ಬ್ರೇಕಿಂಗ್ ನ್ಯೂಸ್
04-05-26 06:27 pm HK News Staffer ಕರ್ನಾಟಕ
ಕಾಸರಗೋಡು, ಮೇ 4: ಭಾರೀ ಪೈಪೋಟಿ ನಿರೀಕ್ಷಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್ ಎರಡನೇ ಬಾರಿಗೆ ಭಾರೀ ಅಂತರದ ಜಯ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಧ್ರುವೀಕರಣದಿಂದಾಗಿ ಅಶ್ರಫ್ ಅವರು 29252 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.
ನಿಕಟ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ 67696 ಮತಗಳನ್ನು ಪಡೆದಿದ್ದರೆ, ಸಿಪಿಎಂ ಪಕ್ಷದ ಕೆ.ಆರ್ ಜಯಾನಂದ್ ಕೇವಲ 21212 ಮತಗಳನ್ನು ಪಡೆದು ಹೀನಾಯ ಸೋಲನುಭವಿಸಿದ್ದಾರೆ. ಉಳಿದಂತೆ, ಪಕ್ಷೇತರ ಸ್ಪರ್ಧಿಸಿದ್ದ ಜೀನ್ ಲವಿನಾ ಮೊಂತೇರೊ 523, ಕಣ್ಣೂರು ಅಬ್ದಲ್ಲ ಮಾಸ್ಟರ್ 283, ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸಂಜೀವ 213 ಮತ ಪಡೆದಿದ್ದಾರೆ.

ಈ ಹಿಂದೆ ಮಂಜೇಶ್ವರದಲ್ಲಿ ಎರಡು ಬಾರಿ ಬಿಜೆಪಿಯ ಸುರೇಂದ್ರನ್ ಅತಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರಿಂದ ಈ ಬಾರಿ ಗೆಲುವಿನ ಭರವಸೆ ಹುಟ್ಟಿಸಿದ್ದರು. ಇದಕ್ಕಾಗಿ ಬಿಜೆಪಿಯಿಂದ ಭಾರೀ ಶ್ರಮ ಹಾಕಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ತಿಂಗಳ ಕಾಲ ಪ್ರಚಾರದಲ್ಲಿ ತೊಡಗಿದ್ದರು. 2016ರಲ್ಲಿ 89 ಮತಗಳಿಂದ ಸೋತಿದ್ದರೆ, 2021ರಲ್ಲಿ ಸುರೇಂದ್ರನ್ 645 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಈ ಬಾರಿ ಮತ ಪರಿಷ್ಕರಣೆ ಬಳಿಕ ನಡೆದ ಚುನಾವಣೆಯಲ್ಲಿ ಕೇರಳದಲ್ಲಿ ಮಂಜೇಶ್ವರ, ಕಾಸರಗೋಡು, ತಿರುವನಂತಪುರಂ, ಪಾಲಕ್ಕಾಡ್ ಸೇರಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಭರವಸೆ ಹುಟ್ಟಿಸಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ದಿಗಿಲಾಗುವಂತೆ ಮತ ಗಳಿಕೆ ಪ್ರಮಾಣವೇ ಭಾರೀ ಕಡಿಮೆಯಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಬೀಳುತ್ತಿದ್ದ ಮತಗಳೇ ಖೋತಾ ಆಗಿದ್ದು ಈವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಮತಗಳನ್ನು ಗಳಿಸಲಷ್ಟೆ ಎಡರಂಗ ಶಕ್ತವಾಗಿದೆ. ಬಿಜೆಪಿಗೂ ಸಾಂಪ್ರದಾಯಿಕ ಮತಗಳಷ್ಟೇ ಬಿದ್ದಿದ್ದು ಹೆಚ್ಚುವರಿ ಸಾಧನೆಯಾಗದಿರುವುದು ಕಂಡುಬಂದಿದೆ.
15-05-26 10:30 pm
HK News Desk
ಮದ್ಯ ಪ್ರಿಯರಿಗೆ ಗುಡ್ನ್ಯೂಸ್ ; ಪ್ರೀಮಿಯಂ ಬಿಯರ್,...
15-05-26 09:56 pm
ಹಿಜಾಬ್ಗೆ ಗ್ರೀನ್ ಸಿಗ್ನಲ್; ಮತ್ತೆ ಭುಗಿಲೆದ್ದ ವಿವ...
14-05-26 10:19 am
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
16-05-26 10:13 pm
HK News Desk
ಗುಡುಗು - ಮಿಂಚಿನ ಬಿರುಗಾಳಿಗೆ ಉತ್ತರ ಪ್ರದೇಶದಲ್ಲಿ...
16-05-26 02:01 pm
ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ...
15-05-26 04:16 pm
ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ; ಮಿತವ್ಯ...
15-05-26 08:54 am
ಕೇರಳಕ್ಕೆ ವಿಡಿ ಸತೀಶನ್ ಹೊಸ ಮುಖ್ಯಮಂತ್ರಿ ; ರಾಹುಲ್...
14-05-26 12:36 pm
16-05-26 09:19 pm
HK News Staffer
ವಿಕಲಚೇತನ ಮಕ್ಕಳಿಗಾಗಿ ಉಡುಪಿಯಲ್ಲಿ ದೇಶದಲ್ಲೇ ಮೊದಲ...
16-05-26 09:16 pm
ಬಡ ಹಿಂದು ಮಹಿಳೆಯ ಪರ ನೆರವು ಕೇಳಿಕೊಂಡು ಬಂದ ಮುಸ್ಲಿ...
16-05-26 07:22 pm
ಮಂಗಳೂರು ಜೈಲಿನಲ್ಲಿ ಉಚಿತ ಕಾನೂನು ನೆರವು ಸೇವಾ ಕೇಂದ...
16-05-26 01:13 pm
ಉಳ್ಳಾಲದಲ್ಲಿ ಫಿಶ್ ಮೀಲ್ ಕ್ಯಾಂಟರ್ ಆಟಾಟೋಪ ; ರಸ್ತೆ...
14-05-26 10:48 pm
16-05-26 10:24 pm
HK News Desk
ಎನ್ಸಿಬಿ ಅಧಿಕಾರಿಗಳಿಂದ ಮುಂದ್ರಾ ಬಂದರು ಮೇಲೆ ದಾಳಿ...
16-05-26 07:25 pm
Bharat Bus fire, Mangalore: ಟೈರ್ ಸ್ಫೋಟ; ಹಾಸನದ...
16-05-26 04:46 pm
ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್ ಅಭ್ಯ...
16-05-26 11:46 am
ಮಾರುತಿ ಬ್ರೀಜಾ ಕಾರಿನಲ್ಲಿ ಹಿಂಸಾತ್ಮಕ ಗೋವು ಸಾಗಾಟ...
15-05-26 11:08 pm