ಬ್ರೇಕಿಂಗ್ ನ್ಯೂಸ್
12-06-25 10:11 pm HK News Desk ದೇಶ - ವಿದೇಶ
ಅಹಮದಾಬಾದ್, ಜೂ 12 : ನೀವಿದನ್ನ ನಂಬ್ತೀರೋ ಇಲ್ವೋ ಗೊತ್ತಿಲ್ಲ, ಆದ್ರೆ ಇದು ನಿಜಕ್ಕೂ ಕಥೆಯಲ್ಲ, ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬದುಕಿ ಉಳಿದ ರಮೇಶ್ ವಿಶ್ವಾಸ್ಕುಮಾರ್ ಅನ್ನೋ ಜೀವಂತ ಸಾಕ್ಷಿಯ ಮಾತುಗಳಿವು. ಇವರು ಲಂಡನ್ಗೆ ಹೋಗ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ 242 ಜನರಲ್ಲಿ ಆಸ್ಪತ್ರೆಯಲ್ಲಿ ಜೀವಂತವಾಗಿ ಸಿಕ್ಕ ಏಕೈಕ ಅದೃಷ್ಟವಂತ
"ನಾನು ಎಚ್ಚರವಾದಾಗ, ಸುತ್ತಲೂ ಬರೀ ಶವಗಳು ಬಿದ್ದಿದ್ವು... ನನಗೆ ಎದೆ ಒಡೆದಂತಾಯ್ತು. ಭಯದಿಂದ ಎದ್ದು ಓಡಲು ಶುರುಮಾಡಿದೆ," ಅಂತ 40 ವರ್ಷದ ರಮೇಶ್ ವಿಶ್ವಾಸ್ಕುಮಾರ್ ಗುರುವಾರ ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ಅಪಘಾತದ ಬಗ್ಗೆ ಹೇಳುವಾಗ ಅವರ ಮಾತುಗಳು ನಡುಗುತ್ತಿದ್ದವು.
ಟೇಕ್ ಆಫ್ ಆದ 30 ಸೆಕೆಂಡ್ ಅಷ್ಟೇ ಆಗಿತ್ತು ಅನ್ಸುತ್ತೆ, ದೊಡ್ಡ ಶಬ್ದ ಬಂತು, ಆಮೇಲೆ ವಿಮಾನ ನೆಲಕ್ಕೆ ಬಡಿದುಬಿಡ್ತು. ಎಲ್ಲವೂ ಎಷ್ಟೊಂದು ವೇಗವಾಗಿ ನಡೀತು ಅಂದ್ರೆ, ಏನಾಯ್ತು ಅಂತ ಅರ್ಥ ಮಾಡ್ಕೊಳ್ಳೋಕೆ ಸಮಯನೇ ಸಿಗಲಿಲ್ಲ," ಅಂತ ವಿಶ್ವಸ್ ವಿವರಿಸಿದ್ರು. ಅವರ ಎದೆ, ಕಣ್ಣು, ಕಾಲುಗಳಿಗೆ ಏಟು ಬಿದ್ದಿದ್ರೂ, ಪ್ರಜ್ಞೆ ಇದೆ, ಮಾತನಾಡಬಲ್ಲರು. ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸಾಮಾನ್ಯ ವಾರ್ಡ್ನಲ್ಲಿ ಪತ್ರಕರ್ತರು ಮಾತಾಡಿಸಿದಾಗ, ಆ ಭಯಾನಕ ದೃಶ್ಯವನ್ನ ಮರಳಿ ನೆನಪಿಸಿಕೊಳ್ತಿದ್ದಾಗ ಅವರ ಮಾತುಗಳು ತೊದಲುತ್ತಿದ್ದವು.
ರಮೇಶ್ ವಿಶ್ವಾಸ್ಕುಮಾರ್ ಬ್ರಿಟಿಷ್ ಪ್ರಜೆ. ಕೆಲ ದಿನಗಳಿಂದ ಕುಟುಂಬವನ್ನ ನೋಡೋಕೆ ಭಾರತಕ್ಕೆ ಬಂದಿದ್ರು. ಲಂಡನ್ಗೆ ತಮ್ಮ ಅಣ್ಣ, 45 ವರ್ಷದ ಅಜಯ್ ಕುಮಾರ್ ರಮೇಶ್ ಜೊತೆ ವಾಪಸ್ ಹೋಗ್ತಿದ್ರು. ಆದ್ರೆ ಈಗ ಅಜಯ್ ಎಲ್ಲಿ ಹೋದ್ರು ಅಂತ ಗೊತ್ತಿಲ್ಲ. "ನಾವು ಒಟ್ಟಿಗೆ ಬಂದ್ವಿ. ಅಜಯ್ ನನ್ನ ಜೊತೆಗೇ ಇದ್ದ. ಆದ್ರೆ ವಿಮಾನದಲ್ಲಿ ಅವನು ಬೇರೆ ಸೀಟಿನಲ್ಲಿ ಕೂತಿದ್ದ. ಈಗ ಅವನು ಎಲ್ಲಿದಾನೋ ಗೊತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ," ಅಂತ ರಮೇಶ್ ಕುಮಾರ್ ವಿಶ್ವಾಸ್ ಕಣ್ಣೀರು ಹಾಕ್ತಿದ್ರು.
In a deeply emotional and harrowing account, Ramesh Vishwaskumar — the sole survivor of the devastating Air India plane crash in Ahmedabad — shared his terrifying experience from his hospital bed, still shaken and struggling to process the tragedy that claimed 246 other lives.
14-07-25 12:50 pm
Bangalore Correspondent
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm