ಬ್ರೇಕಿಂಗ್ ನ್ಯೂಸ್
14-06-26 01:08 pm HK News Staffer ದೇಶ - ವಿದೇಶ
ತಿರುವನಂತಪುರಂ, ಜೂನ್ 14: ಕೇರಳದಲ್ಲಿ ಕೆಎಸ್ಆರ್ಟಿಸಿ 'ಸಾಮಾನ್ಯ' ಬಸ್ಗಳಲ್ಲಿ ಮಹಿಳೆಯರಿಗಾಗಿ 'ಪ್ರಿಯದರ್ಶಿನಿ' ಉಚಿತ ಪ್ರಯಾಣ ಯೋಜನೆ ಜಾರಿಗೆ ಬಂದಿದ್ದು ಜೂನ್ 15ರಂದು ಮುಖ್ಯಮಂತ್ರಿ ವಿಡಿ ಸತೀಶನ್ ಚಾಲನೆ ನೀಡಲಿದ್ದಾರೆ.
ವಿಶೇಷ ಅಂದರೆ, ಕೇರಳದಲ್ಲಿ ಈ ಸೌಲಭ್ಯವು ಎಲ್ಲಾ ಮಹಿಳೆಯರಿಗೂ ಅನ್ವಯವಾಗಲಿದೆ. ಕೇರಳದವರು ಮತ್ತು ಹೊರಗಿನಿಂದ ಭೇಟಿ ನೀಡುವವರಿಗೂ ಈ ಸೌಲಭ್ಯ ದೊರಕಲಿದೆ. ಲಿಂಗತ್ವ ಅಲ್ಪಸಂಖ್ಯಾತ ಪ್ರಯಾಣಿಕರಿಗೂ ಈ ಯೋಜನೆ ಲಾಭ ಸಿಗಲಿದೆ. ಇದಕ್ಕಾಗಿ ಪ್ರತ್ಯೇಕ ಗುರುತಿನ ಚೀಟಿ ತೋರಿಸುವ ಅಗತ್ಯವಿಲ್ಲ. ಬದಲಾಗಿ, ಅವರಿಗೆ "ಶೂನ್ಯ ದರ" (zero-fare) ಟಿಕೆಟ್ಗಳನ್ನು ನೀಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಈ ಯೋಜನೆ ಲಾಭ ಪಡೆದವರ ಸಂಖ್ಯೆ ಸಿಗಲಿದ್ದು ಆರ್ಥಿಕ ಪರಿಣಾಮವನ್ನು ಅಂದಾಜು ಮಾಡಲು ಸಹಾಯವಾಗಲಿದೆ.
ರಾಜ್ಯದಾದ್ಯಂತ ಕಾರ್ಯಾಚರಿಸುತ್ತಿರುವ 3,125 ಕೆಎಸ್ಆರ್ಟಿಸಿ 'ಸಾಮಾನ್ಯ' ಬಸ್ಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಇದರಲ್ಲಿ ಅತಿ ಹೆಚ್ಚು ಅಂದರೆ 687 ಬಸ್ಗಳು ತಿರುವನಂತಪುರಂ ಜಿಲ್ಲೆಯಲ್ಲಿವೆ. ಈ ಬಗ್ಗೆ ಸಾರಿಗೆ ಸಚಿವ ಸಿ.ಪಿ. ಜಾನ್ ಮಾಹಿತಿ ನೀಡಿದ್ದು, ಈ ಯೋಜನೆಯಿಂದ ಅನೇಕ ಮಹಿಳೆಯರಿಗೆ ದೈನಂದಿನ ಪ್ರಯಾಣದ ವೆಚ್ಚದಲ್ಲಿ ಉಳಿತಾಯ ಆಗಲಿದ್ದು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದರು. ಈ ಯೋಜನೆಗಾಗಿ ರಾಜ್ಯ ಸರ್ಕಾರಕ್ಕೆ 800 ಕೋಟಿಯಷ್ಟು ನಷ್ಟ ಎದುರಾಗಲಿದೆ.
ಯಾವೆಲ್ಲಾ ಬಸ್ ಗಳಲ್ಲಿ ಸೌಲಭ್ಯ ?
ಸಾಮಾನ್ಯ ಮತ್ತು ಪ್ರಮುಖ ನಗರ ಸಾರಿಗೆ ಬಸ್ ಗಳಲ್ಲಿ ಮಾತ್ರ ಈ ಫ್ರೀ ಯೋಜನೆ ಇರಲಿದೆ. ಲಿಮಿಟೆಡ್ ಸ್ಟಾಪ್ ಇರುವ ಸಾಮಾನ್ಯ ಸಾರಿಗೆ ಬಸ್ ಗಳಲ್ಲಿಯೂ ಉಚಿತ ಸಂಚಾರ ಇರಲಿದ್ದು ಈ ಸೌಲಭ್ಯ ಇರುವ ಬಸ್ ಗಳಲ್ಲಿ ಪ್ರತ್ಯೇಕ ಬೋರ್ಡ್ ಅಳವಡಿಸಲು ಸಾರಿಗೆ ಸಚಿವರು ಸೂಚಿಸಿದ್ದಾರೆ. ಕೆಎಸ್ಸಾರ್ಟಿಸಿ ಬಿಡುಗಡೆಗೊಳಿಸಿದ ಪಟ್ಟಿ ಪ್ರಕಾರ, ಏಳು ವಿಭಾಗಗಳಲ್ಲಿ ಉಚಿತ ಸಾರಿಗೆ ಸೌಲಭ್ಯ ಇರಲಿದೆ. ಸಾಮಾನ್ಯ ಬಸ್, ನಗರ ಸಾರಿಗೆ, ಟೌನ್ ಟು ಟೌನ್ ಸಾರಿಗೆ, ಲಿಮಿಟೆಡ್ ಸ್ಟಾಪ್ ಸಾರಿಗೆ ಬಸ್ ಗಳಲ್ಲಿ ಮಹಿಳೆಯರು ಉಚಿತ ಸಂಚಾರ ಮಾಡಬಹುದು.
ಇದಲ್ಲದೆ, ಗ್ರಾಮೀಣ ಸಂಪರ್ಕವನ್ನು ಸುಧಾರಿಸಲು ಹಿಂದಿನ ಎಲ್ಡಿಎಫ್ ಸರ್ಕಾರವು ಆರಂಭಿಸಿದ್ದ ಗ್ರಾಮೀಣ ಬಸ್ ಸೌಲಭ್ಯ 'ಗ್ರಾಮ ವಂಡಿ' ಯೋಜನೆಯನ್ನು ಸ್ಥಳೀಯ ಸಂಸ್ಥೆಗಳ ಸಹಾಯದೊಂದಿಗೆ 58 ರಿಂದ 500 ಸೇವೆಗಳಿಗೆ ವಿಸ್ತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಯೋಜಿಸಿದೆ.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am