ಬ್ರೇಕಿಂಗ್ ನ್ಯೂಸ್
26-02-22 11:47 am HK Desk news ಕರ್ನಾಟಕ
ಬಾಗಲಕೋಟ, ಫೆ.26 : ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಉಕ್ರೇನಿನ ಪೂರ್ವ ಭಾಗದ ಖಾರ್ಕೀವ್ ನಗರದಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಅಪೂರ್ವಾ ತನ್ನ ಹೆತ್ತವರಿಗೆ ವಾಟ್ಸಾಪ್ ಸಂದೇಶ ಮಾಡಿದ್ದು ಭಯ, ಆತಂಕ ತೋಡಿಕೊಂಡಿದ್ದಾರೆ.
ತಂದೆ ಸಿದ್ದಲಿಂಗೇಶ್ ಅವರಿಗೆ ಶುಕ್ರವಾರ ರಾತ್ರಿ ವಾಟ್ಸಾಪ್ ಸಂದೇಶ ಕಳಿಸಿರುವ ಅಪೂರ್ವಾ ಕದಂಪುರ, ನಮ್ಮನ್ನು ಭಾರತ ಸರಕಾರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಭಾರತೀಯ ಸಮಯ 10.56 ರಾತ್ರಿ. ನಾವು ಇರುವ ಕಾರ್ಕೇವ್ ನಗರದಲ್ಲಿ ನಮ್ಮ ಕಟ್ಟಡದ ಹತ್ತಿರವೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿ ಇದ್ದೇವೆ ,ನಮ್ಮ ಫೋನ್ಗಳನ್ನು ಫ್ಲೈಟ್ ಮೋಡಿನಲ್ಲಿ ಇಡಲು ಹೇಳಿದ್ದಾರೆ. ಫೋನ್ ಸಂಪರ್ಕ ಆಗದಿದ್ದರೆ ಭಯ ಪಡಬೇಡಿ. ಆದರೆ ನಮ್ಮ ಭಾರತ ಸರ್ಕಾರಕ್ಕೆ ನಮ್ಮ ಮನವಿ ಏನೆಂದರೆ, ನಾವು ಹೆಚ್ಚು ವಿದ್ಯಾರ್ಥಿಗಳು ಇರುವುದು ಉಕ್ರೇನಿನ ಪೂರ್ವ ಭಾಗ ಕಾರ್ಕೇವ್ ನಗರದಲ್ಲಿ. ನಮ್ಮನ್ನು ಪೋಲಾಂಡ್ ಮುಖಾಂತರ ಕೊಂಡೊಯ್ಯಲು ಯತ್ನಿಸುವುದು ತುಂಬಾ ಕಷ್ಟ. ಅಲ್ಲಿಂದ ಹೋದರೆ ಸುಮಾರು 1000- 1500 ಕಿಲೋಮೀಟರ್ ದೂರ ಆಗುತ್ತದೆ.
ಅದರ ಬದಲು ನಮ್ಮನ್ನು ರೊಮೇನಿಯಾ ಮುಖಾಂತರವೇ ಸ್ಥಳಾಂತರ ಮಾಡಿದ್ರೆ ಸರಿ ಅನ್ಸುತ್ತೆ. ದಯವಿಟ್ಟು ನಮ್ಮ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಲುಪಿಸಿ. ಇಲ್ಲಿ ನಾವು 8000 ಜನ ವಿದ್ಯಾರ್ಥಿಗಳಿದ್ದೇವೆ. ಯಾವುದೇ ಸಾರಿಗೆ ವ್ಯವಸ್ಥೆ ಸರಿ ಇಲ್ಲ.. ದಯವಿಟ್ಟು ನಮ್ಮ ಮನವಿಯನ್ನು ಭಾರತೀಯ ರಾಯಭಾರಿ ಕಚೇರಿಗೂ ತಲುಪಿಸಿ ಎಂದು ಅಪೂರ್ವ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಭಾರತ ಸರಕಾರಕ್ಕೆ ತಮ್ಮ ಮನವಿ ತಲುಪಿಸುವಂತೆ ಕೋರಿದ್ದಾರೆ. ಅಪೂರ್ವಾ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಾಗಿದ್ದು ಎಂಬಿಬಿ ಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ. ಇದೇ ರೀತಿ ಬನಹಟ್ಟಿ ಮೂಲದ ಕಿರಣ ಸವದಿ ಕೂಡ ಮನವಿ ಮಾಡಿದ್ದಾರೆ. ಕಿರಣ ಸವದಿ ಕೂಡ ಅದೇ ಕಾರ್ಕೀವ್ ನಗರದಲ್ಲಿದ್ದಾರೆ.
Bagalkot girl cries for help from Ukraine pleads indian govt to save her
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm