ಬ್ರೇಕಿಂಗ್ ನ್ಯೂಸ್
22-05-22 08:35 pm HK News Desk ಕರ್ನಾಟಕ
Photo credits : Viaya Karnataka
ಮೈಸೂರು, ಮೇ 22 : ಇನ್ನೇನು ಅತ್ತ ಗಟ್ಟಿಮೇಳ ಬಾರಿಸಬೇಕು, ವರ ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ದಿಢೀರ್ ಆಗಿ ವಧುವಿನ ರೂಪದಲ್ಲಿ ಅಲಂಕರಿಸಿದ್ದ ಯುವತಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಿಚಿತ್ರ ಹೈಡ್ರಾಮಾ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಧ್ಯಾಹ್ನ ಹೈಡ್ರಾಮಾ ನಡೆದಿದ್ದು, ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರನ್ನೆಲ್ಲ ಗೊಂದಲಕ್ಕೀಡು ಮಾಡಿತ್ತು. ಮೈಸೂರಿನ ಸುಣ್ಣದಕೇರಿ ನಿವಾಸಿಯಾದ ವಧು ಸಿಂಚನಾ ನಾಟಕದಿಂದಾಗಿ ಕೊನೆ ಕ್ಷಣದಲ್ಲಿ ಮದುವೆಯೇ ಮುರಿದು ಬಿತ್ತು.
ಸಿಂಚನಾ ಜೊತೆಗೆ ಎಚ್.ಡಿ ಕೋಟೆ ತಾಲ್ಲೂಕಿನ ಗ್ರಾಮದ ಯುವಕ ಮದುವೆ ಆಗಬೇಕಿತ್ತು. ಆದರೆ, ಸುಣ್ಣದ ಕೇರಿಯಲ್ಲಿ ತನ್ನ ಪಕ್ಕದ ಮನೆಯ ಯುವಕನನ್ನು ಸಿಂಚನಾ ಪ್ರೀತಿಸುತ್ತಿದ್ದಳು. ಆದರೆ ಯುವತಿಗೆ ಮತ್ತೊಬ್ಬ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದರಿಂದ ಪ್ರಿಯಕರ ಸಿಟ್ಟಾಗಿದ್ದ. ಅಲ್ಲದೆ, ಸಿಂಚನಾಳನ್ನು ಮದುವೆ ಆಗಬೇಡ ಎಂದು ವರನಿಗೇ ಮೆಸೇಜ್ ಹಾಕಿ ಆವಾಜ್ ಹಾಕಿದ್ದ. ಈ ಬಗ್ಗೆ ವರನ ಕಡೆಯವರು ಸಿಂಚನಾಗೆ ಕೇಳಿದಾಗ, ಆ ಯುವಕನ ಜೊತೆ ತನಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಳು. ಅಷ್ಟೇ ಅಲ್ಲ, ಆತನ ಮೆಸೇಜ್ಗೂ ನನಗೂ ಸಂಬಂಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಳು. ಆದರೆ, ಮದುವೆ ದಿನ ಹತ್ತಿರ ಬಂದು ಮುನ್ನಾದಿನದ ಸಡಗರ ಎಲ್ಲ ಮುಗಿದು ಮದುವೆ ಮಂಟಪದಲ್ಲಿ ಇದ್ದಕ್ಕಿದ್ದಂತೆಯೇ ಸಿಂಚನಾ ನಾಟಕ ಮಾಡಿದ್ದು ಸೇರಿದ್ದ ಎಲ್ಲರನ್ನೂ ಅಚ್ಚರಿಗೀಡು ಮಾಡಿದಳು.
ತಾಳಿ ಕಟ್ಟುವ ಕೊನೆಯ ಕ್ಷಣದಲ್ಲಿ ಮದುವೆ ಮುರಿದುಬಿದ್ದ ಕಾರಣ ವರನ ಪೋಷಕರು ವಧುವಿನ ಪೋಷಕರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ನಾವು ಮದುವೆಗಾಗಿ 5 ಲಕ್ಷ ರೂ. ಖರ್ಚು ಮಾಡಿದ್ದೇವೆ. ವಧುವಿಗೆ ಚಿನ್ನ ಹಾಗೂ ರೇಷ್ಮೆ ಸೀರೆಗಾಗಿ ಲಕ್ಷಾಂತರ ರೂ. ಖರ್ಚಾಗಿದೆ. ಕೊನೇ ಕ್ಷಣದಲ್ಲಿ ಮದುವೆ ಬೇಡವೆಂದರೆ ಹೇಗೆ ಎಂದು ಪ್ರಶ್ನಿಸಿದ ವರನ ಪೋಷಕರು ಪ್ರಶ್ನೆ ಮಾಡಿದ್ದು ನಮಗಾದ ಖರ್ಚಿನ ಹಣವನ್ನು ನೀವೇ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಕೊನೆಗೆ ಎರಡೂ ಕಡೆಯ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಅಲ್ಲಿ ಇತ್ಯರ್ಥವಾಗಲು ಜಟಾಪಟಿ ನಡೆದಿದೆ.
Mysuru wedding stopped by Bride as she is in love with another boy, Grooms parents file complaint, bride arrested by Police.
29-04-24 06:34 pm
HK News Desk
Prajwal Revanna sex video, HD Kumaraswamy: ಪ್...
29-04-24 04:48 pm
Prajwal Revanna, Jds, Sex videos: ಮೊಮ್ಮಗನ ರಾಸ...
29-04-24 04:19 pm
Prajwal Revanna video case: ಪ್ರಜ್ವಲ್ ರೇವಣ್ಣ...
29-04-24 02:11 pm
BJP MP Sreenivasa Prasad passes away: ಚಾಮರಾಜನ...
29-04-24 11:33 am
29-04-24 12:33 pm
HK News Desk
ನಿಲ್ಲಿಸಿದ್ದ ಟಾಟಾ 407 ವಾಹನಕ್ಕೆ ಡಿಕ್ಕಿ ಹೊಡೆದ ಪಿ...
29-04-24 12:09 pm
ನಾಯಿಮರಿ ನಾಪತ್ತೆ ; 12 ವರ್ಷದ ಬಾಲಕಿ ಆತ್ಮಹತ್ಯೆ
28-04-24 10:35 pm
Alejandra Rodríguez, Miss Universe Buenos Air...
28-04-24 10:51 am
ಸುಪ್ರೀಂ ಕೋರ್ಟ್ ಚಾಟಿ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ...
27-04-24 05:46 pm
29-04-24 11:05 am
Mangalore Correspondent
Contentful CEO Karthik Rau, Udupi: ಜಗತ್ತಿನ ಮು...
28-04-24 11:03 pm
ಕೇರಳದಲ್ಲಿ ಹಕ್ಕಿಜ್ವರ ಭೀತಿ ; ಕರ್ನಾಟಕದ ಗಡಿ ಜಿಲ್ಲ...
28-04-24 03:36 pm
Mangalore, Congress Mp candidate Padmaraj: ಕಾ...
27-04-24 11:06 pm
loksabha elections 2024, Mangalore: ದಕ್ಷಿಣ ಕನ...
27-04-24 09:43 pm
29-04-24 11:50 am
Bangalore Correspondent
Drugs case, Gujarat coast: ಬೋಟ್ ನಲ್ಲಿ ಸಿಕ್ತು...
28-04-24 09:46 pm
Bangalore crime, Instagram: ತಾಯಿಯ ಫೋಟೋ ಅಶ್ಲೀಲ...
28-04-24 05:22 pm
Bangalore crime, Divorce: ಇನ್ನೊಬ್ಬಳ ಜೊತೆ ಪತಿಯ...
27-04-24 01:37 pm
Mangalore crime, stabbed, Pawan: ಫರಂಗಿಪೇಟೆ ;...
26-04-24 03:59 pm