ಬ್ರೇಕಿಂಗ್ ನ್ಯೂಸ್
18-02-25 10:45 pm HK News Desk ದೇಶ - ವಿದೇಶ
ಕೊಟ್ಟಾಯಂ, ಫೆ.18: ಉತ್ತರ ಭಾರತದಲ್ಲಿ ಮುಸ್ಲಿಮರ ಮಸೀದಿಯ ಒಳಗಡೆ ಹಿಂದುಗಳ ವಿಗ್ರಹ ಪೂಜೆ, ಆರಾಧನಾ ಪದ್ಧತಿಯ ಕುರುಹು ಕಂಡುಬಂದಿರುವುದು ವಿವಾದಕ್ಕೆ ಕಾರಣವಾಗಿರುವಾಗಲೇ ಕೇರಳದಲ್ಲಿ ಕ್ರಿಸ್ತಿಯನ್ನರ ಬಿಷಪ್ ಹೌಸ್ ಆವರಣದಲ್ಲಿ ಹಿಂದೂ ದೇವರ ವಿಗ್ರಹ ಪತ್ತೆಯಾಗಿದ್ದು ವಿಭಿನ್ನ ರೀತಿಯ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.
ಕೊಟ್ಟಾಯಂ ಜಿಲ್ಲೆಯ ಪಾಲಾದಲ್ಲಿರುವ ಸೀರೋ ಮಲಬಾರ್ ಚರ್ಚ್ ಆವರಣದಲ್ಲಿ ಕೆಲದಿನಗಳ ಹಿಂದೆ ಭೂಮಿಯನ್ನು ಅಗೆಯುತ್ತಿದ್ದಾಗ ಶಿವಲಿಂಗ ಮತ್ತು ಪಾರ್ವತಿಯ ವಿಗ್ರಹಗಳು ಪತ್ತೆಯಾಗಿವೆ. ಚರ್ಚ್ ಆವರಣದ ಜಾಗದಲ್ಲಿ ಮರಗೆಣಸು ಬೆಳೆಸುವುದಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಅಚಾನಕ್ಕಾಗಿ ಹಿಂದು ದೇವರ ವಿಗ್ರಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದುಗಳು ಸೇರಿದ್ದು, ಭಕ್ತಿಯಿಂದ ವಿಗ್ರಹಗಳಿಗೆ ಪೂಜೆ ನೆರವೇರಿಸಿದ್ದಾರೆ.



ಪಾಲಾ ಗ್ರಾಮದ ವೆಲ್ಲಪಾಡ್ ಭಗವತಿ ದೇವಸ್ಥಾನದಿಂದ 700 ಮೀಟರ್ ದೂರದಲ್ಲಿ ಈ ವಿಗ್ರಹ ಪತ್ತೆಯಾಗಿದೆ. ಅಂದಾಜು ನೂರು ವರ್ಷಗಳ ಹಿಂದೆ ಈ ಜಾಗದಲ್ಲಿ ಬ್ರಾಹ್ಮಣರ ಕುಟುಂಬ ವಾಸವಿತ್ತು. ಆನಂತರದ ವರ್ಷಗಳಲ್ಲಿ ಬ್ರಾಹ್ಮಣರ ಕುಟುಂಬ ನಾಶಗೊಂಡಿದ್ದು ಸದ್ರಿ ಜಾಗವು ಬೇರೆಯವರಿಗೆ ಕೈಬದಲಾಗಿತ್ತು. ಬಿಷಪ್ ಹೌಸ್ ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಲಿನ ಜಾಗ ಅವರ ಅಧೀನಕ್ಕೆ ಬಂದಿತ್ತು. ಇದೀಗ ಸದ್ರಿ ಜಾಗದಲ್ಲಿ ಹಿಂದು ದೇವರ ವಿಗ್ರಹ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಸೇರಿದ್ದು, ಬಿಷಪ್ ಹೌಸ್ ಪ್ರತಿನಿಧಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಸ್ಥಳೀಯ ಭಗವತಿ ದೇವಸ್ಥಾನದ ಪ್ರತಿನಿಧಿಗಳು, ಅರ್ಚಕರು ಬಿಷಪ್ ಹೌಸ್ ಪ್ರತಿನಿಧಿಗಳ ಜೊತೆಗೆ ಮುಂದೆ ಏನು ಮಾಡುವುದೆಂದು ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ ಮುಂದಿನ ನಿರ್ಧಾರ ತಿಳಿಸುವ ಬಗ್ಗೆ ಸಮಯಾವಕಾಶ ಕೇಳಿದ್ದೇವೆ, ಸೂಕ್ತ ನಿರ್ಧಾರಕ್ಕೆ ಬರುತ್ತೇವೆ ಎಂದು ಬಿಷಪ್ ಹೌಸ್ ಚಾನ್ಸಲರ್ ಫಾದರ್ ಜೋಸೆಫ್ ಕುತ್ತಿಯಾಂಕಲ್ ತಿಳಿಸಿದ್ದಾರೆ. ಇದೇ ವೇಳೆ, ಭಗವತಿ ದೇವಸ್ಥಾನದ ಪ್ರಮುಖರು ಹಿಂದುಗಳ ಆರಾಧನಾ ಪದ್ಧತಿ ಪ್ರಕಾರ ಸ್ಥಳದ ಬಗ್ಗೆ ಪ್ರಶ್ನಾ ಚಿಂತನೆ ನೆರವೇರಿಸಲು ಮುಂದಾಗಿದ್ದಾರೆ. ದೇವರ ಚಿತ್ತ ಏನಿದೆಯೆಂದು ತಿಳಿದು ಬಿಷಪ್ ಹೌಸ್ ಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಭಗವತಿ ದೇವಸ್ಥಾನದ ವಿನೋದ್ ಪುನ್ನಮತ್ತಿಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಸೌಹಾರ್ದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಹಿಂದುಗಳು ಮತ್ತು ಕ್ರಿಸ್ತಿಯನ್ನರು ಮುಂದಾಗಿದ್ದಾರೆ.
Kerala Discovery of Hindu idols from Bishop House’s land in Pala diocese efforts under way to settle issue amicably. Remains, believed to be of an old temple, including idols of Lord Shiva and Goddess Parvathy, were unearthed recently while preparing land for tapioca farming on Pala Bishop House premises.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm