ಬ್ರೇಕಿಂಗ್ ನ್ಯೂಸ್
26-02-22 11:47 am HK Desk news ಕರ್ನಾಟಕ
ಬಾಗಲಕೋಟ, ಫೆ.26 : ಉಕ್ರೇನ್ ಮೇಲೆ ನಿರಂತರವಾಗಿ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ. ಉಕ್ರೇನಿನ ಪೂರ್ವ ಭಾಗದ ಖಾರ್ಕೀವ್ ನಗರದಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿದ್ಯಾರ್ಥಿನಿ ಅಪೂರ್ವಾ ತನ್ನ ಹೆತ್ತವರಿಗೆ ವಾಟ್ಸಾಪ್ ಸಂದೇಶ ಮಾಡಿದ್ದು ಭಯ, ಆತಂಕ ತೋಡಿಕೊಂಡಿದ್ದಾರೆ.
ತಂದೆ ಸಿದ್ದಲಿಂಗೇಶ್ ಅವರಿಗೆ ಶುಕ್ರವಾರ ರಾತ್ರಿ ವಾಟ್ಸಾಪ್ ಸಂದೇಶ ಕಳಿಸಿರುವ ಅಪೂರ್ವಾ ಕದಂಪುರ, ನಮ್ಮನ್ನು ಭಾರತ ಸರಕಾರ ರಕ್ಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.
ಭಾರತೀಯ ಸಮಯ 10.56 ರಾತ್ರಿ. ನಾವು ಇರುವ ಕಾರ್ಕೇವ್ ನಗರದಲ್ಲಿ ನಮ್ಮ ಕಟ್ಟಡದ ಹತ್ತಿರವೇ ಬಾಂಬ್ ಹಾಕುತ್ತಿದ್ದಾರೆ. ನಾವು ಅಪಾಯದಲ್ಲಿ ಇದ್ದೇವೆ ,ನಮ್ಮ ಫೋನ್ಗಳನ್ನು ಫ್ಲೈಟ್ ಮೋಡಿನಲ್ಲಿ ಇಡಲು ಹೇಳಿದ್ದಾರೆ. ಫೋನ್ ಸಂಪರ್ಕ ಆಗದಿದ್ದರೆ ಭಯ ಪಡಬೇಡಿ. ಆದರೆ ನಮ್ಮ ಭಾರತ ಸರ್ಕಾರಕ್ಕೆ ನಮ್ಮ ಮನವಿ ಏನೆಂದರೆ, ನಾವು ಹೆಚ್ಚು ವಿದ್ಯಾರ್ಥಿಗಳು ಇರುವುದು ಉಕ್ರೇನಿನ ಪೂರ್ವ ಭಾಗ ಕಾರ್ಕೇವ್ ನಗರದಲ್ಲಿ. ನಮ್ಮನ್ನು ಪೋಲಾಂಡ್ ಮುಖಾಂತರ ಕೊಂಡೊಯ್ಯಲು ಯತ್ನಿಸುವುದು ತುಂಬಾ ಕಷ್ಟ. ಅಲ್ಲಿಂದ ಹೋದರೆ ಸುಮಾರು 1000- 1500 ಕಿಲೋಮೀಟರ್ ದೂರ ಆಗುತ್ತದೆ.
ಅದರ ಬದಲು ನಮ್ಮನ್ನು ರೊಮೇನಿಯಾ ಮುಖಾಂತರವೇ ಸ್ಥಳಾಂತರ ಮಾಡಿದ್ರೆ ಸರಿ ಅನ್ಸುತ್ತೆ. ದಯವಿಟ್ಟು ನಮ್ಮ ಸರ್ಕಾರಕ್ಕೆ ನಮ್ಮ ಅಭಿಪ್ರಾಯ ತಲುಪಿಸಿ. ಇಲ್ಲಿ ನಾವು 8000 ಜನ ವಿದ್ಯಾರ್ಥಿಗಳಿದ್ದೇವೆ. ಯಾವುದೇ ಸಾರಿಗೆ ವ್ಯವಸ್ಥೆ ಸರಿ ಇಲ್ಲ.. ದಯವಿಟ್ಟು ನಮ್ಮ ಮನವಿಯನ್ನು ಭಾರತೀಯ ರಾಯಭಾರಿ ಕಚೇರಿಗೂ ತಲುಪಿಸಿ ಎಂದು ಅಪೂರ್ವ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ, ಭಾರತ ಸರಕಾರಕ್ಕೆ ತಮ್ಮ ಮನವಿ ತಲುಪಿಸುವಂತೆ ಕೋರಿದ್ದಾರೆ. ಅಪೂರ್ವಾ ಬಾಗಲಕೋಟೆಯ ವಿದ್ಯಾಗಿರಿ ನಿವಾಸಿಯಾಗಿದ್ದು ಎಂಬಿಬಿ ಎಸ್ ಪ್ರಥಮ ವರ್ಷದ ವಿದ್ಯಾರ್ಥಿನಿ. ಇದೇ ರೀತಿ ಬನಹಟ್ಟಿ ಮೂಲದ ಕಿರಣ ಸವದಿ ಕೂಡ ಮನವಿ ಮಾಡಿದ್ದಾರೆ. ಕಿರಣ ಸವದಿ ಕೂಡ ಅದೇ ಕಾರ್ಕೀವ್ ನಗರದಲ್ಲಿದ್ದಾರೆ.
Bagalkot girl cries for help from Ukraine pleads indian govt to save her
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 01:49 pm
Mangalore Correspondent
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
ನಿಯಂತ್ರಣ ತಪ್ಪಿದ ಸ್ಕೂಟರ್ ಆವರಣ ಗೋಡೆಗೆ ಡಿಕ್ಕಿ ;...
13-08-25 10:17 am
ಧರ್ಮಸ್ಥಳ ಕೇಸ್ ; ಜಿಪಿಆರ್ ಬಳಸಿದರೂ ಸಿಗಲಿಲ್ಲ ಎಲುಬ...
12-08-25 11:06 pm
ಕೆಂಪು ಕಲ್ಲು ಗಣಿಗಾರಿಕೆಗೆ ಶೀಘ್ರದಲ್ಲೇ ಹೊಸ ನಿಯಮ ;...
12-08-25 08:34 pm
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm