ಬ್ರೇಕಿಂಗ್ ನ್ಯೂಸ್
15-05-22 06:48 pm Bangalore Correspondent ಕರ್ನಾಟಕ
Photo credits : Representative
ಬೆಂಗಳೂರು, ಮೇ 15: ಇತ್ತೀಚೆಗೆ ಎರಡೆರಡು ಬಾರಿ ರಾಜ್ಯಕ್ಕೆ ಬಂದು ಹೋಗಿದ್ದ ಕೇಂದ್ರ ಗೃಹ ಸಚಿವ ಅಮಿತಾ ಷಾ ಏನೋ ರಾಜ್ಯ ಬಿಜೆಪಿಗೆ 150 ಪ್ಲಸ್ ಟಾಸ್ಕ್ ಕೊಟ್ಟಿದ್ದರು. ಆದರೆ, ಅವರು ಎರಡನೇ ಬಾರಿ ಬಂದು ಹೋದ ವಾರದಲ್ಲೇ ಬಿಜೆಪಿ ಒಳಗಿನ ಸಮೀಕ್ಷೆಯಲ್ಲಿ ವ್ಯತಿರಿಕ್ತ ವೃತ್ತಾಂತ ಹೊರಬಿದ್ದಿದೆ. ಬಿಜೆಪಿ ಪಾಲಿನ 150 ಮಿಷನ್ ಸಾಧ್ಯವಾಗದ ಕನಸು ಅನ್ನುವ ನೆಗೆಟಿವ್ ವರದಿ ಬಿಜೆಪಿ ನಾಯಕರ ಮುಖಕ್ಕೆ ಹೊಡೆದು ಬಿಟ್ಟಿದೆ.
ಶನಿವಾರ ಕೋರ್ ಕಮಿಟಿ ನಡೆಯೋ ಮೊದಲೇ ಈ ಸಮೀಕ್ಷೆಯ ವರದಿ ರಾಜ್ಯ ಬಿಜೆಪಿ ಮತ್ತು ಅದೇ ಸಮಯಕ್ಕೆ ಅಮಿತ್ ಷಾಗೂ ರವಾನೆಯಾಗಿತ್ತು. ಇತ್ತ ರಾಜ್ಯ ನಾಯಕರು ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಫೈನಲ್ ಮಾಡಿ, ಕೇಂದ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಆದರೆ ಪಕ್ಷದ ಒಳಗಿನ ಸಮೀಕ್ಷೆಯಲ್ಲೇ ನೆಗೆಟಿವ್ ವರದಿ ಬಂದಿರೋದ್ರಿಂದ ಇವರು ಕಳಿಸಿಕೊಟ್ಟಿರೋ ಪಟ್ಟಿಗೆ ಕೇಂದ್ರದ ನಾಯಕರು ಮುದ್ರೆ ಒತ್ತುತ್ತಾರೆ ಅನ್ನುವುದಕ್ಕೆ ಯಾವ ಖಾತ್ರಿಯೂ ಇಲ್ಲ. ಯಾಕಂದ್ರೆ, ಕಳೆದ ಬಾರಿಯೂ ರಾಜ್ಯಸಭೆ ಚುನಾವಣೆಗೆ ಕೇಂದ್ರದಿಂದ ಬೇರೆಯದೇ ಹೆಸರು ಫೈನಲ್ ಆಗಿತ್ತು.

ಇಷ್ಟಕ್ಕೂ, ರಾಜ್ಯ ಬಿಜೆಪಿಗೆ ಮೈನಸ್ ಆಗಿದ್ದು ಸ್ವಯಂಕೃತ ಅಪರಾಧಗಳೇ ಅನ್ನುವುದು ವಿಶೇಷ. ರಾಜ್ಯದಲ್ಲಿ ನಡೆದಿರುವ ಇತ್ತೀಚಿನ ಬೆಳವಣಿಗೆಗಳೇ ಬಿಜೆಪಿ ಪಾಲಿಗೆ ಮೈನಸ್ ಆಗಿವೆ ಎನ್ನಲಾಗುತ್ತಿದೆ. ಗುತ್ತಿಗೆದಾರರು ಸರಕಾರದ ಪ್ರತೀ ಹಂತದ ಕಾಮಗಾರಿಗಳಲ್ಲಿ ನಲ್ವತ್ತು ಪರ್ಸೆಂಟ್ ಆರೋಪ ಮಾಡಿದ್ದು, ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್, ರಾಜ್ಯದ ಪ್ರಭಾವಿ ಸಚಿವ ಈಶ್ವರಪ್ಪ ಹೆಸರೇಳಿ ಸಾವಿಗೆ ಶರಣಾಗಿದ್ದು, ಆನಂತರ ಎದುರಾದ ಪಿಎಸ್ಐ ನೇಮಕಾತಿಯ ಹಗರಣಗಳು ಬಿಜೆಪಿ ಪಾಲಿಗೆ ದೊಡ್ಡ ಹಿನ್ನಡೆಯಾಗಿವೆ. ಇದರ ಜೊತೆ ಜೊತೆಗೇ ಬಿಜೆಪಿಗೆ ವಲಸೆ ಬಂದು ಅಧಿಕಾರ ಹಿಡಿದ ಸಚಿವರು ತಮ್ಮ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮನಸ್ಸು ಗೆಲ್ಲುವುದರಲ್ಲಿ ಸೋತಿರುವುದು, ಮೂಲ ಬಿಜೆಪಿ ನಾಯಕರು ರಾಜ್ಯದ ಈಗಿನ ರಾಜಕಾರಣದ ಶೈಲಿಗೆ ಅಸಮಾಧಾನ ಹೊಂದಿರುವುದು, ಮತ್ತೊಂದು ಕಡೆ ಸಂಪುಟ ವಿಸ್ತರಣೆ ಎನ್ನುತ್ತಲೇ ಸಮಯ ದೂಡಿದ ನಾಯಕರ ಬಗ್ಗೆ ಶಾಸಕರು ಮನಸ್ತಾಪ ಹೊಂದಿರುವುದು, ಲೂಸ್ ಟಾಕ್ ಗಳಿಂದಲೇ ವರ್ಚಸ್ಸು ಕಳಕೊಂಡ ರಾಜ್ಯಾಧ್ಯಕ್ಷ ಇತ್ಯಾದಿ ಕಾರಣದಿಂದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಇಚ್ಛೆಯಿಂದ ಕಾರ್ಯಕರ್ತರೇ ವಿಮುಖರಾಗಿದ್ದಾರೆ.

ಬಿಜೆಪಿ ಹೇಳಿ ಕೇಳಿ ಕಾರ್ಯಕರ್ತರ ಪಕ್ಷ. ಕಾಂಗ್ರೆಸಿನ ರೀತಿ ನಾಯಕರ ಕಾರಣದಿಂದ ಪಕ್ಷ ಬೆಳೆದು ನಿಂತಿದ್ದಲ್ಲ. ನಾಯಕರ ಗೋಣನ್ನು ಮಾತ್ರ ನೆಚ್ಚಿಕೊಳ್ಳದೆ ತಳಮಟ್ಟದಲ್ಲಿ ಆರೆಸ್ಸೆಸ್ ಬೆನ್ನಿಗೆ ನಿಂತು ಪಕ್ಷವನ್ನು ಅಧಿಕಾರಕ್ಕೆ ತಂದಿರುವುದು ಬಿಜೆಪಿ ಪ್ಲಸ್ ಪಾಯಿಂಟ್. ಆದರೆ ಕಳೆದ ಬಾರಿ ಜೆಡಿಎಸ್, ಕಾಂಗ್ರೆಸಿನ ಶಾಸಕರನ್ನು ಸೆಳೆದು ಅಧಿಕಾರಕ್ಕೆ ಬಂದ ಬಿಜೆಪಿ ರಾಜ್ಯದಲ್ಲಿ ಮೂರು ವರ್ಷಗಳಿಂದ ಆಡಳಿತ ನಡೆಸಿದರೂ ಜನಮನ ಗೆಲ್ಲುವಂತೆ ಆಡಳಿತ ನಡೆಸಿಲ್ಲ ಅನ್ನುವ ನೋವು ಕಾರ್ಯಕರ್ತರಲ್ಲಿದೆ. ಇದೇ ಕಾರಣಕ್ಕಾಗಿಯೋ ಏನೋ, ಬಿಜೆಪಿ ಒಳಗಡೆಯೇ ಗೆಲ್ಲಬಹುದಾದ 150 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದಾಗ ವ್ಯತಿರಿಕ್ತ ಸಂದೇಶ ಬಂದಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಕೇಂದ್ರ ವರಿಷ್ಠರು ಮತ್ತೆ ಮುನಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳಿವೆ.
ಇದೇ ವೇಳೆ, ಉತ್ತರ ಪ್ರದೇಶ ಮಾದರಿಯಲ್ಲಿ ನೂರು ಕ್ಷೇತ್ರಗಳಲ್ಲಿ ಸಂಘಟನೆಯ ಹಿನ್ನೆಲೆಯುಳ್ಳ ಕಾರ್ಯಕರ್ತರನ್ನು ಕಣಕ್ಕಿಳಿಸಿ ಗೆಲುವು ಸಾಧಿಸಬೇಕೆಂಬ ಇರಾದೆಯೂ ಆರೆಸ್ಸೆಸ್ ಮತ್ತು ಕೇಂದ್ರದ ನಾಯಕರಲ್ಲಿದೆ. ಆದರೆ, ಆ ರೀತಿಯ ಪ್ರಯೋಗ ಕರ್ನಾಟಕದಲ್ಲಿ ಬೇಳೆ ಬೇಯಿಸಬಹುದಾ, ಜಾತಿ ಪ್ರಭಾವದ ರಾಜಕಾರಣವೇ ಉತ್ತುಂಗದಲ್ಲಿರುವ ಕರ್ನಾಟಕದಲ್ಲಿ ಹಾಲಿ ನಾಯಕರನ್ನು ಬದಿಗೊತ್ತಿ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಛಾತಿಗೆ ಬಲ ಸಿಕ್ಕೀತೇ ಅನ್ನುವ ಪ್ರಶ್ನೆಗೆ ಭವಿಷ್ಯವೇ ಉತ್ತರ ಹೇಳಬೇಕಷ್ಟೆ.
BJP’s Mission 150 plus Amit Shahs get negative report of his own leaders in party.
20-12-25 03:05 pm
Bangalore Correspondent
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 10:53 pm
Mangalore Correspondent
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
ಮನೆ ಬಾವಿಗೆ ಬಿದ್ದು ನರಿಂಗಾನ ಶಾಲೆಯ ದೈಹಿಕ ಶಿಕ್ಷಕ...
20-12-25 01:09 pm
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm