ಬ್ರೇಕಿಂಗ್ ನ್ಯೂಸ್
25-11-21 11:11 am HK news Desk ದೇಶ - ವಿದೇಶ
ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ದೋಣಿಯೊಂದು ಮುಳುಗಿದ್ದು ಹಲವಾರು ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ಮತ್ತು ಯುಕೆ ನಡುವಿನ ಕಡಲು ಪ್ರದೇಶದಲ್ಲಿ ಚಲಿಸುತ್ತಿದ್ದ ಈ ದೋಣಿ ಗಾಳಿಯ ಹೋಡೆತಕ್ಕೆ ಸಿಲುಕಿ ಮಗುಚಿಕೊಂಡಿದೆ ಎಂದು ಫ್ರೆಂಚ್ ಆಂತರಿಕ ಸಚಿವ ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಈ ಘಟನೆಯು ಫ್ರೆಂಚ್ ಕರಾವಳಿ ನಗರಗಳಾದ ಕ್ಯಾಲೈಸ್ ಮತ್ತು ಡಂಕರ್ಕ್ ಬಳಿ ಸಂಭವಿಸಿದೆ ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಸುಮಾರು 31ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಪ್ರಾಥಮಿಕ ವರದಿಗಳು ಬಂದಿವೆ.
ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಾರ, ಸ್ಥಳೀಯ ಮೀನುಗಾರರು ಮಗುಚಿದ ದೋಣಿ ಮತ್ತು ನೀರಿನ ಮೇಲೆ ತೇಲುತ್ತಿರುವ ದೇಹಗಳನ್ನು ಗುರುತಿಸಿದ ನಂತರ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
31 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 26 ಜನರು ಜೀವಂತವಾಗಿದ್ದಾರೆ" ಎಂದು ಫ್ರೆಂಚ್ ಜಿಲ್ಲೆ ಟೆಟೆಗೆಮ್ನ ಮೇಯರ್ ಮತ್ತು ಉತ್ತರ ಫ್ರಾನ್ಸ್ ಪ್ರದೇಶದ ಸಾರಿಗೆ ಉಪಾಧ್ಯಕ್ಷ ಫ್ರಾಂಕ್ ಧೆರ್ಸಿನ್ ಹೇಳಿದ್ದಾರೆ.
ರಾಯಿಟರ್ಸ್ ಪ್ರಕಾರ ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಒಬ್ಬ ಪುಟ್ಟ ಹುಡುಗಿ ಸೇರಿದ್ದಾರೆ ಎಂದು ಜೆರಾಲ್ಡ್ ಡರ್ಮನಿನ್ ಹೇಳಿದ್ದಾರೆ.
ಈ ವರ್ಷ 25,700 ಕ್ಕೂ ಹೆಚ್ಚು ಜನರು ಸಣ್ಣ ದೋಣಿಗಳಲ್ಲಿ ಯುಕೆಗೆ ಅಪಾಯಕಾರಿ ಪ್ರಯಾಣವನ್ನು ಮಾಡಿದ್ದಾರೆ - 2020 ಕ್ಕೆ ಹೋಲಿಸಿದರೆ ವಲಸೆ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ.
ಡೋವರ್ ಜಲಸಂಧಿ (Strait) ಪ್ರಪಂಚದಲ್ಲೇ ಅತ್ಯಂತ ಜನನಿಬಿಡ ಹಡಗು ಮಾರ್ಗವಾಗಿದೆ ಮತ್ತು ಈ ಹಿಂದೆ ಗಾಳಿ ತುಂಬಬಹುದಾದ ಸಣ್ಣ ಬೋಟುಗಳ ಮೂಲಕ ಬ್ರಿಟನ್ಗೆ ದಾಟಲು ಪ್ರಯತ್ನಿಸುತ್ತಿರುವವರ ಜೀವವನ್ನು ಬಲಿ ತೆಗೆದುಕೊಂಡಿದೆ.
ಈ ವಾರದ ಆರಂಭದಲ್ಲಿ, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಫ್ರಾನ್ಸ್ನಿಂದ ನಿರ್ಗಮಿಸುವ ಅಕ್ರಮ ವಲಸಿಗರ ಸಂಖ್ಯೆಯನ್ನು "ಸ್ವೀಕಾರಾರ್ಹವಲ್ಲ" ಎಂದು ಪ್ರತಿಕ್ರಿಯಿಸಿದ್ದರು. ಈ ಸಮಸ್ಯೆಯನ್ನು ನಿಭಾಯಿಸಲು 2021-22ರ ಅವಧಿಯಲ್ಲಿ ಫ್ರಾನ್ಸ್ಗೆ €62.7m (£54m) ನೀಡುವುದಾಗಿ UK ಭರವಸೆ ನೀಡಿದೆ.
At least 31 migrants bound for Britain died Wednesday when their boat sank in the English Channel, in what France’s interior minister called the biggest migration tragedy on the dangerous crossing to date.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm