ಬ್ರೇಕಿಂಗ್ ನ್ಯೂಸ್
06-05-22 08:04 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 6 : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿ ಟ್ವಿಟರ್ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದು, 'ಡಿಕೆಶಿ ಮತ್ತು 40 ಡೀಲುಗಳು!' ಎಂದು ಸರಣಿ ಟ್ವೀಟ್ ಮಾಡಿದೆ. 'ಡೀಲ್ ಡಿಕೆ ಮನೆ ಮೇಲೆ ಐಟಿ ದಾಳಿ ನಡೆದಾಗ 317 ಬ್ಯಾಂಕ್ ಖಾತೆಗಳು ಪತ್ತೆಯಾದವು. ಇವುಗಳೇನು #DealDK ಕುಟುಂಬದ ಜನ್ ಧನ್ ಖಾತೆಯಾಗಿರಲಿಲ್ಲ, 200 ಕೋಟಿಗೂ ಅಧಿಕ ಬೇನಾಮಿ ಆಸ್ತಿಯ ಕಳ್ಳಗಂಟಿನ ಖಾತೆಯಾಗಿತ್ತು. ಇದೆಲ್ಲವೂ ದೊಡ್ಡಾಲಹಳ್ಳಿ ಕೆಂಪೇಗೌಡರ ಮಗನ ಪಿತ್ರಾರ್ಜಿತ ಆಸ್ತಿ ಆಗಿರಲು ಹೇಗೆ ಸಾಧ್ಯ?' ಎಂದು ಟೀಕಿಸಿದೆ.
'ಡಿ.ಕೆ.ಶಿವಕುಮಾರ್ ಅವರೇ ನೀವು ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್ನಲ್ಲಿ ಅಡಗಿಕೊಂಡಿವೆ. ಪೊಲೀಸರ ತನಿಖೆ ಕಾದ ಎಣ್ಣೆ ಸುರಿದಂತೆ ಆಗುತ್ತಿದೆಯೇ? ದೆಹಲಿಯ ಅಪಾರ್ಟ್ಮೆಂಟನ್ನು ಅಕ್ರಮ ಹಣ ಸಂಗ್ರಹದ ಗೋದಾಮು ಮಾಡಿಕೊಂಡದ್ದನ್ನು ರಾಜ್ಯದ ಜನೆ ಮರೆತಿಲ್ಲ ಎಂದು ಬಿಜೆಪಿ ಕುಟುಕಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ತಡವಾಗಿ ಸಂಪುಟ ಸೇರಿದ ಡಿಕೆಶಿ ಭ್ರಷ್ಟಾಚಾರ ಎಸಗಬಹುದೆಂಬ ಸೂಚನೆ ಇತ್ತು. ಅದಕ್ಕಾಗಿಯೇ ಶಾಂತಿ ನಗರ ಹೌಸಿಂಗ್ ಸಹಕಾರ ಸಂಘದ ಅವ್ಯವಹಾರದ ಕಡತವನ್ನು ಸಿದ್ದರಾಮಯ್ಯ ಭದ್ರವಾಗಿಟ್ಟುಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಕಲೆ ಕಾಂಗ್ರೆಸ್ ನಾಯಕರಿಗೂ ಹಿಡಿಸುತ್ತಿರಲಿಲ್ಲ ಎಂಬುದು ನಿಜವಲ್ವೇ?' ಎಂದು ಪ್ರಶ್ನಿಸಿದೆ.
'ಡಿಕೆಶಿ ಇಂಧನ ಸಚಿವರಾಗಿದ್ದಾಗ ಸೋಲಾರ್ ಗೋಲ್ ಮಾಲ್ ನಡೆದಿತ್ತು. ಬೆಳಗಾವಿಯಲ್ಲಿ ಹೊಡೆದ ಒಂದು ಕುಕ್ಕರ್ ವಿಷಲ್ಗೆ 50 ಎಕರೆ ಸೋಲಾರ್ ಪ್ಲ್ಯಾಂಟ್ ಮಂಜೂರುಗೊಂಡದ್ದು ಸುಳ್ಳೇ? ಇದರಿಂದ ಯಾರಿಗೆ ʼಲಕ್ಷ್ಮಿ ಕೃಪೆʼಯಾಯಿತು?' ಎಂದು ಬಿಜೆಪಿ ಟ್ವೀಟ್ ಮಾಡಿ ಪ್ರಶ್ನಿಸಿದೆ.
'ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಡಿಕೆಶಿ ವಿರುದ್ಧ 200 ದೂರುಗಳು ಜಾರಿ ನಿರ್ದೇಶನಾಲಯ ಸಂಸ್ಥೆಯಲ್ಲಿ ದಾಖಲಾಗಿದ್ದವು. ಸತ್ಯ ಹರಿಶ್ಚಂದ್ರನ ಎರಡನೇ ಅವತಾರದಂತೆ ವರ್ತಿಸುವ ಡಿ.ಕೆ.ಶಿವಕುಮಾರ್ ಅವರೇ, ಈ ದೂರುಗಳೆಲ್ಲಾ ಸುಖಾಸುಮ್ಮನೆ ದಾಖಲಾಗಿದ್ದೇ? ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪುತ್ರಿಯ ಖಾತೆಗೂ ಹಣ ವರ್ಗಾವಣೆಯಾಗಿದ್ದು ಸುಳ್ಳೇ?' ಎಂದು ಬಿಜೆಪಿ ಪ್ರಶ್ನಿಸಿದೆ.
ಮಾನ್ಯ @DKShivakumar ಅವರೇ, ನೀವು ಸಚ್ಚಾರಿತ್ರನಂತೆ ವರ್ತಿಸಬೇಡಿ. ನೀವು ಹೇಗಿದ್ದಿರಿ, ಹೇಗಾದಿರಿ, ಏನು ಮಾಡಿದ್ದೀರಿ ಎಂಬುದು ರಾಜ್ಯದ ಜನತೆಗೆ ತಿಳಿದಿದೆ.
— BJP Karnataka (@BJP4Karnataka) May 6, 2022
ಕೆಪಿಸಿಸಿ ಕಚೇರಿಯಿಂದಲೇ ನಿಮ್ಮ ಭ್ರಷ್ಟಾಚಾರದ ಕಹಾನಿ ಜಗದಗಲಕ್ಕೆ ಪಸರಿಸಿದೆ.
ನಿಮ್ಮ ಸಂಪಾದನೆಯ ಮಾರ್ಗ ಸಕ್ರಮವಾಗಿದ್ದರೆ ಜೈಲುಪಾಲಾಗುವ ಪ್ರಸಂಗ ಎದುರಾಗುತ್ತಿತ್ತೇ? #DealDK pic.twitter.com/8nbJRKXRMs
ಕೆಪಿಸಿಸಿ ಅಧ್ಯಕ್ಷರ ಪರ್ಸೆಂಟೇಜ್ ವ್ಯವಹಾರ, ಡೀಲ್, ಲೆಕ್ಕಕ್ಕೆ ಸಿಗದ ಸುಳ್ಳು ಲೆಕ್ಕಾಚಾರಗಳೆಲ್ಲವನ್ನೂ ಕಾಂಗ್ರೆಸ್ ನಾಯಕರು ಕೆಪಿಸಿಸಿ ಕಚೇರಿಯಿಂದಲೇ ಬಹಿರಂಗಗೊಳಿಸಿದ್ದರು.
— BJP Karnataka (@BJP4Karnataka) May 6, 2022
ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ.@DKShivakumar, ರಾಜ್ಯ ಕಂಡ ಕಡುಭ್ರಷ್ಟ ಎನ್ನುವುದರಲ್ಲಿ ಅತಿಶಯವಿಲ್ಲ.#DealDK
ಬೇನಾಮಿ ಡೀಲ್ ಮತ್ತು ಬೇನಾಮಿ ಡಿಕೆಶಿ.
— BJP Karnataka (@BJP4Karnataka) May 6, 2022
ಪರಮಭ್ರಷ್ಟ @DKShivakumar ಹೋದಲ್ಲೆಲ್ಲಾ ಭ್ರಷ್ಟಾಚಾರದ ಕೂಪದಲ್ಲಿ ಮಿಂದೆದ್ದು ಬರುವ ಚಾಣಾಕ್ಷ.
ಮಂತ್ರಿಯಾಗಿದ್ದಾಗ ಲೆಕ್ಕವಿಲ್ಲದಷ್ಟು ಅಕ್ರಮ ಎಸಗಿದ ಮಹಾ ಭ್ರಷ್ಟಾಚಾರಿ ಈಗ ದಾಖಲೆ ಇಲ್ಲದೆ ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವುದು ವಿಪರ್ಯಾಸ. #DealDK pic.twitter.com/p57XbAOtuQ
ಕೆಪಿಸಿಸಿಯ ಭ್ರಷ್ಟಾಧ್ಯಕ್ಷ #DealDK ಅವರೇ,
— BJP Karnataka (@BJP4Karnataka) May 6, 2022
ನೀವು ಸಚ್ಚಾರಿತ್ರ್ಯದ ತುಂಡು, ಧರೆಗಿಳಿದು ಬಂದ ದೇವಮಾನವ ಎಂದು ತಿಳಿದುಕೊಂಡಿದ್ದೀರಾ?
ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಕರ್ನಾಟಕದ ಸಂಪತ್ತನ್ನು ಲೂಟಿ ಹೊಡೆದ ಬಗೆ ನೆನಪಿಸಬೇಕೇ?
ಚೋರರ ಕುಲಗುರು = @DKShivakumar
ಅಕ್ರಮವಾಗಿ ಧನ ದಾಸ್ತಾನು ಮಾಡಿದ ಆರೋಪದಲ್ಲಿ #DealDK ಅವರ ಮೇಲೆ ಐಟಿ ದಾಳಿ ನಡೆದಿತ್ತು.
— BJP Karnataka (@BJP4Karnataka) May 6, 2022
ಸುಮಾರು 800 ಕೋಟಿಗೂ ಅಧಿಕ ಮೌಲ್ಯದ ಬೇನಾಮಿ ಆಸ್ತಿಯ ಒಡೆಯ ಎಂದು @DKShivakumar ಅವರನ್ನು ತನಿಖಾ ಸಂಸ್ಥೆ ತಿಹಾರ್ ಜೈಲಿಗೆ ಅಟ್ಟಿತ್ತು
ಇಷ್ಟೆಲ್ಲ ಆಸ್ತಿ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ತರಕಾರಿ ಮಾರಿ ಕೋಟಿಗಟ್ಟಲೆ ಗಳಿಸಲು ಹೇಗೆ ಸಾಧ್ಯ? pic.twitter.com/5SMBttkww2
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ #DealDK ವಿರುದ್ಧ 200 ದೂರುಗಳು ಜಾರಿ ನಿರ್ದೇಶನಾಲಯ ಸಂಸ್ಥೆಯಲ್ಲಿ ದಾಖಲಾಗಿದ್ದವು.
— BJP Karnataka (@BJP4Karnataka) May 6, 2022
ಸತ್ಯ ಹರಿಶ್ಚಂದ್ರನ ಎರಡನೇ ಅವತಾರದಂತೆ ವರ್ತಿಸುವ @DKShivakumar ಅವರೇ, ಈ ದೂರುಗಳೆಲ್ಲಾ ಸುಖಾಸುಮ್ಮನೆ ದಾಖಲಾಗಿದ್ದೇ?
ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಪುತ್ರಿಯ ಖಾತೆಗೂ ಹಣ ವರ್ಗಾವಣೆಯಾಗಿದ್ದು ಸುಳ್ಳೇ? pic.twitter.com/DAoyTKg3CQ
ಮಾನ್ಯ #DealDK ಇಂಧನ ಸಚಿವರಾಗಿದ್ದಾಗ ಸೋಲಾರ್ ಗೋಲ್ ಮಾಲ್ ನಡೆದಿತ್ತು.
— BJP Karnataka (@BJP4Karnataka) May 6, 2022
ಬೆಳಗಾವಿಯಲ್ಲಿ ಹೊಡೆದ ಒಂದು ಕುಕ್ಕರ್ ವಿಷಲ್ಗೆ 50 ಎಕರೆ ಸೋಲಾರ್ ಪ್ಲ್ಯಾಂಟ್ ಮಂಜೂರುಗೊಂಡದ್ದು ಸುಳ್ಳೇ?
ಇದರಿಂದ ಯಾರಿಗೆ ʼಲಕ್ಷ್ಮಿ ಕೃಪೆʼಯಾಯಿತು?
ಸಿದ್ದರಾಮಯ್ಯ ಸರ್ಕಾರದಲ್ಲಿ ತಡವಾಗಿ ಸಂಪುಟ ಸೇರಿದ #DealDK ಭ್ರಷ್ಟಾಚಾರ ಎಸಗಬಹುದೆಂಬ ಸೂಚನೆ ಇತ್ತು.
— BJP Karnataka (@BJP4Karnataka) May 6, 2022
ಅದಕ್ಕಾಗಿಯೇ, ಶಾಂತಿ ನಗರ ಹೌಸಿಂಗ್ ಸಹಕಾರ ಸಂಘದ ಅವ್ಯವಹಾರದ ಕಡತವನ್ನು ಸಿದ್ದರಾಮಯ್ಯ ಭದ್ರವಾಗಿಟ್ಟುಕೊಂಡಿದ್ದರು.@DKShivakumar ಅವರ ಭ್ರಷ್ಟಾಚಾರದ ಕಲೆ ಕಾಂಗ್ರೆಸ್ ನಾಯಕರಿಗೂ ಹಿಡಿಸುತ್ತಿರಲಿಲ್ಲ ಎಂಬುದು ನಿಜವಲ್ವೇ?
ಡಿಕೆಶಿ ಮತ್ತು 40 ಡೀಲುಗಳು!
— BJP Karnataka (@BJP4Karnataka) May 6, 2022
ಮಾನ್ಯ @DKShivakumar ಅವರೇ, ನೀವು ಮಾಡಿದ ಹಗರಣ, ಡೀಲು ಹಾಗೂ ಇನ್ನಿತರ ಅವ್ಯವಹಾರಗಳು ದೊಡ್ಡ ದೊಡ್ಡ ಬ್ಯಾರಲ್ನಲ್ಲಿ ಅಡಗಿಕೊಂಡಿವೆ. ಪೊಲೀಸರ ತನಿಖೆ ಕಾದ ಎಣ್ಣೆ ಸುರಿದಂತೆ ಆಗುತ್ತಿದೆಯೇ?
ದೆಹಲಿಯ ಅಪಾರ್ಟ್ಮೆಂಟನ್ನು ಅಕ್ರಮ ಹಣ ಸಂಗ್ರಹದ ಗೋದಾಮು ಮಾಡಿಕೊಂಡದ್ದನ್ನು ರಾಜ್ಯದ ಜನೆ ಮರೆತಿಲ್ಲ.
#DealDK pic.twitter.com/68jRxXHI9K
ಡೀಲ್ ಡಿಕೆ ಅವರ ಮನೆ ಮೇಲೆ ಐಟಿ ದಾಳಿ ನಡೆದಾಗ 317 ಬ್ಯಾಂಕ್ ಖಾತೆಗಳು ಪತ್ತೆಯಾದವು.
— BJP Karnataka (@BJP4Karnataka) May 6, 2022
ಇವುಗಳೇನು #DealDK ಕುಟುಂಬದ ಜನ್ ಧನ್ ಖಾತೆಯಾಗಿರಲಿಲ್ಲ, 200 ಕೋಟಿಗೂ ಅಧಿಕ ಬೇನಾಮಿ ಆಸ್ತಿಯ ಕಳ್ಳಗಂಟಿನ ಖಾತೆಯಾಗಿತ್ತು.
ಇದೆಲ್ಲವೂ ದೊಡ್ಡಾಲಹಳ್ಳಿ ಕೆಂಪೇಗೌಡರ ಮಗನ ಪಿತ್ರಾರ್ಜಿತ ಆಸ್ತಿ ಆಗಿರಲು ಹೇಗೆ ಸಾಧ್ಯ? pic.twitter.com/e2cLr8f7TW
BJP has held a fierce fight against KPCC vice-president DK Shivakumar saying, "DKshi and 40 deals!" The series tweeted. '317 bank accounts were discovered during an IT raid on the Deal DK home. These were not the Jan Dhan accounts of the #DealDK family, but more than 200 crores of benami property. How can all this be the legacy of the son of Valiyalahalli Kempegowda?
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 07:25 pm
HK News Desk
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm