ಯುಪಿಎ ಅನ್ನುವುದೇ ಇಲ್ಲವೆಂದ ಮಮತಾ ಬ್ಯಾನರ್ಜಿ ; ಬಿಜೆಪಿ ವಿರೋಧಿಗಳೆಲ್ಲ ಒಗ್ಗೂಡಲು ಕರೆಕೊಟ್ಟ ಎನ್ ಸಿಪಿ ಮುಖ್ಯಸ್ಥ ಶರದ್

01-12-21 06:37 pm       HK Desk news   ದೇಶ - ವಿದೇಶ

ಯುಪಿಎ ಅನ್ನುವುದೇ ಈಗ ಅಸ್ತಿತ್ವದಲ್ಲಿ ಇಲ್ಲ ಎಂದು ಟಿಎಂಸಿ ಮುಖ್ಯಸ್ಥೆ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮುಂಬೈ, ಡಿ.1: ಯುಪಿಎ ಅನ್ನುವುದೇ ಈಗ ಅಸ್ತಿತ್ವದಲ್ಲಿ ಇಲ್ಲ ಎಂದು ಟಿಎಂಸಿ ಮುಖ್ಯಸ್ಥೆ , ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮುಂಬೈನಲ್ಲಿ ಎನ್ ಸಿಪಿ ವರಿಷ್ಠ ಶರದ್ ಪವಾರ್ ಜೊತೆಗೆ ಮಾತುಕತೆ ನಡೆಸಿದ ಬಳಿಕ ಮಮತಾ ಬ್ಯಾನರ್ಜಿ ಈ ಮಾತು ಹೇಳಿದ್ದಾರೆ.

ದೇಶಾದ್ಯಂತ ಬಿಜೆಪಿ ವಿರೋಧಿ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿರುವ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಹೊರತಾದ ಪ್ರತ್ಯೇಕ ಒಕ್ಕೂಟವನ್ನು ರಚಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಹಲವು ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಶಿವಸೇನಾ ಮುಖಂಡರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವುತ್ ಅವರನ್ನೂ ಬ್ಯಾನರ್ಜಿ ಭೇಟಿಯಾಗಿದ್ದಾರೆ. ಯುಪಿಎ ಅನ್ನೋದು ಈಗ ಅಸ್ತಿತ್ವದಲ್ಲಿ ಇಲ್ಲ ಅನ್ನುವುದು ಕಾಂಗ್ರೆಸನ್ನು ಗುರಿಯಾಗಿಸಿ ಹೇಳಿದ್ದು, ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಯಾರಾದ್ರೂ ಕಾಂಗ್ರೆಸನ್ನು ದೂರವಿಟ್ಟು ಬಿಜೆಪಿಯನ್ನು ಸೋಲಿಸುತ್ತೇವೆಂಬ ಯೋಚನೆ ಮಾಡಿದ್ದರೆ, ಅದು ಕನಸು ಅಷ್ಟೇ ಆಗಿರತ್ತೆ ಎಂದಿದ್ದಾರೆ. ಭಾರತದ ರಾಜಕೀಯ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಇಲ್ಲದೆ ಬಿಜೆಪಿಯನ್ನು ಸೋಲಿಸುತ್ತೇವೆಂಬ ಯೋಜನೆ ಹಾಕಿದ್ದರೆ, ಅದು ಬರೀ ಭ್ರಮೆಯಷ್ಟೇ ಎಂದು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಜೊತೆಗಿನ ಮಾತುಕತೆ ಕೇವಲ ಸಮಾನ ಮನಸ್ಕರ ನಡುವಿನ ವಿಚಾರ ವಿಮರ್ಶೆ ಅಷ್ಟೇ ಆಗಿತ್ತು. ಬಿಜೆಪಿಗೆ ಎದುರಾಗಿ ವಿರೋಧಿ ಪಕ್ಷಗಳು ಒಗ್ಗೂಡಬೇಕಾದ ಅನಿವಾರ್ಯತೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾರು ಮುಂದಿನ ನಾಯಕ ಅನ್ನೋದು ಈಗ ನಿರ್ಧರಿಸುವ ವಿಷಯ ಅಲ್ಲ ಎಂದು ಎನ್ ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಬಿಜೆಪಿಯನ್ನು ವಿರೋಧಿಸುವ ಎಲ್ಲ ಪಕ್ಷಗಳನ್ನೂ ಒಳಗೊಳಿಸುತ್ತೇವೆ. ಯಾರನ್ನೂ ದೂರವಿಡುವ ಪ್ರಶ್ನೆ ಬರುವುದಿಲ್ಲ. ಬಿಜೆಪಿ ವಿರುದ್ಧ ಎಲ್ಲರೂ ಒಟ್ಟುಗೂಡುವ ಅಗತ್ಯವಿದೆ ಎಂದು ಶರದ್ ಪವಾರ್, ಮಮತಾ ಬ್ಯಾನರ್ಜಿ ಆಡಿರುವ ಯುಪಿಎ ವಿರೋಧಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.

There is no United Progressive Alliance (UPA) now, West Bengal Chief Minister Mamata Banerjee said on Wednesday after her meeting with the Nationalist Congress Party (NCP) leader Sharad Pawar in Mumbai.