ಬ್ರೇಕಿಂಗ್ ನ್ಯೂಸ್
03-03-22 10:31 am HK Desk news ಕರ್ನಾಟಕ
ವಿಜಯಪುರ, ಮಾ.3: ಉಕ್ರೇನಲ್ಲಿ ಹಾವೇರಿ ಜಿಲ್ಲೆಯ ನವೀನ್ ಎಂಬ ಯುವಕ ಮೃತಪಟ್ಟ ಬಳಿಕ ಅಲ್ಲಿ ಸಿಕ್ಕಿಬಿದ್ದಿರುವ ವಿದ್ಯಾರ್ಥಿಗಳ ಹೆತ್ತವರು, ಸಂಬಂಧಿಕರ ಆಕ್ರೋಶ ರಾಜ್ಯ ಮತ್ತು ಕೇಂದ್ರ ಸರಕಾರಗಳ ವಿರುದ್ಧ ತಿರುಗಿದೆ. ವಿಜಯಪುರ ಜಿಲ್ಲೆಯ ವಿವಿಧಾ ಎಂಬ ಮೆಡಿಕಲ್ ವಿದ್ಯಾರ್ಥಿನಿಯ ತಂದೆ ಮಲ್ಲಿಕಾರ್ಜುನಮಠ ಮನೆಯಲ್ಲಿ ಆತಂಕದ ನಡುವೆಯೇ ರಾಜ್ಯದ ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಭಾರತ ಸರ್ಕಾರದ ನಿರ್ಲಕ್ಷ್ಯದಿಂದಾಗಿ ನವೀನ್ ಸಾವು ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರ, ಕೇಂದ್ರ ಸಚಿವರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರ ಭಾರತೀಯರನ್ನ ರಕ್ಷಣೆ ಮಾಡೋ ಗಂಧ ಗಾಳಿ ಗೊತ್ತಿಲ್ಲದಂತೆ ಮಾಡುತ್ತಿದೆ. ಒಂದು ವಾರ ಆದ್ರೂ ಈಗ ಎಚ್ಚೆತ್ತ ರೀತಿ ಮಾಡುತ್ತಿದ್ದಾರೆ. ಎಲ್ಲ ಮೋದಿ ಅವರ ಹೆಸರು ಹೇಳುತ್ತಾರೆ. ಮೋದಿ ಒಬ್ಬರೇ ಏನು ಮಾಡಲು ಸಾಧ್ಯ, ಕೇಂದ್ರದಲ್ಲಿ ಮೋದಿ ಅವರನ್ನು ಬಿಟ್ಟು ಎಲ್ಲರೂ ಅಸಮರ್ಥರು.
ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೈಲಿ ಏನೂ ಮಾಡಲಾಗುತ್ತಿಲ್ಲ. ರಾಜ್ಯದ 28 ಸಂಸದರು ಇದ್ದೂ ಇಲ್ಲದಂತಿದ್ದಾರೆ. ವಿಜಯಪುರ ಸಂಸದ ರಮೇಶ ಜಿಗಜಿಣಗಿ ಒಬ್ಬ ದರಿದ್ರ. ಇವರೆಲ್ಲಾ ನನ್ನ ಮಗಳ ಹಾಗೂ ಎಲ್ಲ ವಿದ್ಯಾರ್ಥಿಗಳ ಜೀವ ತೆಗೆಯಲು ನಿಂತಿದ್ದಾರೆ. ನನ್ನ ಮಗಳಿಗೆ ಏನಾದರೂ ಆದರೆ ವಿಜಯಪುರ ಸಂಸದ ಹಾಗೂ ದೇಶದ ಸಂಸದರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯದ ಜನರು ನನಗೆ ಇಲ್ಲಿ ಸ್ವಲ್ಪ ಧೈರ್ಯ ತುಂಬಿದ್ದಾರೆ. ಮೋದಿ ಅವರು ರಷ್ಯಾ ಜೊತೆಗೆ ಮಾತನಾಡಿದರೆ ಕೆಲವೇ ನಿಮಿಷಗಳಲ್ಲಿ ನಮ್ಮ ಮಕ್ಕಳು ಸುರಕ್ಷಿತವಾಗಿ ರಷ್ಯಾ ಬಾರ್ಡರ್ ಸೇರುತ್ತಾರೆ. ಆದರೆ ಈ ಕೆಲಸ ಆಗುತ್ತಿಲ್ಲ. ಸದ್ಯ ಮಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ, ವಿಡಿಯೋ ಕಾಲ್ ನಲ್ಲಿ ಅಲ್ಲಿನ ಭಯಾನಕತೆಯನ್ನು ಕಣ್ಣಾರೆ ನೋಡಿದ್ದೇನೆ. ಬಾಂಬ್ ದಾಳಿ, ರಾಕೆಟ್ ದಾಳಿ ನೋಡಿದ್ದೇನೆ. ಎಲ್ಲರನ್ನೂ ತುರ್ತಾಗಿ ಸುರಕ್ಷಿತವಾಗಿ ಕರೆ ಕರೆತರಬೇಕಿದೆ. ನನ್ನ ಮಗಳು ವಿವಿಧಾ ಸಹಿತ 12 ವಿದ್ಯಾರ್ಥಿಗಳು ಅಲ್ಲಿದ್ದಾರೆ. ರೈಲಿನ ಮೂಲಕ ಪೊಲೇಂಡ್ ನತ್ತ ಹೊರಟಿದ್ದಾರೆ ಎನ್ನುವ ಮಾಹಿತಿಯಿದೆ.
ಉಕ್ರೇನಿನ ಖಾರ್ಕಿವ್ ನಲ್ಲಿ ಸಿಲುಕಿದ್ದ ವಿವಿಧಾ ಮಲ್ಲಿಕಾರ್ಜುನಮಠ, ಅಲ್ಲಿಂದ ರೈಲು ಮೂಲಕ ಪ್ರಯಾಣ ಬೆಳೆಸಿದ್ದಾರೆ. ಗಡಿ ಭಾಗದ ಉಜಗೊಂಡ, ಲಿವಿವ್ ಮೂಲಕ ಪೋಲೆಂಡ್ ದೇಶ ತಲುಪಲಿದ್ದಾರೆ. ನಂತರ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಮಠ ಹೇಳಿದ್ದಾರೆ.
Vijayapura Ramesh Jigajinagi is a cursed man he's of no help slam parents of Ukraine students. There are 28 MPs but that's of no has he added.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 03:19 pm
Mangalore Correspondent
Ullal, Mangalore: ಸಮುದ್ರ ಮಧ್ಯದಲ್ಲೇ ಪೋರ್ಚುಗೀಸರ...
17-09-25 01:34 pm
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
17-09-25 02:46 pm
Udupi Correspondent
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm