ಬ್ರೇಕಿಂಗ್ ನ್ಯೂಸ್
05-01-26 10:00 pm HK News Desk ಕರ್ನಾಟಕ
ಮೈಸೂರು, ಜ.5: ಜನರ ಆಶೀರ್ವಾದದಿಂದ ದೇವರಾಜ ಅರಸು ದಾಖಲೆ ಬ್ರೇಕ್ ಮಾಡುತ್ತಿದ್ದೇನೆ. ಆದರೆ ಅರಸು ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ. ದೇವರಾಜ ಅರಸು ಕೂಡ ನಮ್ಮ ಮೈಸೂರು ಜಿಲ್ಲೆಯವರು. ಅವರ ದಾಖಲೆ ಮುರಿಯುತ್ತಿರುವುದು ಜನರ ಆಶೀರ್ವಾದದಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕವಾಗಿ ಅರಸು ಹಿಂದುಳಿದವರಲ್ಲ. ಅರಸು ಜನಾಂಗದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು. ಅವರದ್ದು ಸಾಮಾಜಿಕವಾಗಿ ಮುಂದುವರಿದ ಜನಾಂಗ, ನನ್ನದು ಸಮಾಜದಲ್ಲಿ ತಳ ಸಮುದಾಯ. ನನಗೂ ಅವರಿಗೂ ಹೋಲಿಕೆ ಸಲ್ಲದು. ಸನ್ನಿವೇಶ ಬಂತು ನಾನು ಇಲ್ಲಿ ತನಕ ಬಂದಿದ್ದೇನೆ. 1983ರಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದೆ. ಜನರೇ ದುಡ್ಡು ಕೊಟ್ಟು ವೋಟ್ ಹಾಕಿದ್ರು. ದೇವರಾಜ ಅರಸು ಸಿಎಂ ಆಗಿದ್ದರು. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಹಿಂದಿನ ಕಾಲಕ್ಕೆ ಹೋಲಿಕೆ ಮಾಡೋದಕ್ಕು ಆಗಲ್ಲ ಎಂದು ಹೇಳಿದರು.
ದಾಖಲೆ ಬಗ್ಗೆ ಕೇಳಿದ ಪ್ರಶ್ನೆಗೆ, ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ. ಮುಂದೆ ಯಾರಾದ್ರೂ ಈ ದಾಖಲೆಯನ್ನೂ ಮುರಿಯಬಹುದು. ಕ್ರಿಕೆಟ್ ನಲ್ಲಿ ಸಚಿನ್ ರೆಕಾರ್ಡ್ ಬ್ರೇಕ್ ಆಗಲ್ಲ ಅಂದ್ರು. ವಿರಾಟ್ ಬ್ರೇಕ್ ಮಾಡಿದ್ರಲ್ವಾ. ಮುಂದೆ ನನಗಿಂತ ಜಾಸ್ತಿ ಸಿಎಂ ಆಗೋರು, ಬಜೆಟ್ ಮಂಡನೆ ಮಾಡೋರು ಬರಬಹುದು ಎಂದರು.
ಸಾಧನಾ ಸಮಾವೇಶ ಬಗ್ಗೆ ಯೋಚನೆ ಮಾಡಿಲ್ಲ. ಕೃಷ್ಣ ಭೈರೇಗೌಡ ಕಾರ್ಯಕ್ರಮ ಮಾಡ್ತೀನಿ ಅಂತ ಹೇಳ್ತಿದ್ರು ಅಷ್ಟೇ ಎಂದರು. ಸಂಪುಟ ಪುನಾರಚನೆ ಆಗ್ಬೇಕು. ಅದರ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇನೆ. ಜನವರಿಯಲ್ಲಿ ಸಭೆ ಕರೆಯುತ್ತೇನೆ ಅಂದಿದ್ರು. ಈಗ ಯಾವಾಗ ಕರೆದ್ರು ನಾನು ಹೋಗುತ್ತೇನೆ ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗ್ಬೇಕು ಅನ್ನೋ ಬಿಜೆಪಿ ಒತ್ತಾಯದ ಬಗ್ಗೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವರದಿ ಬರಲಿ, ಬಳಿಕ ಯಾವ ತನಿಖೆ ಮಾಡಬೇಕು ಎಂದು ತೀರ್ಮಾನ ಮಾಡ್ತೀನಿ ಎಂದರು.
Karnataka CM Siddaramaiah said that although he is set to break former CM Devaraj Aras record for the longest tenure, comparisons between them are unfair. Siddaramaiah stated that Aras belonged to a socially advanced community, whereas he hails from a lower social strata, and the political eras are entirely different.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am