ಬಾಬರಿ ರೀತಿಯಲ್ಲೇ  ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಒಡೆದು ಹಾಕಬೇಕೆಂದ ಋಷಿಕುಮಾರ ಸ್ವಾಮೀಜಿ ಬಂಧನ ! 

18-01-22 08:12 pm       HK Desk news   ಕರ್ನಾಟಕ

ಬಾಬರಿ‌ ಮಸೀದಿ ರೀತಿಯಲ್ಲೇ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಆದಷ್ಟು ಬೇಗ ಒಡೆದು ಹಾಕಬೇಕು. ಇಲ್ಲಿ ಹನುಮಾನ್ ದೇವಸ್ಥಾನವನ್ನು ಮಸೀದಿ ಮಾಡಲಾಗಿದೆ. ಇದನ್ನು ಒಡೆದು ಹಾಕಿ, ಮತ್ತೆ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ. 

ಮಂಡ್ಯ, ಜ.18 : ಬಾಬರಿ‌ ಮಸೀದಿ ರೀತಿಯಲ್ಲೇ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಆದಷ್ಟು ಬೇಗ ಒಡೆದು ಹಾಕಬೇಕು. ಇಲ್ಲಿ ಹನುಮಾನ್ ದೇವಸ್ಥಾನವನ್ನು ಮಸೀದಿ ಮಾಡಲಾಗಿದೆ. ಇದನ್ನು ಒಡೆದು ಹಾಕಿ, ಮತ್ತೆ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಹೇಳಿದ್ದಾರೆ. 

ಈ ಬಗ್ಗೆ ಸ್ವಾಮೀಜಿ ಸ್ವತಃ ಅದೇ ಮಸೀದಿ ಎದುರಲ್ಲಿ ನಿಂತು ವಿಡಿಯೋ ಮಾಡಿದ್ದು ತಮ್ಮ ಕಾಳಿಕಾ ಮಠದ ಫೇಸ್ಬುಕ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ವಿವಾದ ಮೈಗೆ ಎಳೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ‌ ಹಿಂದು ಸಂಘಟನೆಗಳು ಪ್ರತಿಭಟನಾ ಜಾಥಾ ನಡೆದಿದ್ದಾಗ ಮಸೀದಿ ಒಡೆಯುವ ಹುನ್ನಾರೆ ಇದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ. 

ಜಾಮೀಯಾ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿವೆ. ಇಲ್ಲಿನ ಶಿಲೆಗಳು ದೇವಸ್ಥಾನದ ಕಟ್ಟಡವಾಗಿರುವುದರ ಕುರುಹು. ಶ್ರೀರಂಗಪಟ್ಟಣದ ದೇವಾಸ್ಥಾನವನ್ನು ಮಸೀದಿ‌ ಮಾಡಿಕೊಂಡಿದ್ದಾರೆ. ಹಿಂದುಗಳು ಜಾಗರೂಕರಾಗಿ ಆದಷ್ಟು ಬೇಗ ಇದನ್ಬು ಒಡೆಯಬೇಕು ಎಂದು ಹೇಳಿ ವಿಡಿಯೋ ಮಾಡಿದ್ದರು. ಬಳಿಕ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಲೇ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ದೇವನೂರಿನ ಕಾಳಿ ಮಠದಲ್ಲಿ ಬಂಧನ 

ಹಿಂದುಗಳೇ ಮಸೀದಿಯನ್ನು ಒಡೆಯಿರಿ ಎಂದು ಕರೆ ನೀಡುವ ಮೂಲಕ ಕಾಳಿ ಸ್ವಾಮೀಜಿ ಪ್ರಚೋದನೆ ನೀಡಿದ್ದಾಗಿ ಮಂಡ್ಯ ಪೊಲೀಸರು ಕೇಸು ದಾಖಲಿಸಿದ್ದು ಚಿಕ್ಕಮಗಳೂರಿನಲ್ಲಿ ಬಂಧಿಸಲಾಗಿದೆ. ಕಡೂರು ತಾಲೂಕಿನ ದೇವನೂರಿನ ಕಾಳಿ ಮಠದಲ್ಲಿದ್ದ ಋಷಿಕುಮಾರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ‌ಮಸೀದಿ ಮುಂದೆ ನಿಂತು ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ‌

Rishi kumar swamiji arrested by chikmagalur Police for derogatory video on Mosques in Mandya. A video on his Facebook went viral where he was stating that Mosques should be destroyed.