ಬ್ರೇಕಿಂಗ್ ನ್ಯೂಸ್
20-05-22 10:07 pm HK Desk News ಕರ್ನಾಟಕ
ಕಾರವಾರ, ಮೇ 20 : ನಕಲಿ ನೋಟು ಮುದ್ರಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸದಸ್ಯರಿದ್ದ ಕುಟುಂಬವನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಕಾರವಾರದ ಕೋಡಿಬಾಗದ ಮುಸ್ತಾಕ್ ಬೇಗ್ (43), ಆತನ ಪತ್ನಿ ಸೀಮಾ ಮುಸ್ತಾಕ್ (40), ಅಪ್ಜಲ್ ಬೇಗ್ (45) ಮತ್ತು ಈತನ ಪತ್ನಿ ಆಸ್ಮಾ ಬೇಗ್ ಬಂಧಿತ ಆರೋಪಿಗಳು. ಮುಸ್ತಾಕ್ ಮತ್ತು ಅಪ್ಜಲ್ ಇಬ್ಬರೂ ಸಹೋದರರಾಗಿದ್ದು ಚಾಲಕ ವೃತ್ತಿ ಮಾಡುತ್ತಿದ್ದರು. ಇವರು ಮನೆಯಲ್ಲಿಯೇ ನಕಲಿ ನೋಟು ಮುದ್ರಿಸಿ ಹುಬ್ಬಳ್ಳಿ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.

ಬಂಧಿತರಿಂದ ನಕಲಿ ನೋಟು ಮುದ್ರಿಸಲು ಬಳಸುತ್ತಿದ್ದ ಪ್ರಿಂಟರ್, ಲ್ಯಾಪ್ಟಾಪ್, 500 ಮುಖಬೆಲೆಯ ನೋಟುಗಳು ಮತ್ತು ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ಪಡೆದು ನಕಲಿ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರನ್ನು ಕಾರವಾರ ಪೊಲೀಸರು ಮೇ 5ರಂದು ಬಂಧಿಸಿದ್ದರು. ಕಾರವಾರದ ಪ್ರವೀಣ ನಾಯರ್, ಗೋವಾ ರಾಜ್ಯದ ಮಡಗಾಂವ್ನ ಲೋಯ್ಡ್ ಲಾರೆನ್ಸ್ ಸ್ಟೇವಿಸ್, ಲಾರ್ಸನ್ ಸಿಲ್ವಾ, ಪ್ರಣಯ್ ಫೆರ್ನಾಂಡಿಸ್ ಅರೆಸ್ಟ್ ಆಗಿದ್ದರು. ಆ ವೇಳೆ ಅಪ್ಜಲ್ ಬೇಗ್ ತಪ್ಪಿಸಿಕೊಂಡಿದ್ದನು. ವಿಶೇಷ ತಂಡ ರಚಿಸಿ ಪತ್ತೆಗಿಳಿದ ಪೊಲೀಸರು ಆರೋಪಿಗಳ ಮೊಬೈಲ್ ಸಂಪರ್ಕ ಮತ್ತು ವಿವಿಧ ಮೂಲಗಳ ಮಾಹಿತಿ ಆಧರಿಸಿ ಗೋವಾದಲ್ಲಿ ಬಂಧಿಸಿದ್ದಾರೆ. ಇದರಲ್ಲಿ ಅಪ್ಜಲ್ ಮತ್ತು ಮುಸ್ತಾಕ್ ನಕಲಿ ನೋಟು ಮುದ್ರಿಸುವಲ್ಲಿ ಕೌಶಲ ಹೊಂದಿದ್ದರು ಎಂದು ವಿಚಾರಣೆ ವೇಳೆ ಪತ್ತೆಯಾಗಿದೆ.
ಆರೋಪಿಗಳು ಕಾರವಾರದಲ್ಲೇ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರು. ಆದರೆ, ನೋಟುಗಳನ್ನು ಹೆಚ್ಚಾಗಿ ಬೇರೆ ಜಿಲ್ಲೆಗಳಲ್ಲಿಯೇ ಚಲಾವಣೆ ಮಾಡುತ್ತಿದ್ದರು. ಗೋವಾ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ತಮ್ಮ ಪರಿಚಯಸ್ಥರಿಗೆ ನಕಲಿ ನೋಟುಗಳನ್ನು ಪೂರೈಸುತ್ತಿದ್ದರು. ಸ್ಥಳೀಯವಾಗಿ ಹೆಚ್ಚು ವ್ಯವಹಾರ ಮಾಡುತ್ತಿರಲಿಲ್ಲ. 7 - 8 ತಿಂಗಳಿಂದ ಈ ದಂಧೆ ನಡೆಸುತ್ತಿರುವುದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
Two prime accused in the inter-state fake currency racket busted by Karwar police earlier this month were arrested from Margao on Thursday.
Police gave the names of those arrested as Mushtaq Hasan Beg, 43, and Afzal Hasan Beg, 45.Two of their family members, Seema Mushtaq Beg, 40, and Asma Afzal Beg, who were also involved in the racket have been arrested, police sources said.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm