ಹಿಜಾಬ್ ಬಗ್ಗೆ ವಾಟ್ಸಪ್ ಚರ್ಚೆ ; ಪಾಕಿಸ್ಥಾನದ ಧ್ವಜ ಷೇರ್ ಮಾಡಿದ್ದ ಮುಸ್ಲಿಂ ವಿದ್ಯಾರ್ಥಿನಿ ವಜಾಕ್ಕೆ ಆಗ್ರಹ, ಕಾಲೇಜು ಮುಂದೆ ಪ್ರತಿಭಟನೆ

09-03-22 06:00 pm       HK Desk news   ಕರ್ನಾಟಕ

ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಆನಂತರ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ನಗರದ ಕಾಲೇಜೊಂದರ ಮುಸ್ಲಿಮ್ ವಿದ್ಯಾರ್ಥಿನಿ ಪಾಕಿಸ್ಥಾನದ ಧ್ವಜವನ್ನು ತಮ್ಮ ಸ್ಟಡಿ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ, ಮಾ.9 : ಹಿಂದು ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಆನಂತರ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ನಗರದ ಕಾಲೇಜೊಂದರ ಮುಸ್ಲಿಮ್ ವಿದ್ಯಾರ್ಥಿನಿ ಪಾಕಿಸ್ಥಾನದ ಧ್ವಜವನ್ನು ತಮ್ಮ ಸ್ಟಡಿ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ಚರ್ಚೆ ನಡೆದು ಬಿಸಿಎ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ನಲ್ಲಿ ವಿದ್ಯಾರ್ಥಿನಿ ಪಾಕಿಸ್ಥಾನದ ಧ್ವಜವನ್ನು ಷೇರ್ ಮಾಡಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಶಿವಮೊಗ್ಗದ ಸಹ್ಯಾದ್ರಿ ಸೈನ್ಸ್ ಕಾಲೇಜಿನಲ್ಲಿ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ವಿರುದ್ಧ ಕೇಸು ದಾಖಲಿಸಬೇಕು, ಕಾಲೇಜಿನಿಂದ ಡಿಬಾರ್ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರೂ, ಆಡಳಿತ ಸಿಬಂದಿ ವಿದ್ಯಾರ್ಥಿನಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿ ನಾಯಕರು ಆರೋಪಿಸಿದ್ದಾರೆ.

Ashram's top priest defends lawyer representing Hijab in Indian court –  Kashmir Media Service

ಕಳೆದ ತಿಂಗಳು ಹಿಜಾಬ್ ವಿವಾದ ತೀವ್ರ ಚರ್ಚೆಯಲ್ಲಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಮೂಲದ ಬಿಸಿಎ ವಿದ್ಯಾರ್ಥಿನಿ, ಹಿಜಾಬ್ ಧರಿಸುವುದು ತನ್ನ ಮೂಲಭೂತ ಹಕ್ಕು ಎಂದು ವಾದಿಸಿದ್ದಳು. ತರಗತಿಯ ಒಳಗಿನ ಸ್ಟಡಿ ಗ್ರೂಪ್ ನಲ್ಲಿ ಇತರ ವಿದ್ಯಾರ್ಥಿಗಳ ನಡುವೆ ವಾಟ್ಸಪ್ ಚಾಟಿಂಗ್ ನಡೆಸುತ್ತಿದ್ದಾಗ ಈ ರೀತಿಯ ವಾದ ನಡೆದಿತ್ತು. ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗಲೇ ಒಬ್ಬ ವಿದ್ಯಾರ್ಥಿ ಭಾರತದ ಧ್ವಜವನ್ನು ಹಂಚಿಕೊಂಡಿದ್ದಾನೆ. ಅದಕ್ಕೆ ಪ್ರತಿಯಾಗಿ ಮುಸ್ಲಿಂ ವಿದ್ಯಾರ್ಥಿನಿ ಪಾಕಿಸ್ಥಾನದ ಧ್ವಜವನ್ನು ಷೇರ್ ಮಾಡಿದ್ದಳು.

ಮುಸ್ಲಿಂ ವಿದ್ಯಾರ್ಥಿನಿಯ ಈ ರೀತಿಯ ನಡೆ ಎಬಿವಿಪಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಆಕೆಯನ್ನು ಕಾಲೇಜಿನಿಂದ ಡಿಬಾರ್ ಮಾಡುವಂತೆ ಆಗ್ರಹ ಮಾಡಿದ್ದರು. ಆದರೆ ಕಾಲೇಜು ಆಡಳಿತ ಈ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ನಾವು ಈ ಬಗ್ಗೆ ಕಾನೂನು ಮಾಹಿತಿ ಪಡೆದು ನಿರ್ಧಾರಕ್ಕೆ ಬರುವುದಾಗಿ ಸಹ್ಯಾದ್ರಿ ಕಾಲೇಜು ಆಡಳಿತ ಹೇಳಿಕೊಂಡಿತ್ತು. ಈ ಬಗ್ಗೆ ಶಿವಮೊಗ್ಗ ವಿವಿಯ ಅಧಿಕಾರಿಗಳು ವಿದ್ಯಾರ್ಥಿನಿ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿಕೊಂಡಿದ್ದರು.

ಇತ್ತೀಚೆಗೆ ಶಿವಮೊಗ್ಗದಲ್ಲಿ ಹಿಜಾಬ್ ಕಿಚ್ಚು ತೀವ್ರಗೊಂಡ ಬಳಿಕ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಾಗಿತ್ತು. ಆನಂತರ, ವಾರ ಕಾಲ ಕರ್ಫ್ಯೂ, ಕಲ್ಲು ತೂರಾಟ, ಹಿಂಸಾಚಾರವೂ ನಡೆದಿತ್ತು.

Students in Karnataka’s Shivamogga staged protests on Tuesday after a college student allegedly shared the stickers of the Pakistani flag on a WhatsApp group. The student shared a sticker in the group with a message that read ‘hijab is our right’ a few days ago when the states witnessed violent protests over the hijab row.