ಬ್ರೇಕಿಂಗ್ ನ್ಯೂಸ್
04-09-20 09:17 pm Headline Karnataka News Network ದೇಶ - ವಿದೇಶ
ಮುಂಬೈ, ಸೆಪ್ಟೆಂಬರ್ 4: ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸಿ ಹೊಸ ಕೊಡುಗೆ ನೀಡಲು ಮುಂದೆ ಬಂದಿದ್ದಾರೆ.
ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಸದ್ಯದಲ್ಲೇ ಆ್ಯಕ್ಷನ್ ಮಲ್ಟಿಪ್ಲೇಯರ್ ಗೇಮ್ ಒಂದನ್ನು ಬಿಡುಗಡೆ ಮಾಡಲಿದ್ದು ಇದರಲ್ಲಿ ಗೇಮ್ ಆಡುವ ಮಂದಿಗೆ ಆ್ಯಕ್ಷನ್ ಅನುಭವದ ಜೊತೆಗೆ ಸೈನಿಕರ ತ್ಯಾಗದ ಜೀವನದ ಕುರಿತು ಹೇಳುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ಈ ವಿಡಿಯೋ ಗೇಮ್ ನಿಂದ ಬರುವ ಆದಾಯದ 20 ಶೇಕಡಾ ಮೊತ್ತವನ್ನು ಸೈನಿಕರ "ಭಾರತ್ ಕೆ ವೀರ್" ಟ್ರಸ್ಟ್ ಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಅಕ್ಷಯ್ ಕುಮಾರ್, ತಮ್ಮ ಇನ್ ಸ್ಟಾ ಗ್ರಾಮ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು ಮೋದಿಯವರ ಆತ್ಮನಿರ್ಭರ್ ಚಳವಳಿಯನ್ನು ಬೆಂಬಲಿಸಿ, ಹೊಸ ಆ್ಯಕ್ಷನ್ ಗೇಮ್ ತರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಚೀನಾ ಮೂಲದ ಜನಪ್ರಿಯ ವಿಡಿಯೋ ಗೇಮ್ ಏಪ್ ಪಬ್ ಜಿ ಬ್ಯಾನ್ ಆದ ಸಂದರ್ಭದಲ್ಲಿಯೇ ಅಕ್ಷಯ್ ಕುಮಾರ್ FAU-G ಮಾದರಿಯ ಗೇಮ್ ಪ್ರಕಟಿಸಿದ್ದು ಭವಿಷ್ಯದಲ್ಲಿ ಪಬ್ ಜಿ ಜಾಗ ತುಂಬಲಿದೆಯೇ ಎನ್ನುವ ಮಾತು ಕೇಳಿಬಂದಿದೆ. ಪಬ್ ಜಿ ನಿಷೇಧ ಆಗಿರುವುದು ಭಾರತದಲ್ಲಿ ಬಹುತೇಕ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಬೇಸರ ತರಿಸಿತ್ತು. ಈಗ ಅಕ್ಷಯ್ ತಮ್ಮ ಹೊಸ ಮಾದರಿಯ ಗೇಮ್ ಪ್ಲಾನ್ ಪ್ರಕಟ ಮಾಡಿರುವುದು ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಹೊಸ ಗೇಮ್ ಮೊಬೈಲ್ ಆ್ಯಪ್ ನಲ್ಲಿ ಸಿಗುವುದೇ ಅಥವಾ ಇನ್ಯಾವುದೇ ಪ್ಲಾಟ್ ಫಾರಂನಲ್ಲಿ ಸಿಗಲಿದೆಯೇ ಎಂದು ಅಕ್ಷಯ್ ಕುಮಾರ್ ಗೆ ನೆಟ್ಟಿಗರು ಕುತೂಹಲದ ಪ್ರಶ್ನೆ ಮುಂದಿಡುತ್ತಿದ್ದಾರೆ.
Join our WhatsApp group for latest news updates
Supporting PM @narendramodi’s AtmaNirbhar movement, proud to present an action game,Fearless And United-Guards FAU-G. Besides entertainment, players will also learn about the sacrifices of our soldiers. 20% of the net revenue generated will be donated to @BharatKeVeer Trust #FAUG pic.twitter.com/Q1HLFB5hPt
— Akshay Kumar (@akshaykumar) September 4, 2020
07-12-25 10:21 pm
HK News Desk
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
Dog Attack, Davangere: ಮಹಿಳೆ ಮೇಲೆ ರಾಟ್ ವೀಲರ್...
06-12-25 12:33 pm
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 10:45 pm
Udupi Correspondent
Inayat Ali, Mangalore Notice: ನ್ಯಾಶನಲ್ ಹೆರಾಲ್...
07-12-25 03:02 pm
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm