ಬ್ರೇಕಿಂಗ್ ನ್ಯೂಸ್
07-05-22 07:27 pm HK Desk News ಕರ್ನಾಟಕ
ವಿಜಯಪುರ, ಮೇ 7 : ಸಿಎಂ ಹುದ್ದೆ 2500 ಕೋಟಿಗೆ ಹರಾಜು ಎಂಬ ರೀತಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿರುವ ರೆಬಲ್ ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಪಕ್ಷದ ಶಿಸ್ತು ಸಮಿತಿ ಕ್ರಮಕ್ಕೆ ಶಿಫಾರಸು ಮಾಡಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಯತ್ನಾಳ್ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದಾರೆ. ಏನು ಬೇಕಾದರೂ ಶಿಫಾರಸು ಮಾಡಲಿ, ಶಿಸ್ತು ಕಮಿಟಿ ಅಂದ್ರೆ ಏನು..? ನನ್ನ ಕರಿಸ್ತಾರಲ್ಲಾ ಅಲ್ಲಿಯೇ ಹೇಳ್ತೇನೆ. ಹಿಂದೇನು ಕರೆಸಿದ್ರು ಎಂದು ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರೇ ಕ್ಲಿಯರ್ ಆಗಿ ಹೇಳಿದ್ದಾರಲ್ಲ. ನಾನು ಪಾರ್ಟಿ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಅಂತ. ಇಷ್ಟರ ಮೇಲೆ ಏನು ಶಿಸ್ತು ಕ್ರಮ? ಶಿಸ್ತು ಕ್ರಮ ಅಂತಾ ಕೆಲವು ಮಾಧ್ಯಮಗಳು ಹೊಡೆಯುತ್ತಿವೆ. ಅದು ಏನು ಆಗೋದಿಲ್ಲ. ಮಾಧ್ಯಮದಲ್ಲಿ ಹೇಳಿದ್ದೆಲ್ಲ ಸತ್ಯವಲ್ಲ ಎಂದರು ಯತ್ನಾಳ್. ಸತ್ಯ ಏನಿದ್ದರೂ, 24 ಕ್ಯಾರೆಟ್ ಬಂಗಾರ ಇರತ್ತೆ. ಸತ್ಯಕ್ಕೆ ಪಿಲ್ಟರ್ ಇರೋಲ್ಲ, ಸುಳ್ಳಿಗೆ ಪಿಲ್ಟರ್ ಇರುತ್ತೆ ಎಂದು ಯತ್ನಾಳ್ ಕುಹಕವಾಡಿದ್ದಾರೆ.
ಇದೇ ವೇಳೆ, ಡಿಕೆಶಿ ವಿರುದ್ಧ ಯತ್ನಾಳ್ ಸಿಡಿಮಿಡಿಯಾಗಿದ್ದು ಡಿಕೆಶಿಗೆ ನನ್ನ ಭಯ ಬಗ್ಗೆ ಶುರುವಾಗಿದೆ. ಯತ್ನಾಳ್ ಸಿಎಂ ಆದ್ರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿಕೆಶಿಗೆ ಇದೆ. ಮತ್ತೆ ಅದೇ ಜಾಗಕ್ಕೆ (ಜೈಲಿಗೆ) ಹೋಗಬೇಕಾಗುತ್ತೆ ಅನ್ನೋ ಭಯ ಶುರುವಾಗಿದೆ. ಡಿಕೆಶಿ ಗೆ ಏನೋ ಒಂದು ಸಂದೇಶ ಸಿಕ್ಕಿದೆ. ಯತ್ನಾಳ್ ಪವರ್ಪುಲ್ ಮನುಷ್ಯ ಆದ್ರೆ ಅನ್ನೋ ಭಯ ಇದೆ. ಇದರಿಂದಾಗಿ ನನ್ನ ಬಗ್ಗೆ ಟಾರ್ಗೆಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು ಸಚಿವ ಸ್ಥಾನ ಕೇಳಿಯೇ ಇಲ್ಲ. ನಾನು ವಿಧಾನಸೌಧದಲ್ಲಿ 2 ಸಾವಿರ ಕೋಟಿ ವಿಚಾರ ಮಾತನಾಡಿದಾಗ ಇಶ್ಯೂ ಆಗಲಿಲ್ಲ. ರಾಮದುರ್ಗದಲ್ಲೂ ಹೇಳಿದ್ದೀನಿ. ವಿಧಾನ ಸೌಧದಲ್ಲಿ ಹೇಳಿದಾಗ ಯಾಕೆ ಚರ್ಚೆ ಆಗಲಿಲ್ಲ. ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯ ಸುಳಿವಿದೆ, ಹೀಗಾಗಿ ನಾನು ಟಾರ್ಗೆಟ್. ಯತ್ನಾಳ್ ಏನಾದರೂ ಆದ್ರೆ ಬುಲ್ಡೋಜರ್ ತರ್ತಾರೆ ಅಂತಾ ಭಯ. ಅಕ್ರಮ ಆಸ್ತಿ ಹೊಡೆಯೋಕೆ ಶುರು ಮಾಡ್ತಾರೆ ಅಂತಾ ಭಯ. ನಾನು ಸಿಎಂ ಆದ್ರೆ ಬುಲ್ಡೊಜರ್ ರೆಡಿ ಇಟ್ಟಿದ್ದೀನಿ. ಬುಲ್ಡೊಜರ್ ಗೆ ಆರ್ಡರ್ ಕೊಟ್ಟಿದ್ದೀನಿ. ಹಾಗಾಗಿ ನನ್ನ ಸಚಿವ ಸ್ಥಾನ ತಪ್ಪಿಸಲು ಇದು ಷಡ್ಯಂತ್ರ ಎಂದಿದ್ದಾರೆ ಯತ್ನಾಳ್.
Yatnal slams DK Shivakumar says hes afraid that I will be the next CM. He's worried that I will send Bulldozer to destroy his territory.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am