ಬ್ರೇಕಿಂಗ್ ನ್ಯೂಸ್
25-05-21 02:49 pm Headline Karnataka News Network ದೇಶ - ವಿದೇಶ
Photo credits : zoom news
ಲಕ್ನೋ, ಮೇ 25: ದೇಶದೆಲ್ಲೆಡೆ ಕೊರೊನಾ ಲಸಿಕೆಗಾಗಿ ಹಾಹಾಕಾರ ಎದ್ದಿದ್ದರೆ, ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಲಸಿಕೆ ನೀಡಲು ಬಂದ ಆರೋಗ್ಯ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಘಟನೆ ಬೆಳಕಿಗೆ ಬಂದಿದೆ.
ಕೊರೊನಾಗೆ ಲಸಿಕೆ ಪಡೆಯಬೇಕು ಎನ್ನುವ ನೆಲೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ತೆರಳಿದ್ದರು. ಅಲ್ಲದೆ, ಲಸಿಕೆ ಪಡೆಯಲು ಒಪ್ಪಿದ ಜನರಿಗೆ ಸ್ಥಳದಲ್ಲೇ ಲಸಿಕೆಯನ್ನೂ ನೀಡಲಾಗುತ್ತಿತ್ತು. ಆದರೆ, ಗ್ರಾಮಸ್ಥರು ಅಧಿಕಾರಿಗಳ ಮಾತು ಒಪ್ಪದೆ ನೀವು ಲಸಿಕೆ ನೀಡುತ್ತಿಲ್ಲ. ಅದರಲ್ಲಿ ಏನೋ ವಿಷ ಇದೆ ಎಂದು ಭ್ರಮಿಸಿ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ, ಬಾರಾಬಂಕಿ ಗ್ರಾಮದಲ್ಲಿ ಹರಿಯುವ ಸರಯೂ ನದಿಗೆ ಹಾರಿ ಅಧಿಕಾರಿಗಳ ಕೈಯಿಂದ ತಪ್ಪಿಸಿ ಓಡಿದ್ದಾರೆ.
ರಾಮನಗರ್ ಉಪ ವಿಭಾಗಾಧಿಕಾರಿ ರಾಜೀವ ಕುಮಾರ್ ಶುಕ್ಲಾ ಈ ಬಗ್ಗೆ ಹೇಳಿಕೆ ನೀಡಿದ್ದು ಗ್ರಾಮಸ್ಥರಿಗೆ ಅರಿವು ಮೂಡಿಸಿದರೂ ನಮ್ಮ ಮಾತು ಕೇಳಲಿಲ್ಲ. ಕೇವಲ 14 ಮಂದಿಯಷ್ಟೇ ಲಸಿಕೆ ಪಡೆದಿದ್ದಾರೆ. ಲಸಿಕೆಯಲ್ಲ , ಅದು ವಿಷ ಎನ್ನುತ್ತಲೇ ಕೆಲವರು ನದಿಗೆ ಹಾರಿ ಓಡಿದ್ದಾರೆ ಎಂದು ಹೇಳಿಕೆದ್ದಾರೆ.
ದೇಶದಲ್ಲಿ 18ರಿಂದ 44 ವಯಸ್ಸಿನವರಿಗೆ ಲಸಿಕೆ ನೀಡುವುದಕ್ಕೆ ಸಾಧ್ಯವಾಗದೆ, ಲಸಿಕೆ ಪೂರೈಕೆಯಲ್ಲೇ ಕೊರತೆ ಎದುರಾಗಿದೆ. ಇದೇ ವೇಳೆ, ವೈದ್ಯಕೀಯ ತಜ್ಞರು ಎಲ್ಲರೂ ಕೋವಿಡ್ ಸೋಂಕನ್ನು ತಪ್ಪಿಸಲು ಲಸಿಕೆ ಪಡೆಯಲೇಬೇಕೆಂದು ಹೇಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಳ್ಳಿಯ ಜನರು ಲಸಿಕೆಯ ಬಗ್ಗೆಯೇ ಭಯ ಹೊಂದಿದ್ದಲ್ಲದೆ, ಅಧಿಕಾರಿಗಳ ಮಾತು ಕೇಳದೆ ಓಡಿ ತಪ್ಪಿಸಿಕೊಳ್ಳುತ್ತಿರುವ ಪ್ರಸಂಗ ಎದುರಾಗಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
Even as people in many states are scrambling to get vaccinated, residents of a village in Uttar Pradesh’s Barabanki district fled their homes when a team of health officials reached there to carry out a vaccination campaign on Saturday evening and jumped into the river Saryu.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm