ಬ್ರೇಕಿಂಗ್ ನ್ಯೂಸ್
17-02-26 02:53 pm HK News Desk ಕರ್ನಾಟಕ
ಬೆಂಗಳೂರು, ಫೆ.17: ದೇಶದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಪ್ರಭಾವ ಬೀರಬಲ್ಲ ಮಹತ್ವದ ಆದೇಶವೊಂದನ್ನು ದೆಹಲಿ ಹೈಕೋರ್ಟ್ ಹೊರಡಿಸಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಸಂಬಂಧಿಸಿದ 134 ಚಲನಚಿತ್ರ ಹಾಡುಗಳ ಹಕ್ಕು ವಿಚಾರದಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
1976–2001ರ ಅವಧಿಯಲ್ಲಿ ರಚಿಸಲಾದ 134 ಚಿತ್ರಗಳ ಹಾಡುಗಳ ಹಕ್ಕು ತಮ್ಮದೇ ಎಂದು ಸರಿಗಮ ಕಂಪನಿ ಹೇಳಿಕೊಂಡಿತ್ತು. ಇಳಯರಾಜಾ ಸಂಗೀತ ಸಂಯೋಜಿಸಿದ 134 ಚಲನಚಿತ್ರಗಳ ಸಂಗೀತ ಹಾಗೂ ಧ್ವನಿಮುದ್ರಣ ಹಕ್ಕುಗಳನ್ನು ನಿರ್ಮಾಪಕರೊಂದಿಗೆ ಮಾಡಿದ ಔಪಚಾರಿಕ ಒಪ್ಪಂದಗಳ ಮೂಲಕ ವಿಶ್ವವ್ಯಾಪಿ ಮತ್ತು ಶಾಶ್ವತವಾಗಿ ಪಡೆದಿದ್ದೇವೆ ಎಂದು ಸರಿಗಮ ನ್ಯಾಯಾಲಯಕ್ಕೆ ತಿಳಿಸಿತ್ತು.
ಆದರೆ ಇಳಯರಾಜಾ ಈ ಹಾಡುಗಳನ್ನು ಅಮೆಜಾನ್ ಮ್ಯೂಸಿಕ್, ಐಟ್ಯೂನ್ಸ್ ಮತ್ತು ಜಿಯೋಸಾವನ್ ಸೇರಿದಂತೆ ಡಿಜಿಟಲ್ ವೇದಿಕೆಗಳಲ್ಲಿ ಅಪ್ಲೋಡ್ ಮಾಡಿ ತಮ್ಮದೇ ಹಕ್ಕು ಎಂದು ಹೇಳಿಕೊಳ್ಳುತ್ತಿರುವುದು ಕಾನೂನುಬಾಹಿರ ಎಂದು ಸಂಸ್ಥೆ ವಾದಿಸಿತ್ತು.
ಸರಿಗಮ ಪರ ವಕೀಲರು 1957ರ ಹಕ್ಕುಸ್ವಾಮ್ಯ ಕಾಯಿದೆಯ ಪ್ರಕಾರ ಚಲನಚಿತ್ರಕ್ಕಾಗಿ ರಚಿಸಲಾದ ಸಂಗೀತದ ಮೊದಲ ಮಾಲೀಕರು ನಿರ್ಮಾಪಕರೇ ಆಗುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಕೆಟೇಲಾ ಸರಿಗಮದ ವಾದ ಒಪ್ಪಿಕೊಂಡು, ತಡೆಯಾಜ್ಞೆ ನೀಡದಿದ್ದರೆ ಕಂಪನಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇಳಯರಾಜಾ ಹಾಗೂ ಅವರ ಪ್ರತಿನಿಧಿಗಳು ಸಂಬಂಧಿತ ಹಾಡುಗಳನ್ನು ಬಳಸಬಾರದು ಅಥವಾ ಪರವಾನಗಿ ನೀಡಬಾರದು ಎಂದು ಆದೇಶಿಸಿದ್ದಾರೆ.
ಈಗಾಗಲೇ ಜನಪ್ರಿಯ ತಮಿಳು ಹಾಡು “ಎನ್ ಇನಿಯಾ ಪೊನ್ ನಿಲವೇ” ಬಳಕೆ ಕುರಿತಾಗಿ ಇಳಯರಾಜಾ ಮತ್ತು ಸರಿಗಮಾ ನಡುವೆ ವಿವಾದ ನಡೆದಿತ್ತು. ಅಘಾಥಿಯಾ ಚಿತ್ರದ ಬಳಕೆಗೆ ಸಂಬಂಧಿಸಿ ನ್ಯಾಯಾಲಯ ಮೊದಲು ನಿರ್ಮಾಪಕರು ಸರಿಗಮಾದಿಂದ ಪರವಾನಗಿ ಪಡೆಯದೆ ಹಾಡನ್ನು ಬಳಸಬಾರದು ಎಂದು ಹೇಳಿತ್ತು. ನಂತರ ನಿರ್ಮಾಪಕರ ಹೂಡಿಕೆ ಪರಿಗಣಿಸಿ, ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಬಳಿ 30 ಲಕ್ಷ ರೂ. ಠೇವಣಿ ಇಡುವ ಷರತ್ತಿನೊಂದಿಗೆ ಬಳಕೆ ಮಾಡಲು ಅವಕಾಶ ನೀಡಲಾಗಿತ್ತು.
ನ್ಯಾಯಾಲಯದ ಆದೇಶ ಪ್ರಕಾರ, ಇಳಯರಾಜಾ ಅಥವಾ ಅವರ ಪರವಾಗಿ ಕಾರ್ಯ ನಿರ್ವಹಿಸುವ ಸಹಭಾಗಿಗಳು, ಪ್ರತಿನಿಧಿಗಳು ಅಥವಾ ಲೈಸೆನ್ಸಿಗಳು ಸರಿಗಮ ವಶದಲ್ಲಿರುವ 134 ಚಿತ್ರಗಳ ಧ್ವನಿಮುದ್ರಣ ಹಾಗೂ ಸಾಹಿತ್ಯ-ಸಂಗೀತ ಕೃತಿಗಳ ಮೇಲೆ ಯಾವುದೇ ಮಾಲೀಕತ್ವದ ಹಕ್ಕು ಹೊಂದಿದ್ದೇವೆ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಪ್ರಕರಣ ಸಂಗೀತ ಕಾಪಿರೈಟ್ ಹಕ್ಕುಗಳ ಕುರಿತು ಚಿತ್ರೋದ್ಯಮ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ವಲಯದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm