ಬ್ರೇಕಿಂಗ್ ನ್ಯೂಸ್
27-09-22 01:44 pm Source: Vijayakarnataka ಸಿನಿಮಾ
ಕಪಿಲ್ ಶರ್ಮಾ ಶೋ ( Kapil Sharma ) ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿ ಜನರಿಗೆ ಮುಟ್ಟಿಸಲು ಇರುವ ಬಲವಾದ ವೇದಿಕೆ ಎನ್ನಬಹುದು. ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಜಯಂ ರವಿ, ವಿಕ್ರಮ್, ತ್ರಿಷಾ ನಟನೆಯ 'ಪೊನ್ನಿಯನ್ ಸೆಲ್ವನ್' ಸಿನಿಮಾ ( Ponniyin Selvan ) ತಂಡ ಭರ್ಜರಿಯಾಗಿ ಸಿನಿಮಾ ಪ್ರಚಾರ ಮಾಡುತ್ತಿದೆ. ಅಂತೆಯೇ ಈ ತಂಡ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿತ್ತು.
ಕಪಿಲ್ ಶರ್ಮಾ ಅವರು ಎಂದಿನಂತೆ ತಮಿಳು ನಟ ವಿಕ್ರಮ್ ಅವರ ಕಾಲೆಳೆದಿದ್ದಾರೆ. "ಒಂದಿನ ಕಪಿಲ್ ಶರ್ಮಾ ಅವರ ಶೋಗೆ ಹೋಗ್ತೀನಿ ಅಂತ ಅಂದುಕೊಂಡಿದ್ರಾ?" ಎಂದು ಕಪಿಲ್ ಶರ್ಮಾ ಕೇಳಿದ್ದಾರೆ. ಆಗ ಮಾತನಾಡಿದ ವಿಕ್ರಮ್, "ನಾನು ಆ ರೀತಿ ಯೋಚನೆ ಮಾಡಿರಲಿಲ್ಲ. 1976ರಲ್ಲಿ ನಾನು 8ನೇ ತರಗತಿ ಓದುತ್ತಿದ್ದೆ. ನೀವು ಆಗ ಹುಟ್ಟಿರಲಿಲ್ಲ ಅಲ್ವಾ? ಆಗಲೇ ನಿಮ್ಮ ಶೋಗೆ ನಾನು ಬರ್ತೀನಿ ಅಂತ ಬರೆಯಲಾಗಿತ್ತು" ಎಂದು ಉತ್ತರ ನೀಡಿದ್ದಾರೆ.

ವಿಕ್ರಮ್ ಅವರಿಗೆ ಟ್ವಿಟ್ಟರ್ ಬಳಕೆಯ ಕುರಿತು ಕಪಿಲ್ ಶರ್ಮಾ ಸಲಹೆ ನೀಡಿದ್ದು, "ಇತ್ತೀಚೆಗೆ ನೀವು ಟ್ವಿಟ್ಟರ್ ಬಳಸುತ್ತಿದ್ದೀರಿ ಅಲ್ಲವೇ..ನಿಮಗೆ ಟ್ವಿಟ್ಟರ್ ಬಗ್ಗೆ ನಾನು ಒಂದು ವಿಷಯ ಹೇಳಬೇಕಿದೆ. ಸ್ವಲ್ಪ ವಿಸ್ಕಿ ತಗೊಂಡ ಬಳಿಕ ಟ್ವಿಟ್ಟರ್ ರಿಸ್ಕಿ ಆಗತ್ತೆ, ಇದು ನನ್ನ ವೈಯಕ್ತಿಕ ಅನುಭವ" ಎಂದು ಹೇಳಿದ್ದಾರೆ.
"ಸಾಹಸ ದೃಶ್ಯ ಮಾಡುವಾಗ ನನ್ನ ಅಕ್ಕ ಪಕ್ಕದಲ್ಲಿ ಯಾರೂ ಖಳನಟರು ಇರಲಿಲ್ಲ. ನನ್ನ ಧೋತಿಯೇ ವಿಲನ್ ಆಗಿತ್ತು" ಎಂದಿದ್ದಾರೆ ಕಾರ್ತಿ

ನಟಿ ತ್ರಿಷಾ ಅವರು ಕಪಿಲ್ ಜೀ ನೀವು ಆ ರೀತಿ ಹೇಳಿದ್ದಕ್ಕೆ ಐ ಲವ್ ಯು ಎಂದಿದ್ದಾರೆ. ಆಗ ಕಪಿಲ್, "ನೀವು ಐ ಲವ್ ಯು ಎಂದರೆ ನಾನು ಹಿಂದೆ ಹಿಂದೆ ಬಂದುಬಿಡ್ತೀನಿ" ಎಂದು ಹೇಳಿ ನಗೆಚಟಾಕಿ ಹಾರಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಮೆರೆದಿದ್ದ ಚೋಳರ ಇತಿಹಾಸ ಹೇಳುವ ಕಥೆಯೇ ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಒನ್ಲೈನ್ ಸ್ಟೋರಿ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯನ್ ಸೆಲ್ವನ್’ ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿರುವ ಚಿತ್ರವಿದು. ‘ಪೊನ್ನಿಯನ್ ಸೆಲ್ವನ್’ ಚಿತ್ರವನ್ನು 500 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗಿದ್ದು, 9ನೇ ಶತಮಾನದ ಕಥಾನಕ ಇರುವುದರಿಂದ ಅಂದಿನ ಕಾಲಘಟದ ಸೆಟ್ ಮತ್ತು ಕಾಸ್ಟ್ಯೂಮ್ಸ್ಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
ಆದಿತ್ಯ ಕರಿಕಾಳನ್ ಆಗಿ ನಟ ವಿಕ್ರಮ್, ನಂದಿನಿ/ ಮಂದಾಕಿನಿ ದೇವಿಯಾಗಿ ಐಶ್ವರ್ಯ ರೈ, ರಾಜ ರಾಜ ಚೋಳನಾಗಿ ಜಯಂ ರವಿ ಮತ್ತು ರಾಜಕುಮಾರಿ ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಷಾ, ವಲ್ಲವರಾಯನ್ ವಂದಿಯಾದೇವನ್ ಆಗಿ ಕಾರ್ತಿ, ಸುಂದರ ಚೋಳ ಆಗಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದಾರೆ.ಮಣಿರತ್ನಂ ನಿರ್ದೇಶನದ ಈ ಸಿನಿಮಾಕ್ಕೆ ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
Kapil Sharma Advice To Actor Vikram That Twitter Is Very Risky, After Little Bit Whisky.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 02:55 pm
HK News Staffer
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
25-08-26 12:46 pm
HK News Staffer
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am
ಪಡಿತರ ಅಕ್ಕಿ ಸಾಗಾಟದ ಲಾರಿಗೆ ಸ್ಕೂಟರ್ ಢಿಕ್ಕಿ! ಸಚಿ...
24-08-26 09:06 pm
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm