ನಟ ಸಂಜಯ್ ದತ್ ಅಸ್ವಸ್ಥ - ಮುಂಬೈ ಆಸ್ಪತ್ರೆಗೆ ದಾಖಲು

08-08-20 05:56 pm       Headline Karnataka News Network   ದೇಶ - ವಿದೇಶ

ಎದೆ ನೋವು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ತ್ ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಂಬೈ: ಎದೆ ನೋವು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಸಂಜಯ್ ದತ್ತ್ ಅವರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಜೊತೆಗೆ ಎದೆ ನೋವು ಆರಂಭವಾಗಿದೆ ಆ ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತೆಗೆ ದಾಖಲಿಸಲಾಗಿದೆ.

ಉಸಿರಾಟದ ಸಮಸ್ಯೆ ಇದ್ದ ಕಾರಣ ವೈದ್ಯರು ಕೊವಿಡ್​-19 ಆಯಂಟಿಜೆನ್​ ಟೆಸ್ಟ್​ ಕೂಡ ಮಾಡಿದ್ದು ವರದಿ ನೆಗಟಿವ್ ಬಂದಿದೆ. ಅನಾರೋಗ್ಯಕ್ಕೆ ಸಂಬಂಧಿಸಿ ವೈದ್ಯರು ಪರೀಕ್ಷೆ ನಡೆಸುತ್ತಿದ್ದಾರೆ.