗೊಂದಲಗಳ ಕುರಿತು ಈಗಾಗಲೇ ಸಿಎಂ, ಡಿಸಿಎಂ ಮಾತನಾಡಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿಯುತ ಹೇಳಿಕೆ ಕೊಡುವ ಸಂದರ್ಭದಲ್ಲಿ ಬಹುಶಃ ಇದಕ್ಕಿಂತ ಬೇರೆ ಮಾರ್ಗದರ್ಶನ ನಮಗೆ ಬೇಕಿಲ್ಲ. ಮುಖ್ಯಮಂತ್ರಿಗಳು ಅತ್ಯಂತ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ಅದು ನಮಗೂ ಕೂಡ ಮಾರ್ಗದರ್ಶನ ಆಗಿದೆ. ಅದೇ ನಮಗೆ ಅಂತಿಮ ಎನ್ನುವ ಮೂಲಕ ಸಿಎಂ ಪರ ಸಚಿವ ದಿನೇಶ ಗುಂಡೂರಾವ್ ಬ್ಯಾಟಿಂಗ್ ಬೀಸಿದರು.

ಡಿನ್ನರ್ ಮೀಟಿಂಗ್​​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅದೆಲ್ಲಾ ನನಗೆ ಗೊತ್ತಿಲ್ಲ. ನಾನು ಡಿನ್ನರ್ ಪಾರ್ಟಿಗೆ ಹೋಗಿಲ್ಲ. ಸಂಪುಟ ಸಭೆ ಇತ್ತು‌. ಹಾಗಾಗಿ, ನಾನು ಹೋಗಿಲ್ಲ. ಯಾವಾಗಲೂ ಕೂಡ ಇಲ್ಲಿ ಡಿನ್ನರ್ ಪಾರ್ಟಿ ನಡೆಯುತ್ತಿರುತ್ತದೆ ಎಂದರು.

ಬೆಂಗಳೂರಿನಲ್ಲಿ ಆಂಬುಲೇನ್ಸ ಸೇವೆಗೆ 20 ಸಾವಿರ ರೂ. ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ಎಲ್ಲೋ ಒಂದು ಕಡೆ ಆ ರೀತಿ ಘಟನೆ ಆಗಿರಬಹುದು. ಅದರೂ ಪರಿಶೀಲಿಸುತ್ತೇನೆ. ಗೊತ್ತಿಲ್ಲದೇ ಮಾತನಾಡಲು ಆಗುವುದಿಲ್ಲ. 108 ಆಂಬ್ಯುಲೆನ್ಸ್​ ವ್ಯವಸ್ಥೆಯನ್ನು ದೇಶದಲ್ಲೆ ಪ್ರಥಮ ಬಾರಿಗೆ ನಾವೇ ವಹಿಸಿಕೊಳ್ಳಲು ಈಗಾಗಲೇ ಕ್ರಮ ವಹಿಸಿದ್ದೇವೆ ಎಂದು ದಿನೇಶ ಗುಂಡೂರಾವ್ ತಿಳಿಸಿದರು.

ಬರುವ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಪೂರ್ತಿಯಾಗಿ 108 ಆಂಬ್ಯುಲೆನ್ಸ್​ಗಳನ್ನು ಸರ್ಕಾರವೇ ನಡೆಸಲಿದೆ. ನೇಮಕಾತಿ ಮಾಡಿಕೊಳ್ಳುತ್ತೇವೆ. ಆಗ ಎಲ್ಲವೂ ಕೂಡ ನಮ್ಮ ನಿಯಂತ್ರಣದಲ್ಲಿ ಇರಲಿದೆ. ಹೊಣೆಗಾರಿಕೆ ಮತ್ತು ಜವಾಬ್ದಾರಿ‌ ನಮ್ಮ ಆರೋಗ್ಯ ಇಲಾಖೆ ಮೇಲೆ ಇರುತ್ತದೆ. ಖಾಸಗಿ ಏಜೆನ್ಸಿಗಳು ಇರುವುದಿಲ್ಲ ಎಂದು ದಿನೇಶ ಗುಂಡೂರಾವ್ ಸ್ಪಷ್ಟನೆ ನೀಡಿದರು.

Commenting on the ongoing discussion around leadership confusion within the government, Karnataka Health Minister Dinesh Gundu Rao strongly backed Chief Minister Siddaramaiah, stating that the CM’s guidance is final.