ಬ್ರೇಕಿಂಗ್ ನ್ಯೂಸ್
26-09-23 07:44 pm HK News Desk ದೇಶ - ವಿದೇಶ
ಲಕ್ನೋ, ಸೆ.26: ಐಷಾರಾಮಿ ಕಾರುಗಳ ಬಗ್ಗೆ ತಪ್ಪಾದ ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆಂದು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಇತರ 12 ಮಂದಿಯ ವಿರುದ್ಧ ಉತ್ತರ ಪ್ರದೇಶದ ಖಾನ್ ಪುರದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ರಾಜೇಶ್ ಮಿಶ್ರಾ ಎಂಬವರು ದೂರು ನೀಡಿದ್ದು, ತನ್ನ ಮಗ ಡಾ.ಅಪೂರ್ವ ಮಿಶ್ರಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಅದಕ್ಕೆ ಕಂಪನಿಯ ನಿರ್ಲಕ್ಷ್ಯ ಕಾರಣ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ರಾಜೇಶ್ ಮಿಶ್ರಾ ತನ್ನ ಮಗನಿಗೆ 17.40 ಲಕ್ಷ ಮೌಲ್ಯದ ಐಷಾರಾಮಿ ಕಪ್ಪು ಸ್ಕಾರ್ಪಿಯೋ ಕಾರನ್ನು ಗಿಫ್ಟ್ ನೀಡಿದ್ದರು. 2022ರ ಜನವರಿ 14ರಂದು ಮಗ ಮತ್ತು ಆತನ ಸ್ನೇಹಿತರು ಲಕ್ನೋದಿಂದ ಖಾನ್ ಪುರಕ್ಕೆ ಹಿಂತಿರುಗುತ್ತಿದ್ದಾಗ ಮಂಜಿನಲ್ಲಿ ಕಾಣಿಸದೆ ಕಾರು ಅಪಘಾತಕ್ಕೀಡಾಗಿತ್ತು. ಕಾರು ಪಲ್ಟಿ ಹೊಡೆದು ಅದರಲ್ಲಿದ್ದ ತನ್ನ ಏಕೈಕ ಮಗ ಅಪೂರ್ವ ಮಿಶ್ರಾ ಸ್ಥಳದಲ್ಲೇ ಮೃತಪಟ್ಟಿದ್ದ. ಕಾರಿನಲ್ಲಿ ಬೆಲ್ಟ್ ಹಾಕ್ಕೊಂಡಿದ್ದು, ಒಳಗಡೆ ಸೇಫ್ಟಿ ಬ್ಯಾಗ್ ಇದ್ದರೂ ಮಗನ ಜೀವ ಉಳಿಯಲಿಲ್ಲ. ಹೀಗಾಗಿ ಕಾರಿನ ಬಗ್ಗೆ ಕಂಪನಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸೇಫ್ಟಿ ಇದೆಯೆಂಬ ಕಾರಣಕ್ಕೆ ಈ ಕಾರನ್ನು ಖರೀದಿಸಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರು ಕಂಪೆನಿ ಮತ್ತು ಡೀಲರ್ ಗಳು ಸೇಫ್ಟಿ ಬಗ್ಗೆ ಎಡ್ವರ್ಟೈಸ್ ನೀಡಿದ್ದರಿಂದ ಕಾರು ಖರೀದಿಸಿದ್ದೆ. ಇಲ್ಲದಿದ್ದರೆ ಇಂತಹ ಕಾರು ಖರೀದಿ ಮಾಡುತ್ತಿರಲಿಲ್ಲ. ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರಲಿಲ್ಲ. ಅದೇ ಕಾರಣದಿಂದ ಮಗನಿಗೆ ತೀವ್ರ ಪೆಟ್ಟಾಗಿತ್ತು. ಕಂಪನಿಯವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಖಾನ್ ಪುರದ ಸ್ಥಳೀಯ ಕೋರ್ಟಿನಲ್ಲಿ ರಾಜೇಶ್ ಮಿಶ್ರಾ ದಾವೆ ಹೂಡಿದ್ದರು. ಕೋರ್ಟ್ ಸೂಚನೆಯಂತೆ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 420(ಮೋಸ), 287(ಮೆಶಿನರಿ ವರ್ಕ್ ನಲ್ಲಿ ನಿರ್ಲಕ್ಷ್ಯ ಮಾಡಿರುವುದು), 304-ಎ( ಸಾವಿಗೆ ಕಾರಣವಾಗಿರುವುದು), 504(ಉದ್ದೇಶಪೂರ್ವಕ ಅಗೌರವ ಸೂಚಿಸಿ ಶಾಂತಿ ಭಂಗ), 506 ಮತ್ತು 102 ಬಿ (ಕ್ರಿಮಿನಲ್ ಕೂಟ ರಚನೆ) ಇತ್ಯಾದಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
Apolice case has been registered against Mahindra Chairman Anand Mahindra and 12 others in Kanpur for “false assurances” on the safety of car. The FIR was registered after a complaint was made by a man (Rajesh Mishra) whose son (Dr Apoorv Mishra) had died following a car accident.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
01-12-23 08:06 pm
Mangalore Correspondent
Sunil Kumar Bajal: ಗ್ರಾಮ ಪಂಚಾಯತ್ ಪುಸ್ತಕ ಬರಹಗಾ...
01-12-23 06:33 pm
Mangalore Ullal, garbage collection van: ತುಕ್...
01-12-23 02:18 pm
S L Boje Gowda, BJP, JDS, Mangalore: ವಿಧಾನ ಪರ...
01-12-23 01:45 pm
Mangalore Catholics, Tipu attack,Kirem: ಟಿಪ್ಪ...
30-11-23 04:43 pm
01-12-23 10:41 pm
Bangalore Correspondent
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm
Baby Sale Bangalore: ನವಜಾತ ಶಿಶು ಮಾರಾಟ ಕೇಸ್ ;...
30-11-23 07:35 pm
ನಕಲಿ ನೋಟು ಸಪ್ಲೈ , ಇನ್ಶೂರೆನ್ಸ್ ಹೆಸ್ರಲ್ಲಿ ಜನರಿ...
30-11-23 07:24 pm
Bangalore Mangalore News, Mobile Naked Photos...
30-11-23 03:15 pm