ಬ್ರೇಕಿಂಗ್ ನ್ಯೂಸ್
22-02-25 09:48 pm HK News Desk ದೇಶ - ವಿದೇಶ
ದುಬೈ, ಫೆ.22 : ದುಬೈ ಪೊಲೀಸ್ ಇಲಾಖೆಯ ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ಎಂಬ ಸೋಗಿನಲ್ಲಿ ಭಾರತೀಯ ಮೂಲದವರ ಜುವೆಲ್ಲರಿ ಕಂಪನಿ ಕಚೇರಿಗೆ ನುಗ್ಗಿ ದರೋಡೆಗೈದ ಪ್ರಕರಣದಲ್ಲಿ ದುಬೈ ಕೋರ್ಟ್ ಮೂವರು ಪಾಕಿಸ್ತಾನಿ ಮೂಲದ ಪ್ರಜೆಗಳನ್ನು ಅಪರಾಧಿಗಳೆಂದು ಘೋಷಿಸಿದೆ.
2024ರ ಮಾರ್ಚ್ 7ರಂದು ದುಬೈನ ನೈಫ್ ಪ್ರದೇಶದಲ್ಲಿರುವ ಜುವೆಲ್ಲರಿ ಕಚೇರಿಗೆ ನುಗ್ಗಿದ ಅಧಿಕಾರಿ ಸೋಗಿನಲ್ಲಿದ್ದ ಮೂವರು ಕಚೇರಿ ಸಿಬಂದಿಯನ್ನು ಯಾಮಾರಿಸಿ ಹಣವನ್ನು ಹೊತ್ತೊಯ್ದಿದ್ದರು. ಎರಡನೇ ಅಂತಸ್ತಿನ ಕಚೇರಿಗೆ ಮೂವರು ಒಳಹೊಕ್ಕಿದ್ದರೆ, ನಾಲ್ಕನೇ ವ್ಯಕ್ತಿ ಕಟ್ಟಡದ ಹೊರಗೆ ನಿಂತು ಪರಿಶೀಲನೆ ನಡೆಸುವ ರೀತಿ ನಾಟಕವಾಡಿದ್ದ. ಜುವೆಲ್ಲರಿ ಕಚೇರಿಯ ಸಿಬಂದಿಯಾಗಿದ್ದ ಭಾರತೀಯ ಮೂಲದ ವ್ಯಕ್ತಿಯನ್ನು ಬಲವಂತದಿಂದ ಒಳಕ್ಕೆ ತಳ್ಳಿ ಹಲ್ಲೆ ಮಾಡಿದ್ದಾರೆ. ತಮ್ಮನ್ನು ಕ್ರಿಮಿನಲ್ ಇನ್ವೆಸ್ಟಿಗೇಶನ್ ಅಧಿಕಾರಿಗಳು ಎಂದು ಹೇಳಿ ಪರಿಚಯಿಸಿದ್ದು ಆತನ ಕೈಯಲ್ಲಿದ್ದ ಸ್ಯಾಮ್ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ 3100 ದಿರ್ಹಮ್ ಮೌಲ್ಯದ ಸಿಮ್ ಅನ್ನು ಕಿತ್ತುಕೊಂಡಿದ್ದಾರೆ.
ಕೆಲಹೊತ್ತಿನಲ್ಲೇ ಮತ್ತೊಬ್ಬ ಭಾರತೀಯ ಸಿಬಂದಿ ಕಚೇರಿಗೆ ಬಂದಿದ್ದು, ಆತನಿಗೂ ಹಲ್ಲೆಗೈದು ಕೈಯಲ್ಲಿದ್ದ ಐಫೋನ್ ಅನ್ನು ಪಡೆದಿದ್ದಾರೆ. ಆನಂತರ, ಕಚೇರಿ ಡ್ರಾವರಿನಲ್ಲಿದ್ದ 3.22 ಲಕ್ಷ ದಿರ್ಹಂ ನಗದು ಹಣವನ್ನು ಪಡೆದಿದ್ದು, ಒಳಗಡೆ ಇದ್ದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಉಪಕರಣವನ್ನೂ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದರು. ಆನಂತರ ದುಬೈ ಪೊಲೀಸರು ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನೂ ಬಂಧಿಸಿದ್ದು ಅವರ ಬಳಿಯಿದ್ದ 34,305 ದಿರ್ಹಂ ನಗದನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಯ ಸಂದರ್ಭದಲ್ಲಿ ತಮ್ಮ ಕೈಗೆ ಸಿಕ್ಕಿದ್ದ ನಗದಿನ ಪಾಲು, ಅದನ್ನು ಖರ್ಚು ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ವಿಚಾರಣೆ ಪೂರ್ತಿಗೊಳಿಸಿದ ಕೋರ್ಟ್ ಮೂವರು ಆರೋಪಿಗಳಿಗೆ ಒಂದು ವರ್ಷದ ಶಿಕ್ಷೆ ಮತ್ತು ಶಿಕ್ಷೆ ಪೂರೈಸಿದ ಬಳಿಕ ದುಬೈನಿಂದ ಗಡೀಪಾರು ಮಾಡುವಂತೆ ಆದೇಶ ಮಾಡಿದೆ. ಇದಲ್ಲದೆ, ಮೂವರು ಆರೋಪಿಗಳು ಸೇರಿ 2,90,795 ದಿರ್ಹಂ ನಗದನ್ನು ದಂಡದ ರೂಪದಲ್ಲಿ ತೆರುವಂತೆ ಆದೇಶ ಮಾಡಿದೆ. ಇಲ್ಲದಿದ್ದರೆ, ದಿನಕ್ಕೆ 100 ದಿರ್ಹಂ ರೀತಿಯಲ್ಲಿ ಹಣ ಪಾವತಿ ಆಗೋವರೆಗೂ ಹೆಚ್ಚುವರಿ ಅವಧಿಗೆ ಜೈಲಿನಲ್ಲಿರಿಸುವಂತೆ ಹೇಳಿದೆ. ನಾಲ್ಕನೇ ಆರೋಪಿ ಕಟ್ಟಡದ ಹೊರಗೆ ನಿಂತಿದ್ದರಿಂದ ಮತ್ತು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲದ ಕಾರಣ ಆತನ ಮೇಲಿನ ಆರೋಪ ಸಾಬೀತಾಗದೆ ಖುಲಾಸೆಗೊಳಿಸಿ ಆದೇಶ ಮಾಡಿದೆ.
Three men have been found guilty of impersonating Dubai Police criminal investigations officers to carry out an armed robbery at a gold trading company's office in the emirate. Dubai Criminal Court convicted the men, all of Pakistani nationality, of theft, unlawful entry, and impersonating law enforcement officers to intimidate and steal from two victims at the company's office.
10-11-25 07:17 pm
Bangalore Correspondent
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
'ನೋ ಚೇರ್ ಇನ್ ನವೆಂಬರ್' ಎಐ ವಿಡಿಯೋ ಹಂಚಿಕೊಂಡ ಬಿಜೆ...
10-11-25 01:23 pm
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
11-11-25 10:56 pm
HK News Desk
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
ದೆಹಲಿಯಲ್ಲಿ ಭಾರೀ ಬಾಂಬ್ ಸ್ಫೋಟ ; ಛಿದ್ರಗೊಂಡು ಚದುರ...
10-11-25 09:08 pm
11-11-25 10:42 pm
Mangalore Correspondent
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm