ಬ್ರೇಕಿಂಗ್ ನ್ಯೂಸ್
30-08-20 05:51 pm Headline Karnataka News Network ದೇಶ - ವಿದೇಶ
ನವದೆಹಲಿ, ಆಗಸ್ಟ್ 30: ಭಾರತವು ವಿಶ್ವ ರಾಷ್ಟ್ರಗಳಿಗೆ ಆಟದ ಸಾಮಾನುಗಳನ್ನು ಪೂರೈಸುವ 'ಟಾಯ್ ಹಬ್' ಆಗಬಲ್ಲ ಸಾಮರ್ಥ್ಯ ಪಡೆದಿದೆ. ಸ್ಥಳೀಯ ಮಟ್ಟದ ಆಟಿಕೆಗಳನ್ನು ವಿಶ್ವ ಮಟ್ಟಕ್ಕೆ ಒಯ್ಯಲು ಈಗ ಸಕಾಲ. ಇದನ್ನು ಬಳಸಿಕೊಳ್ಳಲು ಸ್ಟಾರ್ಟ್ ಅಪ್ ಉದ್ಯಮಿಗಳು ಶ್ರಮ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಮೋದಿ, ಜಗತ್ತಿನ ಟಾಯ್ ಇಂಡಸ್ಟ್ರೀ ಏಳು ಲಕ್ಷ ಕೋಟಿಯಷ್ಟು ವಹಿವಾಟು ಹೊಂದಿದೆ. ಆದರೆ, ಇದರಲ್ಲಿ ಭಾರತದ ಪಾಲು ಇರುವುದು ಅತಿ ಸಣ್ಣದು. ಸ್ಟಾರ್ಟ್ ಅಪ್ ಉದ್ಯಮಿಗಳು ಈ ಬಗ್ಗೆ ಕಾರ್ಯತತ್ಪರ ಆಗಬೇಕು. "ವೋಕಲ್ ಫಾರ್ ಲೋಕಲ್ ಟಾಯ್ಸ್" ಆಗುವಲ್ಲಿ ಯೋಜನೆ ರೂಪಿಸಬೇಕು. ನಮ್ಮ ಹಳ್ಳಿಗಳ ಆಟಿಕೆಗಳು ವಿಶ್ವ ಮಟ್ಟಕ್ಕೆ ಪರಿಚಯ ಆಗಬೇಕು. ಜನರನ್ನು ಸೆಳೆಯಬಲ್ಲ ಆಟಿಕೆಗಳನ್ನು ತಯಾರಿಸಬೇಕು ಎಂದು ಕರೆ ನೀಡಿದ್ದಾರೆ. ಸದ್ಯಕ್ಕೆ ಇಡೀ ಜಗತ್ತಿಗೆ ಚೀನಾ ನಿರ್ಮಿತ ಆಟಿಕೆಗಳ ಪೂರೈಕೆ ಆಗುತ್ತಿದೆ. ಕೊರೊನಾ ಬಳಿಕ ಚೀನಾ ನಿರ್ಮಿತ ವಸ್ತುಗಳಿಗೆ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ನಿರ್ಬಂಧ ವಿಧಿಸಿವೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತದಲ್ಲಿ ಆಟಿಕೆಗಳ ತಯಾರಿ ಆದರೆ ಟಾಯ್ ಹಬ್ ಆಗಬಹುದು ಎಂದು ಪರೋಕ್ಷವಾಗಿ ಈ ವಿಚಾರ ಎತ್ತದೆ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. ಇದಲ್ಲದೆ, ಕಂಪ್ಯೂಟರ್ ಗೇಮ್ಸ್ ಅಭಿವೃದ್ಧಿ ಪಡಿಸಲು ಕೂಡ ಯುವ ಉದ್ಯಮಿಗಳು ಮುಂದಾಗಬೇಕು ಎಂದು ಮೋದಿ ಕರೆ ನೀಡಿದ್ದಾರೆ.
ಈಗ ದೇಶದಲ್ಲಿ ಹಬ್ಬಗಳ ಸಮಯ. ನಮ್ಮ ಹಬ್ಬಗಳಿಗೂ ಪ್ರಕೃತಿಗೂ ಹತ್ತಿರದ ಸಂಬಂಧ ಇದೆ. ಇಂಥ ಸಂದರ್ಭದಲ್ಲೇ ಕೊರೊನಾ ನಮ್ಮನ್ನು ಸಂಕಷ್ಟಕ್ಕೀಡು ಮಾಡಿದೆ. ಹಬ್ಬಗಳನ್ನು ಆಚರಿಸುವ ವೇಳೆಯೂ ಜನ ಕೊರೊನಾ ಶಿಸ್ತನ್ನು ಪಾಲಿಸಬೇಕಿದೆ. ಕೃಷಿಕರು ಥರಾವರಿ ಬೆಳೆಗಳನ್ನು ಬೆಳೆಯಬೇಕು. ವಿವಿಧ ಧಾನ್ಯಗಳನ್ನು ಬೆಳೆದು ಸಮೃದ್ಧಿ ಗಳಿಸಬೇಕು ಎಂದು ಹೇಳಿದ್ದಾರೆ.
2022ಕ್ಕೆ ದೇಶ ಸ್ವಾತಂತ್ರ್ಯ ಗಳಿಸಿ 75 ಸಂವತ್ಸರಗಳನ್ನು ಪೂರೈಸಲಿದೆ. ಇಂಥ ಸಂದರ್ಭದಲ್ಲಿ ನಮ್ಮ ಶಿಕ್ಷಕರಿಗೆ ಹೊಸ ಜವಾಬ್ದಾರಿಯನ್ನು ಕೊಡುತ್ತಿದ್ದೇನೆ. ಸ್ವಾತಂತ್ರ್ಯಕ್ಕಾಗಿ ತೆರೆಮರೆಯಲ್ಲಿ ದುಡಿದ 'ಅನ್ ಸಂಗ್ ಹೀರೋ'ಗಳನ್ನ ಬೆಳಕಿಗೆ ತರುವಂತಾಗಲು ಕೊಡುಗೆ ನೀಡಬೇಕು. ನಮ್ಮ ಯುವಜನರು ಇಂಥ ಎಲೆಮರೆಯ ಕಾಯಿಗಳ ಬಗ್ಗೆ ಅರಿವು ಹೊಂದುವ ಅಗತ್ಯವಿದೆ ಎಂದು ಮೋದಿ ಸೂಚ್ಯವಾಗಿ ಹೇಳಿದ್ದಾರೆ.
19-09-24 08:42 pm
Bangalore Correspondent
N Santosh Hegde: ಭ್ರಷ್ಟಾಚಾರ ಮಿತಿಮೀರಿದರೆ ದೇಶದಲ...
19-09-24 08:07 pm
Zameer Ahmed, Palestinian flag: ಪ್ಯಾಲೆಸ್ತೀನ್...
19-09-24 08:03 pm
Shobha Karandlaje, R Ashok, Nagamangala riot...
19-09-24 06:48 pm
BJP MLA Munirathna, Rape Case; ಜಾತಿ ನಿಂದನೆ ಕೇ...
19-09-24 11:37 am
19-09-24 09:51 pm
HK News Desk
Lebanon blast, Pager; ಪೇಜರ್ ಸ್ಫೋಟ ಬೆನ್ನಲ್ಲೇ ವ...
19-09-24 11:42 am
ಸ್ಮಾರ್ಟ್ ಫೋನ್ ಹ್ಯಾಕ್ ಆಗುತ್ತೆ ಎಂದು ಪೇಜರ್ ಬಳಸುತ...
18-09-24 02:52 pm
ಹೆದ್ದಾರಿ ವೆಚ್ಚಕ್ಕಿಂತ ಹೆಚ್ಚು ಟೋಲ್ ವಸೂಲಿ ಯಾಕೆ ?...
18-09-24 02:46 pm
ಜಿಂಬಾಬ್ವೆಯಲ್ಲಿ ಭೀಕರ ಬರ ; ಜನರ ಹಸಿವು ನೀಗಿಸಲು ನ...
18-09-24 11:03 am
19-09-24 09:08 pm
Mangalore Correspondent
By elections, Kota Srinivas Poojary; ಕೋಟರಿಂದ...
19-09-24 04:53 pm
Mcc elections, Manoj Kumar mayor: ಮಂಗಳೂರು ಪಾಲ...
19-09-24 03:39 pm
Mangalore Mayor elections 2024: ಮಂಗಳೂರು ಮಹಾನಗ...
18-09-24 10:45 pm
Mangalore, Lawrence D’Souza, congress Labour...
18-09-24 10:29 pm
18-09-24 10:08 pm
Mangalore Correspondent
Bangalore fraud, Siddalingaiah Hiremath, Scam...
15-09-24 01:21 pm
MLA Munirathna Arrest: ತಿಂಗಳಿಗೆ 30 ಲಕ್ಷ ಲಂಚಕ್...
14-09-24 06:54 pm
Srimathi Shetty murder case, Mangalore Court...
14-09-24 11:52 am
Kristina Joksimovic, Miss Switzerland finalis...
13-09-24 10:50 pm