ಬಗೆದಷ್ಟು ಮುಗಿಯದ ಅಕ್ರಮ ; ಬೆಂಗಳೂರಿನ ಒಂದೇ ಗ್ರಾಮದ ಮೂವರಿಗೆ ಪಿಎಸ್ಐ ರ್ಯಾಂಕ್ ! ಸಿಕ್ಕಿಬಿದ್ದ ಇಬ್ಬರು ಸೋದರರು! ಆರ್.ಡಿ.ಪಾಟೀಲ - ಸಿಪಿಐ ಮೇತ್ರಿ ನಡುವೆ ಎರಡು ಕೋಟಿ ಡೀಲ್ ! 

06-05-22 06:08 pm       Bangalore Correspondent   ಕರ್ನಾಟಕ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ ಒಂದೇ ಗ್ರಾಮದ ಮೂವರು ಯುವಕರು ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಬೆಂಗಳೂರು, ಮೇ 6 : ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಆಯ್ಕೆಯಾಗಿದ್ದ ಒಂದೇ ಗ್ರಾಮದ ಮೂವರು ಯುವಕರು ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಬೆಂಗಳೂರು ಹೊರವಲಯದ ಕಗ್ಗಲೀಪುರ ಸಮೀಪದ ಚಿನ್ನಕುರ್ತಿ ಗ್ರಾಮದ ಸಿ.ಜಿ.ರಾಘವೇಂದ್ರ, ಸಿ.ಎಂ.ನಾಗರಾಜ್‌ ಹಾಗೂ ಆತನ ಸೋದರ ಸಿ.ಎಂ.ನಾರಾಯಣ ಎಂಬ ಮೂವರು ಅಭ್ಯರ್ಥಿಗಳ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದ್ದು, ಈ ಪೈಕಿ ರಾಘವೇಂದ್ರ ಹಾಗೂ ನಾಗರಾಜ ಸಿಐಡಿಗೆ ಸೆರೆ ಸಿಕ್ಕಿದ್ದಾರೆ. ನಾರಾಯಣ ತಪ್ಪಿಸಿಕೊಂಡಿದ್ದು ಪೊಲೀಸರು ಜಾಲ ಬೀಸಿದ್ದಾರೆ. 

ಈ ಮೂವರು ಕೂಡ ಬೆಂಗಳೂರಿನಲ್ಲಿ ಪಿಎಸ್ಐ ಹುದ್ದೆಗೆ ಮೂವರು ಪರೀಕ್ಷೆ ಬರೆದಿದ್ದರು. ಇದರಲ್ಲಿ ಸಾಮಾನ್ಯ ವರ್ಗದಲ್ಲಿ ಸಿ.ಎಂ. ನಾರಾಯಣ ರಾಜ್ಯಕ್ಕೆ 9ನೇ ರ್ಯಾಂಕ್ ( ಅಂಕಗಳು 157.5), ಆತನ ಸೋದರ ಸಿ.ಎಂ.ನಾಗರಾಜ್ 11ನೇ ರ್ಯಾಂಕ್‌ (ಅಂಕಗಳು 157) ಹಾಗೂ ರಾಘವೇಂದ್ರ 62ನೇ ರ್ಯಾಂಕ್ (ಅಂಕಗಳು 144) ಪಡೆದಿದ್ದರು. ಮೂವರು ಕೂಡ ಮೊದಲ ಪತ್ರಿಕೆಯಲ್ಲಿ ಕಡಿಮೆ ಅಂಕ ಗಳಿಸಿದ್ದು ಎರಡನೇ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿತ್ತು. 

ನಾರಾಯಣನಿಗೆ ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5 ಅಂಕಗಳು, ನಾಗರಾಜ್‌ಗೆ ಮೊದಲ ಪತ್ರಿಕೆಯಲ್ಲಿ 31 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕ ಹಾಗೂ ರಾಘವೇಂದ್ರನಿಗೆ ಮೊದಲ ಪತ್ರಿಕೆಯಲ್ಲಿ 18 ಹಾಗೂ ಎರಡನೇ ಪತ್ರಿಕೆಯಲ್ಲಿ 126 ಅಂಕಗಳು ಬಂದಿದ್ದವು. ಒಂದೇ ಗ್ರಾಮದ ಮೂವರು ಒಂದೇ ರೀತಿ ಆಯ್ಕೆಯಾಗಿದ್ದು ಅಚ್ಚರಿಯಾಗಿತ್ತು. ಹೀಗಾಗಿ ಸಿಐಡಿ ಅಧಿಕಾರಿಗಳು ಸಂಶಯದ ನೆಲೆಯಲ್ಲಿ ತನಿಖೆ ನಡೆಸಿದಾಗ, ಅಕ್ರಮ ನಡೆಸಿರುವುದು ಕಂಡುಬಂದಿದೆ. 

ಎಡಿಜಿಪಿ ಸಹಾಯಕ, ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಡ್ರಿಲ್ ! 

ಇದೇ ವೇಳೆ, ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿ ಅಧಿಕಾರಿಯ ಆಪ್ತ ಸಹಾಯಕ ಹಾಗೂ ಇಬ್ಬರು ಇನ್ಸ್‌ಪೆಕ್ಟರ್‌ಗಳನ್ನು ಸಿಐಡಿ ವಿಚಾರಣೆ ನಡೆಸಿದೆ ಎಂದು ತಿಳಿದುಬಂದಿದೆ. ಎಡಿಜಿಪಿ ಅಮೃತ್‌ ಪಾಲ್‌ ಅವರ ಆಪ್ತ ಸಹಾಯಕನೊಬ್ಬ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭದ ದಿನದಿಂದಲೂ ಜೊತೆಗೇ ಕಾರ್ಯ ನಿರ್ವಹಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಆಪ್ತ ಸಹಾಯಕನನನ್ನು ಸಿಐಡಿ ವಿಚಾರಣೆಗೊಳಪಡಿಸಿದೆ. ಅದೇ ರೀತಿ ಪರೀಕ್ಷೆ ನಿರ್ವಹಣೆ ಹೊತ್ತಿದ್ದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಸಹ ತನಿಖೆ ಬಿಸಿ ತಟ್ಟಿದೆ. 

ಆರ್.ಡಿ ಪಾಟೀಲ - ಸಿಪಿಐ ನಡುವೆ 2 ಕೋಟಿ ಡೀಲ್‌ ! 

ಪಿಎ​ಸ್‌ಐ ಪರೀಕ್ಷೆ ಅಕ್ರ​ಮದ ಹಣ ಹಂಚಿ​ಕೊ​ಳ್ಳುವ ವಿಚಾ​ರ​ದಲ್ಲಿ ಬಂಧಿತ ಸಿಪಿಐ ಆನಂದ ಮೇತ್ರೆ ಹಾಗೂ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ ನಡುವೆ 2 ಕೋಟಿ ರೂಪಾಯಿ ಒಪ್ಪಂದ ನಡೆ​ದಿತ್ತು. ಅದರಂತೆ ಆರ್‌.ಡಿ. ಪಾಟೀ​ಲಗೆ ಮೇತ್ರಿ 25 ಲಕ್ಷ ನೀಡೋದು ಬಾಕಿ ಇತ್ತು. ಇದೇ ಕಾರ​ಣಕ್ಕೆ ಇಬ್ಬರ ನಡುವೆ ಮನ​ಸ್ತಾಪ ಬೆಳೆ​ದಿತ್ತು ಎಂಬ ವಿಚಾರ ಬಹಿ​ರಂಗ​ವಾ​ಗಿ​ದೆ.

Interesting facts have emerged that three candidates from the same city who had been selected for the Police Sub Inspector Recruitment Exam (REC) have now been convicted of illegal examinations.CG Raghavendra, CM Nagaraj and his brother CM Narayana of Chinnakurthi village near Kaggalipura on the outskirts of Bengaluru have come under investigation and are among those arrested. The investigation into the missing Narayana detective is underway.