ಬ್ರೇಕಿಂಗ್ ನ್ಯೂಸ್
16-01-23 01:18 pm Source: news18 ಸಿನಿಮಾ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರ ಮನದಲ್ಲಿದ್ದಾರೆ. ಅವರು ದೈಹಿಕವಾಗಿ ಇಲ್ಲ ಅನ್ನೋದನ್ನ ಬಿಟ್ರೆ, ಪವರ್ ಸ್ಟಾರ್ ಪವರ್ ಇನ್ನೂ ಎಲ್ಲರ ಮನದಲ್ಲಿಯೇ ಹರಿಯುತ್ತಿದೆ.

ಪುನೀತ್ ರಾಜಕುಮಾರ್ ಎಂದೂ ತಾವು ಏನೇ ಮಾಡಿದ್ರೂ ಎಲ್ಲೂ ಏನೂ ಹೇಳಿಕೊಳ್ಳುತ್ತಿರಲಿಲ್ಲ. ಆದರೆ ಅವರು ಹಾಗೆ ಮಾಡಿರೊ ಕಾರ್ಯ ಎಲ್ಲ ಕಾಲಕ್ಕೂ ಸಲ್ಲುತ್ತದೆ.
ಅಜರಾ"ಮರ" ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಹಾಗೇ ಇದ್ದಾರೆ. ಅವರ ನೆನಪು ಎಲ್ಲರನ್ನ ಕಾಡುತ್ತಲೇ ಇರುತ್ತದೆ. ಪುನೀತ್ ವ್ಯಕ್ತಿತ್ವವೇ ಹಾಗಿತ್ತು. ಅಷ್ಟು ಆಳವಾಗಿಯೇ ಎಲ್ಲರ ಮನದಲ್ಲಿರೋ ಅಪ್ಪು, ಈಗಲೂ ಎಲ್ಲರಿಗೂ ನೆನಪಿಗೆ ಬರುತ್ತಾರೆ.
ಅಪ್ಪು ಮಾಡಿರೋ ಕೆಲಸಗಳು ಹಾಗಿವೆ. ಹಾಗೇನೇ ಅಪ್ಪು ಕೊಡಗಿಗೂ ಹೋಗಿ ಬಂದಿದ್ದಾರೆ. ಹಾಗೆ ಅಪ್ಪು ಇಲ್ಲಿಗೆ ಹೋದಾಗ ಒಂದ್ ಅದ್ಭುತ ಕೆಲಸವನ್ನೇ ಮಾಡಿದ್ದಾರೆ. ಇಲ್ಲಿಯ ರೆಸಾರ್ಟ್ ಒಂದರಲ್ಲಿ ಒಂದು ಸ್ಪೂರ್ತಿದಾಯಕ ಕೆಲಸವನ್ನೂ ಮಾಡಿದ್ದಾರೆ.
ಅಪ್ಪನ ಜನ್ಮ ದಿನಕ್ಕೆ ಗಿಡ ನೆಟ್ಟ ಪವರ್ ಸ್ಟಾರ್ ಪುನೀತ್
ಡಾಕ್ಟರ್ ರಾಜ್ಕುಮಾರ್ ಅವರ 92 ನೇ ಜನ್ಮ ದಿನಕ್ಕೆ ಪುನೀತ್ ರಾಜ್ಕುಮಾರ್ ಒಂದು ಒಳ್ಳೆ ಕೆಲಸ ಮಾಡಿದ್ದಾರೆ. ಕೊಡಗಿಗೆ ಹೋದಾಗ ಇಲ್ಲಿಯ ರೆಸಾರ್ಟ್ ಒಂದರಲ್ಲಿ ಮಲಬಾರ್ ಹುಣಸೆ ಗಿಡವನ್ನ ನೆಟ್ಟಿದ್ದಾರೆ. ಹಾಗೆ ನೆಟ್ಟ ಈ ಗಿಡದ ಪಕ್ಕದಲ್ಲಿಯೇ ಈ ಎಲ್ಲ ಡೀಟೆಲ್ಸ್ ಕೂಡ ಇದೆ.
ಘೋಸ್ಟ್ ಡೈರೆಕ್ಟರ್ ಶ್ರೀನಿ ಶೇರ್ ಮಾಡಿದ ಮ್ಯಾಟರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಘೋಸ್ಟ್ ಚಿತ್ರವನ್ನ ಡೈರೆಕ್ಟರ್ ಶ್ರೀನಿ ನಿರ್ದೇಶನದ ಮಾಡುತ್ತಿದ್ದಾರೆ. ಹಾಗೆ ಎರಡು ಹಂತದ ಚಿತ್ರೀಕರಣವನ್ನ ಈಗ ಮುಗಿಸಿಕೊಂಡು, ಫ್ಯಾಮಿಲಿ ಜೊತೆಗೆ ಮೊನ್ನೆ ಕೊಡಗಿಗೂ ಹೋಗಿದ್ರು.

ಹಾಗೇನೆ ಇಲ್ಲಿಯ ಒಂದು ರೆಸಾರ್ಟ್ ನಲ್ಲೂ ಉಳಿದುಕೊಂಡಿದ್ದರು. ಶ್ರೀನಿ ಉಳಿದುಕೊಂಡ ರೂಮ್ ಪಕ್ಕದಲ್ಲಿಯೇ ಪವರ್ ಸ್ಟಾರ್ ಪುನೀತ್ ನೆಟ್ಟಿರೋ ಗಿಡ ಕೂಡ ಇತ್ತು. ಅದರ ಫೋಟೋ ತೆಗೆದಿರೋ ನಟ-ನಿರ್ದೇಶಕ ಶ್ರೀನಿ ಆ ಫೋಟೋವನ್ನ ಟ್ವಿಟರ್ನಲ್ಲೂ ಶೇರ್ ಮಾಡಿದ್ದಾರೆ. You are rooted in our memories ಅಂತಲೂ ಬರೆದುಕೊಂಡಿದ್ದಾರೆ.
ಡೈರೆಕ್ಟರ್ ಶ್ರೀನಿ ಮಾತು ನಿಜವೇ ಆಗಿದೆ. ಪುನೀತ್ ರಾಜ್ಕುಮಾರ್ ಎಲ್ಲರ ಮನದಲ್ಲಿ ಆಳವಾಗಿಯೇ ಬೇರೂರಿದ್ದಾರೆ. ಅಪ್ಪು ಅಂದ್ರೆ ಅಮರ, ಅಪ್ಪು ಅಂದ್ರೆ ಅದ್ಭುತ ಅನ್ನೋ ಮಾತನ್ನ ಎಲ್ಲರೂ ಒಪ್ಪಿಕೊಳ್ಳುತ್ತಾರೆ.
ಅಪ್ಪು ಈಗಲೂ ಎಲ್ಲರ ಮನಸಿನಲ್ಲಿ ಜೀವಂತವಾಗಿದ್ದಾರೆ. ಹಾಗೇನೆ ಇದೇ ರೆಸಾರ್ಟ್ ನಲ್ಲಿಯೇ ನಟಿ ಐಶ್ವರ್ಯ ರೈ, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ ಇನ್ನೂ ಅನೇಕರು ಅಪ್ಪು ರೀತಿನೇ ಗಿಡಗಳನ್ನ ಇಲ್ಲಿ ನೆಟ್ಟು ಹೋಗಿದ್ದಾರೆ.
Power Star Puneeth Rajkumar planted a Malabar Tamarind plant at Coorg Resort.
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm