ರಮೇಶ್ ಜಾರಕಿಹೊಳಿಯ 610 ಕೋಟಿ ಸಾಲ ಮನ್ನಾಕ್ಕೆ ಸರಕಾರ ಕಸರತ್ತು ; ಸಹಕಾರಿ ಬ್ಯಾಂಕುಗಳ ನಷ್ಟಕ್ಕೆ ಹೊಣೆ ಯಾರು ಸಹಕಾರಿ ಸಚಿವರೇ ? ಕಾಂಗ್ರೆಸ್ ಟ್ವೀಟ್ 

04-05-22 12:32 pm       Bangalore Correspondent   ಕರ್ನಾಟಕ

ಸಹಕಾರಿ ಕ್ಷೇತ್ರದ ಬೆಳಗಾವಿಯ ವಿವಿಧ ಬ್ಯಾಂಕುಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ 600 ಕೋಟಿ ರೂ. ಸಾಲ ಮಾಡಿದ್ದು ಅದನ್ನು ಮನ್ನಾ ಮಾಡಲು ಬಿಜೆಪಿ ಸರಕಾರ ಕಸರತ್ತು ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಬೆಂಗಳೂರು, ಮೇ 4: ಸಹಕಾರಿ ಕ್ಷೇತ್ರದ ಬೆಳಗಾವಿಯ ವಿವಿಧ ಬ್ಯಾಂಕುಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ 600 ಕೋಟಿ ರೂ. ಸಾಲ ಮಾಡಿದ್ದು ಅದನ್ನು ಮನ್ನಾ ಮಾಡಲು ಬಿಜೆಪಿ ಸರಕಾರ ಕಸರತ್ತು ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, '40% ಬಿಜೆಪಿಯ ಹಗರಣಗಳ ಸಾಲಿಗೆ ಮತ್ತೊಂದು ಅಕ್ರಮ ಸೇರ್ಪಡೆಯಾಗಿದೆ. ರಮೇಶ್ ಜಾರಕಿಹೊಳಿಯವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪೆನಿ ಹೆಸರಲ್ಲಿ ನಡೆಯುತ್ತಿರುವ 600 ಕೋಟಿ ವಂಚನೆಗೆ ಇಡೀ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಅವರ ಸಾಲವನ್ನು NPA ಎಂದು ಪರಿಗಣಿಸುವಲ್ಲಿ ರಾಜ್ಯ ಸರ್ಕಾರ ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ ಸಹಬಾಗಿತ್ವವೂ ಇದೆ ಎಂದು ಆರೋಪಿಸಿದೆ. 

Twitter Action Validates Our Stand That BJP Manipulated Media: Congress

ಈವರೆಗೆ ಚೆಕ್ ಆಯ್ತು, RTGS ಆಯ್ತು, ಕಮಿಷನ್ ದಂಧೆ ಆಯ್ತು, ಈಗ ಭ್ರಷ್ಟಾಚಾರಕ್ಕೆ ಬಿಜೆಪಿ ಕಂಡುಕೊಂಡ ಹೊಸ ಮಾರ್ಗ "ಉದ್ದೇಶಪೂರ್ವಕ ದಿವಾಳಿ ಘೋಷಣೆ" ರಮೇಶ್ ಜಾರಕಿಹೊಳಿ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೆಸರಲ್ಲಿ 610 ಕೋಟಿ ಸಾಲ ಇದ್ದು ಆ ಮೊತ್ತವನ್ನು ನುಂಗಿ ನೀರು ಕುಡಿಯಲು ಮುಂದಾಗಿದ್ದಾರೆ. ಇದರಿಂದ ಸಹಕಾರಿ ಬ್ಯಾಂಕ್‌ಗಳಿಗಾಗುವ ನಷ್ಟಕ್ಕೆ ಹೊಣೆ ಯಾರು ಸಹಕಾರ ಸಚಿವರೇ?' ಎಂದು ಕಾಂಗ್ರೆಸ್ ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.

The Congress on Monday attacked the Central government, saying it was "deliberate insolvency declaration" that the BJP has found a new way to corruption, now that it has been checked, RTGS, commissioned, and now the BJP has found a new way to corruption.in a series of tweets, the congress said, "in the name of sowbhagya laxmi sugars owned by ramesh jarkiholi, they have swallowed rs 600 crore and offered to drink water. who is the co-operative minister responsible for this loss to the co-operative banks?" it asked.