ಬ್ರೇಕಿಂಗ್ ನ್ಯೂಸ್
05-01-26 10:00 pm HK News Desk ಕರ್ನಾಟಕ
ಮೈಸೂರು, ಜ.5: ಜನರ ಆಶೀರ್ವಾದದಿಂದ ದೇವರಾಜ ಅರಸು ದಾಖಲೆ ಬ್ರೇಕ್ ಮಾಡುತ್ತಿದ್ದೇನೆ. ಆದರೆ ಅರಸು ಅವರೊಂದಿಗೆ ನನ್ನನ್ನು ಹೋಲಿಕೆ ಮಾಡಬೇಡಿ. ದೇವರಾಜ ಅರಸು ಕೂಡ ನಮ್ಮ ಮೈಸೂರು ಜಿಲ್ಲೆಯವರು. ಅವರ ದಾಖಲೆ ಮುರಿಯುತ್ತಿರುವುದು ಜನರ ಆಶೀರ್ವಾದದಿಂದ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕವಾಗಿ ಅರಸು ಹಿಂದುಳಿದವರಲ್ಲ. ಅರಸು ಜನಾಂಗದಲ್ಲಿ ಜನಸಂಖ್ಯೆ ಕಡಿಮೆ ಇರಬಹುದು. ಅವರದ್ದು ಸಾಮಾಜಿಕವಾಗಿ ಮುಂದುವರಿದ ಜನಾಂಗ, ನನ್ನದು ಸಮಾಜದಲ್ಲಿ ತಳ ಸಮುದಾಯ. ನನಗೂ ಅವರಿಗೂ ಹೋಲಿಕೆ ಸಲ್ಲದು. ಸನ್ನಿವೇಶ ಬಂತು ನಾನು ಇಲ್ಲಿ ತನಕ ಬಂದಿದ್ದೇನೆ. 1983ರಲ್ಲಿ ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದೆ. ಜನರೇ ದುಡ್ಡು ಕೊಟ್ಟು ವೋಟ್ ಹಾಕಿದ್ರು. ದೇವರಾಜ ಅರಸು ಸಿಎಂ ಆಗಿದ್ದರು. ಆ ಕಾಲವೇ ಬೇರೆ, ಈ ಕಾಲವೇ ಬೇರೆ. ಹಿಂದಿನ ಕಾಲಕ್ಕೆ ಹೋಲಿಕೆ ಮಾಡೋದಕ್ಕು ಆಗಲ್ಲ ಎಂದು ಹೇಳಿದರು.
ದಾಖಲೆ ಬಗ್ಗೆ ಕೇಳಿದ ಪ್ರಶ್ನೆಗೆ, ರೆಕಾರ್ಡ್ ಇರೋದೇ ಬ್ರೇಕ್ ಮಾಡೋಕೆ. ಮುಂದೆ ಯಾರಾದ್ರೂ ಈ ದಾಖಲೆಯನ್ನೂ ಮುರಿಯಬಹುದು. ಕ್ರಿಕೆಟ್ ನಲ್ಲಿ ಸಚಿನ್ ರೆಕಾರ್ಡ್ ಬ್ರೇಕ್ ಆಗಲ್ಲ ಅಂದ್ರು. ವಿರಾಟ್ ಬ್ರೇಕ್ ಮಾಡಿದ್ರಲ್ವಾ. ಮುಂದೆ ನನಗಿಂತ ಜಾಸ್ತಿ ಸಿಎಂ ಆಗೋರು, ಬಜೆಟ್ ಮಂಡನೆ ಮಾಡೋರು ಬರಬಹುದು ಎಂದರು.
ಸಾಧನಾ ಸಮಾವೇಶ ಬಗ್ಗೆ ಯೋಚನೆ ಮಾಡಿಲ್ಲ. ಕೃಷ್ಣ ಭೈರೇಗೌಡ ಕಾರ್ಯಕ್ರಮ ಮಾಡ್ತೀನಿ ಅಂತ ಹೇಳ್ತಿದ್ರು ಅಷ್ಟೇ ಎಂದರು. ಸಂಪುಟ ಪುನಾರಚನೆ ಆಗ್ಬೇಕು. ಅದರ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತನಾಡುತ್ತೇನೆ. ಜನವರಿಯಲ್ಲಿ ಸಭೆ ಕರೆಯುತ್ತೇನೆ ಅಂದಿದ್ರು. ಈಗ ಯಾವಾಗ ಕರೆದ್ರು ನಾನು ಹೋಗುತ್ತೇನೆ ಎಂದರು.
ಬಳ್ಳಾರಿ ಪ್ರಕರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗ್ಬೇಕು ಅನ್ನೋ ಬಿಜೆಪಿ ಒತ್ತಾಯದ ಬಗ್ಗೆ, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ವರದಿ ಬರಲಿ, ಬಳಿಕ ಯಾವ ತನಿಖೆ ಮಾಡಬೇಕು ಎಂದು ತೀರ್ಮಾನ ಮಾಡ್ತೀನಿ ಎಂದರು.
Karnataka CM Siddaramaiah said that although he is set to break former CM Devaraj Aras record for the longest tenure, comparisons between them are unfair. Siddaramaiah stated that Aras belonged to a socially advanced community, whereas he hails from a lower social strata, and the political eras are entirely different.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am