ಬ್ರೇಕಿಂಗ್ ನ್ಯೂಸ್
31-03-22 09:56 pm HK Desk news ಕರ್ನಾಟಕ
ತುಮಕೂರು, ಮಾ.31 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದಾರೆ. ಸಿದ್ಧಗಂಗಾ ಶ್ರೀಗಳ ಜನ್ಮದಿನ ಹಿನ್ನೆಲೆಯಲ್ಲಿ ಅದ್ದೂರಿ ಉತ್ಸವ ನಡೆಯುತ್ತಿದ್ದು ರಾಹುಲ್ ಗಾಂಧಿಯವರು ಮಠದಲ್ಲಿ ಗದ್ದುಗೆ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಮಠದ ಧ್ಯಾನ ಮಂದಿರಕ್ಕೆ ಭೇಟಿಯಿತ್ತು ಕೆಲಕಾಲ ರಾಹುಲ್ ಧ್ಯಾನ ನಿರತರಾಗಿದ್ದಾರೆ. ಬಳಿಕ ಸಿದ್ದಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಆನಂತರ ಮಠದ ಭಕ್ತರು ಮತ್ತು ಸಾವಿರಾರು ಮಕ್ಕಳನ್ನುದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಿದ್ದಾರೆ. ಇವತ್ತು ನಾನು ಇಲ್ಲಿಗೆ ಬಂದಿರುವುದು ಬಹಳಷ್ಟು ಖುಷಿ ತಂದಿದೆ. ಸ್ವಾಮೀಜಿಯವರ ದರ್ಶನವಾಗಿರುವುದು, ಸ್ವಾಮೀಜಿ ಜೊತೆಗೆ ಮಾತುಕತೆ ಮಾಡಿರುವುದು ಬಹಳ ಖುಷಿ ತಂದಿದೆ. ಈ ಮೊದಲು ಕೂಡ ನಾನು ಇಲ್ಲಿಗೆ ಬಂದಿದ್ದೆ. ನನ್ನ ತಾಯಿ, ತಂದೆಯವರು ಕೂಡ ಈ ಮಠಕ್ಕೆ ಬಂದಿದ್ದರು. ನಮ್ಮ ಕುಟುಂಬ ಹಾಗೂ ಮಠದ ಸಂಬಂಧ ಹೊಸದೇನಲ್ಲ. ಮಠದೊಂದಿಗೆ ಗೌರವಯುತ ಸಂಬಂಧವಿದೆ ಎಂದು ಹೇಳಿದ್ದಾರೆ.
ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಶಿಕ್ಷಣ ದಾಸೋಹದ ಸೇವೆ ಸಂತೋಷ ತಂದಿದೆ. ಇಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಬಸವಣ್ಣನವರು ಹೇಳಿದಂತೆ, ಯಾವುದೇ ಜಾತಿ, ಧರ್ಮ, ದ್ವೇಷ ಅಸೂಯೆ ಇಲ್ಲದಂತೆ ನಾವು ಬದುಕಬೇಕೆಂಬುದು ಮಂತ್ರವಾಗಬೇಕು. ಇಲ್ಲಿ ಬೋಧಿಸುವ ಭ್ರಾತೃತ್ವ ಇಡೀ ದೇಶಕ್ಕೆ ಬೇಕಾಗಿದೆ. ದೇಶದಲ್ಲಿ ಹರಡುತ್ತಿರುವ ದ್ವೇಷ ಕಡಿಮೆಯಾಗಬೇಕಿದೆ. ಭಾತೃತ್ವ ಹರಡುತ್ತಿರುವ ಸ್ವಾಮೀಜಿ ಹಾಗೂ ಮಠದವರಿಗೆ ಧನ್ಯವಾದ ತಿಳಿಸುತ್ತೇನೆ.
ನಾನು ಶಿವಕುಮಾರಸ್ವಾಮೀಜಿ ಅವರನ್ನು ನೆನಪು ಮಾಡಿಕೊಳ್ಳುತ್ತೇನೆ. ಅವರು ತುಂಬಾ ವರ್ಷಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು. ಈ ಹಿಂದೆ ಶಿವಕುಮಾರ ಸ್ವಾಮೀಜಿಯವರುನ್ನೂ ಭೇಟಿ ಮಾಡಿದ್ದೆ. ಅವರು ಇಂದು ಇಲ್ಲದಿರುವುದು ನೋವುಂಟು ಮಾಡಿದೆ. ಆದರೆ ಸ್ವಾಮೀಜಿಯ ಮಾರ್ಗದರ್ಶನ ನಮ್ಮೊಂದಿಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಯುವಕರು, ದೇಶದ ಜನರು ನಡೆಯಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ರಾಹುಲ್ ಗಾಂಧಿಯವರು ಇದೇ ಮೊದಲಲ್ಲ ಮಠಕ್ಕೆ ಭೇಟಿ ಕೊಟ್ಟಿರುವುದು. ಹಿಂದೆ ಇಂದಿರಾ ಗಾಂಧಿ ಆಗಮಿಸಿದ್ದಾಗ ಅವರದೇ ಕಾರಿನಲ್ಲಿ ಹೋಗಿದ್ದೆ. ತಮ್ಮ ಭದ್ರತಾ ಸಿಬ್ಬಂದಿಯನ್ನು ಕಾರಿನಿಂದ ಕೆಳಗಿಳಿಸಿ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದರು ಎಂದು ಸ್ಮರಿಸಿದರು. ನಾವೆಲ್ಲರೂ ಮನುಷ್ಯರಾಗಿ ಬದುಕಬೇಕು. ದ್ವೇಷ, ಅಸೂಯೆ ದೂರ ಸರಿಸಬೇಕು. ಬಸವಣ್ಣನವರ ಸಂದೇಶದಂತೆ ನಾವು ಬದುಕ ಬೇಕಾಗಿದೆ. ನಮ್ಮ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಯಕತ್ವ ಸಂಪನ್ನವಾಗಿರಬೇಕು. ರಾಹುಲ್ ಅವರಿಗೆ ದೇವರು ಮತ್ತಷ್ಟು ಶಕ್ತಿ ತುಂಬಲಿ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
The Siddha Ganga monastery's Lingayakya Shivakumar Swamiji Jayanti program will be held on Friday, the Thursday before which the blessings of the Siddhalinga Swamiji will be discussed and a few talks with Swamiji.KPCC President DK Shivamar, Leader of the Opposition in the Assembly Siddaramaiah, KPCC Campaign Committee Chairman MB Patila and MLA Dr G Parameshwara were present.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 10:57 pm
HK News Desk
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm