ಲಸಿಕೆಯೇ ಬೇಡವೆಂದು ನದಿಗೆ ಹಾರಿ ತಪ್ಪಿಸಿಕೊಂಡ ಉತ್ತರ ಪ್ರದೇಶದ ಹಳ್ಳಿ ಜನ

25-05-21 02:49 pm       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಘಟನೆ ಬೆಳಕಿಗೆ ಬಂದಿದೆ.

Photo credits : zoom news

ಲಕ್ನೋ, ಮೇ 25: ದೇಶದೆಲ್ಲೆಡೆ ಕೊರೊನಾ ಲಸಿಕೆಗಾಗಿ ಹಾಹಾಕಾರ ಎದ್ದಿದ್ದರೆ, ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಘಟನೆ ಬೆಳಕಿಗೆ ಬಂದಿದೆ.

ಕೊರೊನಾಗೆ ಲಸಿಕೆ ಪಡೆಯಬೇಕು ಎನ್ನುವ ನೆಲೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ತೆರಳಿದ್ದರು. ಅಲ್ಲದೆ, ಲಸಿಕೆ ಪಡೆಯಲು ಒಪ್ಪಿದ ಜನರಿಗೆ ಸ್ಥಳದಲ್ಲೇ ಲಸಿಕೆಯನ್ನೂ ನೀಡಲಾಗುತ್ತಿತ್ತು. ಆದರೆ, ಗ್ರಾಮಸ್ಥರು ಅಧಿಕಾರಿಗಳ ಮಾತು ಒಪ್ಪದೆ ನೀವು ಲಸಿಕೆ ನೀಡುತ್ತಿಲ್ಲ. ಅದರಲ್ಲಿ ಏನೋ ವಿಷ ಇದೆ ಎಂದು ಭ್ರಮಿಸಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಬಾರಾಬಂಕಿ ಗ್ರಾಮದಲ್ಲಿ ಹರಿಯುವ ಸರಯೂ ನದಿಗೆ ಹಾರಿ ಅಧಿಕಾರಿಗಳ ಕೈಯಿಂದ ತಪ್ಪಿಸಿ ಓಡಿದ್ದಾರೆ.

ರಾಮನಗರ್ ಉಪ ವಿಭಾಗಾಧಿಕಾರಿ ರಾಜೀವ ಕುಮಾರ್ ಶುಕ್ಲಾ ಈ ಬಗ್ಗೆ ಹೇಳಿಕೆ ನೀಡಿದ್ದು ಗ್ರಾಮಸ್ಥರಿಗೆ ಅರಿವು ಮೂಡಿಸಿದರೂ ನಮ್ಮ ಮಾತು ಕೇಳಲಿಲ್ಲ. ಕೇವಲ 14 ಮಂದಿಯಷ್ಟೇ ಲಸಿಕೆ ಪಡೆದಿದ್ದಾರೆ. ಲಸಿಕೆಯಲ್ಲ , ಅದು ವಿಷ ಎನ್ನುತ್ತಲೇ ಕೆಲವರು ನದಿಗೆ ಹಾರಿ ಓಡಿದ್ದಾರೆ ಎಂದು ಹೇಳಿಕೆದ್ದಾರೆ.

ದೇಶದಲ್ಲಿ 18ರಿಂದ 44 ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ಸಾಧ್ಯವಾಗದೆ, ಲಸಿಕೆ ಪೂರೈಕೆಯಲ್ಲೇ ಕೊರತೆ ಎದುರಾಗಿದೆ. ಇದೇ ವೇಳೆ, ವೈದ್ಯಕೀಯ ತಜ್ಞರು ಎಲ್ಲರೂ ಕೋವಿಡ್ ಸೋಂಕನ್ನು ತಪ್ಪಿಸಲು ಲಸಿಕೆ ಪಡೆಯಲೇಬೇಕೆಂದು ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಳ್ಳಿಯ ಜನರು ಲಸಿಕೆಯ ಬಗ್ಗೆಯೇ ಭಯ ಹೊಂದಿದ್ದಲ್ಲದೆ, ಅಧಿಕಾರಿಗಳ ಮಾತು ಕೇಳದೆ ಓಡಿ ತಪ್ಪಿಸಿಕೊಳ್ಳುತ್ತಿರುವ ಪ್ರಸಂಗ ಎದುರಾಗಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

Even as people in many states are scrambling to get vaccinated, residents of a village in Uttar Pradesh’s Barabanki district fled their homes when a team of health officials reached there to carry out a vaccination campaign on Saturday evening and jumped into the river Saryu.