ಬ್ರೇಕಿಂಗ್ ನ್ಯೂಸ್
28-09-20 01:46 pm Headline Karnataka News Network ದೇಶ - ವಿದೇಶ
ಪಾಟ್ನಾ, ಸೆಪ್ಟಂಬರ್ 28: ಮಕ್ಕಳು ಕೆಲವೊಮ್ಮೆ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಿದೆ. ಆದರೆ, ತಾಯಿ ಯಾವತ್ತೂ ಮಕ್ಕಳ ಬಗ್ಗೆ ಹಾಗೆ ಅನಿಸ್ಕೊಳಲ್ಲ. ಹೆತ್ತ ಮಗು ಹೆಗ್ಗಣ ಆದ್ರೂ ಮುದ್ದು ಅಂತಲೇ ಭಾವಿಸುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಇದಕ್ಕೆ ಅಪವಾದ ಎನ್ನುವ ರೀತಿ ನಡೆದುಕೊಂಡಿದ್ದಾಳೆ. ತನ್ನ ನಾಲ್ಕನೇ ಮದುವೆಗೆ ಅಡ್ಡಿಯಾಗುತ್ತಾನೆಂದು ನಾಲ್ಕು ವರ್ಷದ ಮಗುವನ್ನೇ ಕೊಂದು ಹಾಕಿದ್ದಾಳೆ.
ಈ ಘಟನೆ ನಡೆದಿರೋದು ಪಾಟ್ನಾ ಜಿಲ್ಲೆಯ ಹಸನ್ ಪುರ ಖಾಂಡಾ ಎನ್ನುವ ಪ್ರದೇಶದಲ್ಲಿ. 23 ವರ್ಷದ ಧರ್ಮಶೀಲಾ ದೇವಿ ಎನ್ನುವ ಯುವತಿ ಈಗಾಗ್ಲೇ ಮೂರು ಮದುವೆಯಾಗಿದ್ದಳು. ಮೊದಲ ಪತಿ ಅರುಣ್ ಚೌಧರಿಯ ಜೊತೆಗಿದ್ದಾಗ ಮಗು ಹುಟ್ಟಿತ್ತು. ಸಜನ್ ಕುಮಾರ್ ಎಂದು ಹೆಸರಿಟ್ಟಿದ್ದರು. ಮೊದಲ ಮದುವೆಯಾದ ಒಂದೇ ವರ್ಷದಲ್ಲಿ ಯುವತಿ, ಪತಿಯನ್ನು ಬಿಟ್ಟು ಮಗುವಿನ ಜೊತೆ ಬೇರೊಬ್ಬನ ಜೊತೆ ತೆರಳಿದ್ದಳು. ಕೆಲವೇ ತಿಂಗಳಲ್ಲಿ ಅನಾರೋಗ್ಯಕ್ಕೆ ಒಳಗಾದ 2ನೇ ಪತಿ ಆನಂತರ ಮೃತಪಟ್ಟಿದ್ದ. ಆ ಬಳಿಕ ಮಹೇಶ್ ಚೌಧರಿ ಎಂಬಾತನನ್ನು ಮೂರನೇ ಬಾರಿಗೆ ಕಟ್ಟಿಕೊಂಡಿದ್ದಳು. ಆದರೆ, ಯುವತಿ ಧರ್ಮಶೀಲಾ ದೇವಿಯ ದುರಾದೃಷ್ಟವೋ ಏನೋ, ಮಹೇಶ್ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ.
ಇದರಿಂದ ಮತ್ತೆ ಏಕಾಂಗಿಯಾಗಿದ್ದ ಯುವತಿ ನಾಲ್ಕನೇ ಮದುವೆಗೆ ರೆಡಿಯಾಗಿದ್ದಳು. ಆದರೆ, ಆಕೆಗೆ ನಾಲ್ಕು ವರ್ಷದ ಮಗು ಹೊರೆಯಾಗಿತ್ತು. ಸರಿಯಾಗಿ ಮಾತನಾಡಲು ಬಾರದ ಮತ್ತು ಕಿವಿ ಕೇಳಿಸದ ಮಗುವನ್ನು ಕೊಲ್ಲಲು ನಿರ್ಧರಿಸಿದ್ದಾಳೆ. ನಾಲ್ಕನೇ ಮದುವೆಗೆ ಮಗು ಅಡ್ಡಿಯಾಗುತ್ತದೆಂದು ತಾಯಿಯೇ ಸ್ವತಃ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಮಗು ನೀರಿನಲ್ಲಿ ಶವ ಆಗಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ, ತಪ್ಪು ಒಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm