ಬ್ರೇಕಿಂಗ್ ನ್ಯೂಸ್
11-08-20 04:50 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 11: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೇಹಸ್ಥಿತಿ ಗಂಭೀರವಾಗಿದೆ. ಸದ್ಯಕ್ಕೆ ಮುಖರ್ಜಿಯವರನ್ನು ಎಮರ್ಜೆನ್ಸಿ ವೆಂಟಿಲೇಟರ್ ನಲ್ಲಿ ಇರಿಸಲಾಗಿದ್ದು ಆರೋಗ್ಯ ವಿಷಮವಾಗುತ್ತಿದೆ ಎಂದು ಅವರನ್ನು ಸರ್ಜರಿಗೆ ಒಳಪಡಿಸಿದ ದೆಹಲಿಯ ಸೇನಾ ಆಸ್ಪತ್ರೆ ಅಧಿಕೃತವಾಗಿ ತಿಳಿಸಿದೆ.
ನಿನ್ನೆಯಷ್ಟೇ ಪ್ರಣಬ್ ಮುಖರ್ಜಿ ಅವರನ್ನು ಬ್ರೈನ್ ಸರ್ಜರಿಗೆ ಒಳಪಡಿಸಲಾಗಿತ್ತು. ಆದರೆ, ಸರ್ಜರಿ ಬಳಿಕ ಅವರು ಕೋಮಾ ಸ್ಥಿತಿಯಿಂದ ಹೊರಬಂದಿಲ್ಲ. ವೆಂಟಿಲೇಟರ್ ಮೂಲಕ ಶ್ವಾಸ ಪ್ರಕ್ರಿಯೆ ಮುಂದುವರಿಸಲಾಗಿತ್ತು. ಇಂದು ದೇಹಸ್ಥಿತಿ ಮತ್ತಷ್ಟು ವಿಷಮವಾಗಿದೆ ಎಂದು ಆರ್ ಆರ್ ಆಸ್ಪತ್ರೆಯಿಂದ ನೀಡಿರುವ ಬುಲೆಟಿನ್ ನಲ್ಲಿ ವೈದ್ಯರು ತಿಳಿಸಿದ್ದಾರೆ.
ಸರ್ಜರಿಗೂ ಮುನ್ನ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್ ಆಗಿದ್ದರು. ಈ ಬಗ್ಗೆ ಪ್ರಣಬ್ ಮುಖರ್ಜಿಯವರ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಹೇಳಿಕೊಳ್ಳಲಾಗಿತ್ತು. ಆನಂತ್ರ ಮುಖರ್ಜಿ ಅವರನ್ನು ಮೆದುಳಿನಲ್ಲಿ ರಕ್ತಸ್ರಾವ ಹಿನ್ನೆಲೆಯಲ್ಲಿ ತುರ್ತಾಗಿ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿತ್ತು. ದುರದೃಷ್ಟ ಅಂದ್ರೆ ಶಸ್ತ್ರಚಿಕಿತ್ಸೆ ಬಳಿಕ ಕೋಮಾಕ್ಕೆ ಜಾರಿದ 84 ವರ್ಷದ ಮುಖರ್ಜಿ ಮರಳಿ ವಾಸ್ತವಕ್ಕೆ ಬಂದಿಲ್ಲ.
ಪ್ರಣಬ್ ಮುಖರ್ಜಿಯವರು ಭಾರತದ 13 ನೇ ರಾಷ್ಟ್ರಪತಿಯಾಗಿದ್ದು 2012ರಿಂದ 2017ರ ವರೆಗೆ ಈ ಹುದ್ದೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವೇ ಕೆಲವು ನಿಷ್ಠಾವಂತ ಮತ್ತು ಅಪಾರ ಜ್ಞಾನವುಳ್ಳ ಮುತ್ಸದ್ಧಿಗಳಲ್ಲಿ ಮುಖರ್ಜಿ ಒಬ್ಬರು..
19-11-25 02:16 pm
Bangalore Correspondent
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
Deputy CM D.K. Shivakumar: ರಾಜ್ಯದ ಐದು ಕಡೆಗಳಲ್...
17-11-25 07:25 pm
ಖರ್ಗೆ ಕೋಟೆಯಲ್ಲಿ ಆರೆಸ್ಸೆಸ್ ಸಂಚಲನ ; ಒಂದೂವರೆ ಕಿಮ...
16-11-25 09:15 pm
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
19-11-25 06:47 pm
HK News Desk
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
ಉಮ್ರಾ ಯಾತ್ರೆ ತೆರಳಿದ್ದ ಹೈದ್ರಾಬಾದ್ ಮೂಲದ 45 ಯಾತ್...
17-11-25 06:13 pm
19-11-25 07:28 pm
Mangalore Correspondent
Mangalore, Sbi General Insurance, Consumer Co...
19-11-25 01:01 pm
ಅಡ್ಯಾರ್ ಕಣ್ಣೂರಿನಲ್ಲಿ ಮಂಗಳೂರಿಗೆ ನೀರು ಪೂರೈಸುವ ಪ...
18-11-25 10:18 pm
UT Khader, Ullal, Mangalore Dc, Ashwini: ತನ್ನ...
18-11-25 07:03 pm
Mangalore case, Police, Inspector Balakrishna...
18-11-25 11:27 am
19-11-25 06:07 pm
Bangalore Correspondent
ಕೆಂಪುಕೋಟೆ ಕಾರು ಸ್ಫೋಟಕ್ಕೆ ಉಮರ್ ಶೂನಲ್ಲಿತ್ತು ಟ್ರ...
18-11-25 09:09 pm
ರಾಜ್ಯದಲ್ಲೇ ಅತಿದೊಡ್ಡ ಡಿಜಿಟಲ್ ಅರೆಸ್ಟ್ ವಂಚನೆ ; ಸ...
18-11-25 11:18 am
ದುಬಾರಿ ಪಾರ್ಸೆಲ್ ಇದೆ, ಕಸ್ಟಮ್ಸ್ ಸುಂಕ ಕಟ್ಟಲು ಹೇಳ...
17-11-25 12:54 pm
ಬೆಳಗಾವಿಯಲ್ಲಿ ಕುಳಿತು ಅಮೆರಿಕನ್ನರಿಗೆ ಗಾಳ ; ಆನ್ಲೈ...
14-11-25 05:32 pm