ಬ್ರೇಕಿಂಗ್ ನ್ಯೂಸ್
26-03-21 12:46 pm Headline Karnataka News Network ಕರ್ನಾಟಕ
ಮಂಗಳೂರು, ಮಾ.26: ದಕ್ಷಿಣ ಕನ್ನಡ - ಕಾಸರಗೋಡು ಗಡಿಭಾಗ ವಿಟ್ಲ ಬಳಿಯ ಸಾಲೆತ್ತೂರಿನಲ್ಲಿ ನಿನ್ನೆ ತಡರಾತ್ರಿ ಪೊಲೀಸರು ಮತ್ತು ರೌಡಿಗಳ ಮಧ್ಯೆ ಜಟಾಪಟಿ ನಡೆದಿದೆ. ಮಂಜೇಶ್ವರ ಪೊಲೀಸರಿಂದ ತಪ್ಪಿಸಿಕೊಂಡು ಹೊರರಾಜ್ಯಕ್ಕೆ ಎಸ್ಕೇಪ್ ಆಗುತ್ತಿದ್ದ ರೌಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಮಂಜೇಶ್ವರದ ಮೀಯಪದವಿನಲ್ಲಿ ನಿನ್ನೆ ಒಬ್ಬರಿಗೆ ಗನ್ ತೋರಿಸಿ ಬೆದರಿಸಿದ ಪ್ರಕರಣ ನಡೆದಿತ್ತು. ಈ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮುರತ್ತಣೆ ಮತ್ತು ಮೀಯಪದವಿನ ನಡುವಿನ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ಮುರತ್ತಣೆ ಭಾಗದಲ್ಲಿ ರೌಡಿಗಳಾಗಿದ್ದು ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಆರೋಪಿಗಳು ಮೀಯಪದವಿನತ್ತ ಪರಾರಿಯಾಗಿದ್ದು ಅಲ್ಲಿ ಅಡ್ಡಹಾಕಿದಾಗ ಪೊಲೀಸರ ಮೇಲೆ ಫೈರ್ ಮಾಡಲು ಯತ್ನಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದ್ದು ಕಾರು ಬಿಟ್ಟು ನಾಲ್ವರು ಪರಾರಿಯಾಗಿದ್ದರು. ಬಳಿಕ ಕೆಲವು ಗೂಂಡಾಗಳು ಸೇರಿಕೊಂಡು ಕಾರನ್ನು ಮರಳಿ ವಶಕ್ಕೆ ಪಡೆಯಲು ಯತ್ನಿಸಿದ್ದು ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ಕಾರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದರೆ, ಹೆಚ್ಚುವರಿ ಪೊಲೀಸರನ್ನು ಕರೆಸಿ ಕಾರ್ಯಾಚರಣೆಗೆ ಮುಂದಾಗಿದ್ದರು.

ಬಳಿಕ ಕಾಸರಗೋಡು ಜಿಲ್ಲೆಯಿಂದ ಆರೋಪಿಗಳು ಪರಾರಿಯಾಗುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಹಾಕಲು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದರು. ಅದರಂತೆ, ವಿಟ್ಲ ಪೊಲೀಸರು ನಿನ್ನೆ ರಾತ್ರಿ ಸಾಲೆತ್ತೂರು ಬಳಿ ಬ್ಯಾರಿಕೇಡ್ ಇಟ್ಟು ರಸ್ತೆಗೆ ಅಡ್ಡ ಹಾಕಿದ್ದರು.
ಆರೋಪಿಗಳು ಹುಂಡೈ ಕಾರಿನಲ್ಲಿ ಆಗಮಿಸಿದ್ದು ನಿಲ್ಲಿಸಲು ಸೂಚಿಸಿದಾಗ ಲೆಕ್ಕಿಸದೆ ಬ್ಯಾರಿಕೇಡ್ ಗೆ ಡಿಕ್ಕಿಯಾಗಿಸಿದ್ದಾರೆ. ಈ ವೇಳೆ, ಬಂಧಿಸಲು ಯತ್ನಿಸಿದ ಎಸ್ಐ ವಿನೋದ್ ರೆಡ್ಡಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಆರೋಪಿಗಳು ಕಾರನ್ನು ಬ್ಯಾರಿಕೇಡ್ ಗೆ ಡಿಕ್ಕಿಯಾಗಿಸಿದ್ದರಿಂದ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆಂದು ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ ಘಟನೆ ವೇಳೆ ಎಸ್ಐ ವಿನೋದ್ ರೆಡ್ಡಿ ಮೇಲೆ ಫೈರ್ ಆಗಿಲ್ಲ ಎಂದು ಖಚಿತ ಪಡಿಸಿದ್ದಾರೆ.
ವಾರದ ಹಿಂದೆ, ಮಂಜೇಶ್ವರ ಠಾಣೆ ಪೊಲೀಸರು ರೌಡಿಸಂ ತೋರಿದ್ದ ನಾಲ್ವರನ್ನು ಬಂಧಿಸಿದ್ದರು. ಗನ್ ಹಿಡಿದು ಸ್ಟೇಟಸ್ ಹಾಕಿದ್ದಕ್ಕಾಗಿ ಬಂಧನ ನಡೆದಿತ್ತು. ಇದರ ಮುಂದುವರಿದ ಭಾಗ ಎನ್ನುವಂತೆ, ಅದೇ ತಂಡದ ಒಬ್ಬಾತ ಸ್ಥಳೀಯ ಒಬ್ಬರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದ. ಈ ಪ್ರಕರಣಕ್ಕೂ ಚುನಾವಣಾ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
In a shocking incident miscreants opened fire on Vittal sub-inspector (SI) Vinod Reddy. Four from Manjeshwar, Kasargod arrested regarding the incident.
04-03-26 11:51 am
HK News Staffer
ಬೆಂಗಳೂರಿನಲ್ಲಿ 10 ಕೋಟಿ ಮೌಲ್ಯದ ಬೃಹತ್ ಡ್ರಗ್ಸ್ ಪತ...
03-03-26 08:39 pm
ಜೀವನಾಂಶ ಕೇಳಿದ ಪತ್ನಿಯನ್ನು ಸುಪಾರಿ ಕೊಟ್ಟು ಕೊಲ್ಲಿ...
03-03-26 08:37 pm
ತಮ್ಮದೇ ಶಾಸಕರ ಫೋನ್ ಕದ್ದಾಲಿಕೆ - ಡಿಕೆಶಿ ಬಗ್ಗೆ ಎಚ...
03-03-26 08:25 pm
1ನೇ ತರಗತಿ ಸೇರಲು 6 ವರ್ಷ ಕಡ್ಡಾಯ; ಸರ್ಕಾರದ ವಯೋಮಿತ...
02-03-26 09:19 pm
04-03-26 12:58 pm
HK News Staffer
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
04-03-26 10:54 am
HK News Staffer
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm