ಬ್ರೇಕಿಂಗ್ ನ್ಯೂಸ್
28-09-21 10:40 pm Headline Karnataka News Network ಕರ್ನಾಟಕ
ಬಾಗಲಕೋಟೆ, ಸೆ.28: ಆರೆಸ್ಸೆಸ್ ನವರದ್ದು ತಾಲಿಬಾನಿಗಳದ್ದೇ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ಲವೋ, ಪಾರ್ಲಿಮೆಂಟರಿ ಸಿಸ್ಟಮ್ ನಲ್ಲಿ ಯಾರಿಗೆ ನಂಬಿಕೆ ಇಲ್ಲವೋ.. ಅವರೆಲ್ಲ ತಾಲಿಬಾನಿಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮನುಷ್ಯತ್ವ ಇಲ್ಲದೆ ಇರುವವರು, ರಾಕ್ಷಸಿ ಪ್ರವೃತ್ತಿ ಇರತಕ್ಕಂತವರು ಅವರೆಲ್ಲ ತಾಲಿಬಾನಿಗಳು. ಅದಕ್ಕೆ ಅವರಿಗೆ ತಾಲಿಬಾನಿಗಳು ಅಂತ ಕರೆದಿರೋದು. ಆರ್ ಎಸ್ ಎಸ್ ನವರು ರಾಕ್ಷಸಿ ಪ್ರವೃತ್ತಿ, ಮನುಷ್ಯತ್ವ ಇಲ್ಲದಿರುವವರು ಎಂದು ಸಿದ್ದು ಮೂದಲಿಸಿದರು.
ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಪ್ರಜಾಪ್ರಭುತ್ವದಲ್ಲಿ ಅಥವಾ ಸಂವಿಧಾನದಲ್ಲಿ ಅವ್ರಿಗೆ ನಂಬಿಕೆ ಇದಿಯಾ ? ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದು, ಅದರ ಪ್ರಕಾರ ಆಡಳಿತ ನಡೆಸಿ ಅಂತೇಳಿ. ಆದ್ರೆ ಆ ಪ್ರಕಾರ ಅವ್ರು ಆಡಳಿತ ನಡೆಸೋದಿಲ್ಲ. ಅದಕ್ಕೆ ಅವ್ರಿಗೆ ತಾಲಿಬಾನಿಗಳು, ಹಿಟ್ಲರ್ ವಂಶಸ್ಥರು ಅಂತಾ ನಾನು ಕರೆಯೋದು ಎಂದು ಕಿಡಿಕಾರಿದರು.
ಆರೆಸ್ಸೆಸ್ ಇರದೇ ಇದ್ದಿದ್ರೆ ಇವ್ರೆಲ್ಲ ನೇತಾಡ್ತಿದ್ರು ಎಂಬ ಸಿಟಿ ರವಿ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದೇಶಕ್ಕೆ ಸ್ವಾತಂತ್ರ್ಯ ಆರ್ ಎಸ್ ಎಸ್ ನಿಂದ ಬಂದಿದಿಯಾ? ಸ್ವಾತಂತ್ರ್ಯ ಬಂದಿದ್ದು ಯಾರಿಂದ ಹೇಳಿ ? ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆರ್ಎಸ್ಎಸ್ನಿಂದ ಅಥವಾ ಗೋಳ್ವಲ್ಕರ್ ಅವರಿಂದ ಅಲ್ಲ.. ಮಹಾತ್ಮಾ ಗಾಂಧಿಜಿ, ಗೋಖಲೆ, ತಿಲಕ್, ಲಾಲಾ ಲಜಪತ್ ರಾಯ್, ನೆಹರೂ ಅವ್ರಿಂದ ಸಿಕ್ಕಿದ್ದು ಗೊತ್ತಾಯ್ತಾ.. ಗೋಡ್ಸೆಯಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದಿಯಾ? ಸಾವರ್ಕರ ಅವ್ರಿಂದ ಸ್ವಾತಂತ್ರ್ಯ ಬಂದಿತ್ತಾ ? ಇತಿಹಾಸ ಗೊತ್ತಿಲ್ಲ ಪಾಪ ಅವುಗಳಿಗೆ..
ಪ್ರಾಣ ಕಳೆದುಕೊಂಡವರು ಯಾರು ? ಸ್ವಾತಂತ್ರ್ಯ ತಂದುಕೊಟ್ಟಿದ್ದರಲ್ಲಿ ಆರೆಸ್ಸೆಸ್ ಪಾತ್ರವೇನು? ಬೇಡ ಬಿಡಿ, ಇವರಲ್ಲಿ ಯಾರಾದ್ರೂ ಒಬ್ರಾದ್ರೂ ದೇಶಕ್ಕೋಸ್ಕರ ಸತ್ತಿದ್ದಾರೆಯೇ ? ನಿಮ್ಮಲ್ಲಿ ದೇಶಕ್ಕಾಗಿ ಯಾರು ಸತ್ತಿದ್ದಾರೆಂದು ಸಿಟಿ ರವಿಗೆ ಕೇಳಿ ನೋಡಿ.. ಮಹಾತ್ಮಾ ಗಾಂಧೀಜಿಯನ್ನು ದಕ್ಷಿಣ ಆಫ್ರಿಕಾದಿಂದ ಕರೆತಂದವ್ರು ಯಾರು? ಗಾಂಧೀಜಿಯವ್ರನ್ನು ಕರೆತಂದವ್ರು ಗೋಖಲೆ ಅವರು. ಆರೆಸ್ಸೆಸ್ ನವ್ರು ಗಾಂಧೀಜಿಯನ್ನು ಕರೆತಂದ್ರಾ ದೇಶಭಕ್ತಿ ಅಂದ್ರೆ ಬಾಯಲ್ಲಿ ಹೇಳೋದಾ. ದೇಶಕ್ಕೋಸ್ಕರ ಪ್ರಾಣ, ಬಲಿದಾನ, ತ್ಯಾಗ ಮಾಡಿದವ್ರು ದೇಶಭಕ್ತರು. ನಾವು ಸಿಟಿ ರವಿ ಅವ್ರಿಂದ ದೇಶಭಕ್ತಿ ಪಾಠ ಕಲಿಬೇಕಾ ಎಂದು ಪ್ರಶ್ನೆ ಮಾಡಿದರು.
Former CM and Leader of Opposition Siddaramaiah defended his statement that the RSS follows Taliban culture. “Yes. I made the statement and I stand by it. RSS does not believe in democratic values. It's leaders and members have no faith in human values. They act like demons while enforcing their communal, divisive ideology. I strongly believe that those who don’t have faith in in democratic values or in a parliamentary democracy or don’t treat other human beings as equals are Talibanis. That is why I described the RSS as Talibanis,” the Congress leader told journalists in Badami in Bagalkot district on September 28.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm