ಬ್ರೇಕಿಂಗ್ ನ್ಯೂಸ್
04-04-21 04:55 pm Headline Karnataka News Network ಕರ್ನಾಟಕ
ಸುಳ್ಯ, ಎ.4: ಗುತ್ತಿಗಾರಿನ ನಾಲ್ಕೂರು ಗ್ರಾಮದ ಸಾಲ್ತಡಿ ಎಂಬಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಗೆ ಮನೆ ಕಟ್ಟಿಕೊಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಗುತ್ತಿಗಾರು ಗ್ರಾಪಂ ಮಾಜಿ ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು ಸ್ಪಷ್ಟನೆ ಕೊಟ್ಟಿದ್ದಾರೆ.


ನನ್ನ ಬಗ್ಗೆ ಆಗದವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಮನೆಯ ಕೆಲಸಕ್ಕಾಗಿ ಮೂರು ಲಕ್ಷ ಅಷ್ಟೇ ಹಣ ಬಿಡುಗಡೆಯಾಗಿತ್ತು. ಅದಕ್ಕೆ ಪಂಚಾಯತಿ ಕಚೇರಿಯಲ್ಲಿ ದಾಖಲೆಯೂ ಇದೆ. ಮೂರು ಲಕ್ಷ ರೂ. ಹಣದಲ್ಲಿ ಲಿಂಟಲ್ ವರೆಗೆ ಮನೆಯ ಕಾಮಗಾರಿ ನಡೆಸಲಾಗಿತ್ತು. ಇನ್ನು ಸುದ್ದಿಯಲ್ಲಿ ಬಿಂಬಿಸಿದಂತೆ, ನಾನು ಮನೆಯನ್ನು ಕಂಟ್ರಾಕ್ಟ್ ಪಡೆದು ನಿರ್ಮಿಸುತ್ತಿಲ್ಲ. ರಾಕೇಶ್ ಮೆಟ್ಟಿನಡ್ಕ ಎಂಬವರು ಕಂಟ್ರಾಕ್ಟ್ ಪಡೆದು ಕೆಲಸ ಮಾಡುತ್ತಿದ್ದಾರೆ. ಬಡ ಮಹಿಳೆಗೆ ಸಹಾಯ ಆಗಲೆಂದು ಹಿಂದಿನ ತಹಸೀಲ್ದಾರ್ ಕುಂಞ ಅಹ್ಮದ್ ಬಳಿ ಮಾತನಾಡಿ, ಅರ್ಜಿ ಹಾಕಿದ್ದೆವು.


ಜಿಪಿಎಸ್ ಸಿಸ್ಟಮ್ ಟ್ಯಾಲಿ ಆಗದ ಕಾರಣ ಮುಂದಿನ ಕಂತು ಹಣ ಬಂದಿಲ್ಲ. ಪಂಚಾಯತ್ ಅಧಿಕಾರಿಗಳು ಬಂದು ಜಿಪಿಎಸ್ ಮಾಡಿದ್ದಾರೆ. ಏನೋ ಪೆಂಡಿಂಗ್ ಆಗಿದೆ, ಆದರೂ ಹಣ ಬರುತ್ತದೆ. ಈಗ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದು ಕೆಲಸ ಆರಂಭಿಸಿದ್ದಾರೆ. ಮನೆಗೆ ಎರಡು ಲೋಟ್ ಕೆಂಪು ಕಲ್ಲು ಬಂದಿದೆ. ಲಿಂಟಲ್ ಮೇಲೆ ಎರಡು ಸಾಲು ಕಲ್ಲು ಕಟ್ಟಲಿದ್ದು, ಆನಂತರ ಸ್ಲಾಬ್ ಹಾಕಬೇಕು. ಮೂರು ಲಕ್ಷದಲ್ಲಿ ಸ್ಲಾಬ್ ವರೆಗೆ ಕೆಲಸ ಆಗಬೇಕಿತ್ತು. ಏನಿದ್ದರೂ, ಈಗಿನ ಮಳೆಗಾಲದ ಒಳಗೆ ಸ್ಲಾಬ್ ಕೆಲಸ ಮುಗಿಸುತ್ತೇವೆ. ನನ್ನ ಬಗ್ಗೆ ತೇಜೋವಧೆ ಮಾಡುವ ಸಲುವಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿನ ದ್ವೇಷದಲ್ಲಿ ವಿಶ್ವನಾಥ್ ಎಂಬವರು ಈ ರೀತಿ ಮಾಡುತ್ತಿದ್ದಾರೆ ಎಂದು ಅಚ್ಚುತ್ತ ಗುತ್ತಿಗಾರು ಹೆಡ್ ಲೈನ್ ಕರ್ನಾಟಕಕ್ಕೆ ಕರೆ ಮಾಡಿ ತಿಳಿಸಿದ್ದಾರೆ.

ಸಬೂಬು ಯಾಕೆ, ಕೆಲಸ ಮಾಡಿಸಿ..

ಅಚ್ಚುತ್ತ ಗುತ್ತಿಗಾರು ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಜಿಪಿಎಸ್ ಸಿಸ್ಟಮ್, ಮತ್ತೊಂದು ಎಂದು ಸಬೂಬು ಹೇಳಬಾರದು. ಎರಡು ವರ್ಷಗಳಿಂದ ಬಡಪಾಯಿ ಮಹಿಳೆ ಮನೆಗಾಗಿ ಗೋಳಿಡುತ್ತಿದ್ದಾರೆ. ಈಗ ವಿಚಾರ ಜಾಲತಾಣದಲ್ಲಿ ಸುದ್ದಿಯಾದ ಬಳಿಕ ಎಚ್ಚತ್ತುಕೊಂಡು ಕಲ್ಲು ತಂದು ಸುರಿಯುವ ಕೆಲಸ ಮಾಡಿದ್ದಾರೆ. ಅಲ್ಲಿನ ಮನೆಯ ಹೊರಭಾಗ ನೋಡಿದರೆ, ಭಾರೀ ದೊಡ್ಡ ಮನೆಯನ್ನೇ ಕಟ್ಟಲು ಹೊರಟಂತಿದೆ. 5 ಲಕ್ಷ ಪಾಸ್ ಆಗುವುದಿದ್ದರೆ, ಸಾಧಾರಣ ಮಟ್ಟಿನಲ್ಲಿ ಮನೆ ಮಾಡಿ ಮುಗಿಸಬಹುದಿತ್ತು. ಅದಕ್ಕೆಂದು ದೊಡ್ಡ ಸ್ಕೆಚ್ ಹಾಕಿ, ಅತ್ತ ಮನೆಯೂ ಇಲ್ಲ. ಕೆಲಸವೂ ಇಲ್ಲ ಎನ್ನುವಂತಾಗಿ ಓದು ಬರಹ ಇಲ್ಲದ ಬಡಪಾಯಿ ಮಹಿಳೆ ಆಕಾಶ ನೋಡುತ್ತಾ ಟರ್ಪಾಲಿನ ಗುಡಿಸಲಲ್ಲಿ ಕಳೆಯುವ ಸ್ಥಿತಿ ತರುವುದಲ್ಲ.
Headline Karnataka had reported on Sullia Guthigar Panchyath President of misue of construction funds. The president Speaks that he wasn't involved in any activities as such.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm