‘ಗೋಕರ್ಣ’ ಚಿತ್ರದಲ್ಲಿನ ಜೂನಿಯರ್ ಉಪೇಂದ್ರ ಈಗ ಹೀರೋ! ಯಾವ ಚಿತ್ರಕ್ಕೆ?

28-01-23 01:49 pm       Source: Vijayakarnataka   ಸಿನಿಮಾ

ಪ್ರೇಮ್ ಮತ್ತು ತಬಲಾ ನಾಣಿ ನಟನೆಯ ಸಿನಿಮಾ ಮೂಲಕ ಹೊಸ ನಾಯಕರೊಬ್ಬರು ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡಲಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ 2003 ರಲ್ಲಿ ನಟಿಸಿದ್ದ 'ಗೋಕರ್ಣ' ಸಿನಿಮಾದಲ್ಲಿ ಜೂನಿಯರ್‌ ಉಪ್ಪಿಯಾಗಿ ನಟಿಸಿದ್ದ ಸಂಜಯ್‌ ಎಂಬ ಹುಡುಗ ಈಗ ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇವರು ತಬಲಾ ನಾಣಿ ಮತ್ತು ಪ್ರೇಮ್‌ ನಟಿಸುತ್ತಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವಾರ ಪ್ರೇಮ್‌ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾವೊಂದು ಸೆಟ್ಟೇರಿತ್ತು. ಈ ಸಿನಿಮಾದಲ್ಲಿ ಪ್ರೇಮ್‌ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಆದರೆ ಇದರಲ್ಲಿ ನಾಯಕರಾಗಿ ಸಂಜಯ್‌ ನಟಿಸುತ್ತಿದ್ದಾರೆ. ಅಥರ್ವ ಆರ್ಯ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಸಂಜಯ್‌ ಈ ಚಿತ್ರದಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ನಾನು ಈ ಸಿನಿಮಾದಲ್ಲಿ ತಬಲಾ ನಾಣಿ ಪುತ್ರನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಮಿಡಲ್‌ ಕ್ಲಾಸ್‌ ಫ್ಯಾಮಿಲಿಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಅಪ್ಪ ಮಗನ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಪ್ರೇಮ್‌ ಈ ಚಿತ್ರದಲ್ಲಿ ಒಬ್ಬ ಬಿಸ್ನೆಸ್‌ ಮ್ಯಾನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಥೆಯಲ್ಲಿ ನನ್ನ ಪಾತ್ರಕ್ಕೆ ಸಿಕ್ಕಾಪಟ್ಟೆ ಸ್ಕೋಪ್‌ ಇದ್ದು, ನಟನೆಗೆ ಅವಕಾಶ ಹೆಚ್ಚಿದೆ' ಎಂದು ಸಂಜಯ್‌ ಹೇಳಿದ್ದಾರೆ.

Sanjay to debut as lead in Prem-Tabla Nani film | Kannada Movie News -  Times of India

'ಶಾಲೆಯಲ್ಲಿದ್ದಾಗ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಗೋಕರ್ಣ' ಸಿನಿಮಾದಲ್ಲಿ ನಟಿಸಿದ್ದೆ. ನಮ್ಮ ಕುಟುಂಬ ಅಥವಾ ಇನ್ನೆಲ್ಲೂ ನನಗೆ ಸಿನಿಮಾ ಲಿಂಕ್‌ ಇಲ್ಲ. ಆದರೆ 2020 ರಲ್ಲಿ ನನ್ನ ಮೊದಲ ಸಿನಿಮಾ ಟೇಕಾಫ್‌ ಆಗಬೇಕಿತ್ತು. ಆದರೆ ಕೋವಿಡ್‌ನಿಂದ ತೊಂದರೆಯಾಯಿತು. ಈಗ ಈ ತಂಡ ನನ್ನನ್ನು ಸಂಪರ್ಕಿಸಿದಾಗ ಈ ಪಾತ್ರದ ಬಗ್ಗೆ ಕೇಳಿದಾಗ ಇಷ್ಟವಾಯ್ತು. ಇದೊಂದು ವಿಭಿನ್ನ ಮತ್ತು ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಕಥೆ' ಎನ್ನುವುದು ಸಂಜಯ್‌ ಮಾತು.

ಎ ಪಿ ಅರ್ಜುನ್‌ ನಿರ್ದೇಶನ ಮಾಡುತ್ತಿರುವ 'ಅದ್ಧೂರಿ ಲವರ್‌' ಸಿನಿಮಾದಲ್ಲಿಯೂ ಸಂಜಯ್‌ ಸಣ್ಣ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

ಈ ಹೊಸ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಅಪ್ಪ ಮಗನ ಸಂಬಂಧದ ಮಹತ್ವ ಹೇಳುವಂತಹ ಸಿನಿಮಾವಿದು. ನಿರ್ದೇಶಕರು ಬಹಳ ಚೆನ್ನಾಗಿ ಈ ಪಾತ್ರವನ್ನು ಬರೆದಿದ್ದಾರೆ ಎಂದಿದ್ದಾರೆ ನಟ ಸಂಜಯ್.

Sanjay Who acted Junior Upendra In Gokarna Movie Now becoming hero |  'ಗೋಕರ್ಣ' ಸಿನಿಮಾದಲ್ಲಿ ಜೂ. ಉಪೇಂದ್ರ ಆಗಿದ್ದ ಸಂಜಯ್ ಈಗ ಹೀರೋ| TV9 Kannada

ಉಪೇಂದ್ರ - ನಾಗಣ್ಣ ಕಾಂಬಿನೇಶನ್‌ನಲ್ಲಿ ಮೂಡಿಬಂದ ಸಿನಿಮಾ ‘ಗೋಕರ್ಣ’. ಉಪೇಂದ್ರ ಅವರಿಗೆ ರಕ್ಷಿತಾ ನಾಯಕಿಯಾಗಿ ಅಭಿನಯಿಸಿದ್ದರು. ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು. ತಮಿಳಿನ ‘ಅಣ್ಣಾಮಲೈ’ ಚಿತ್ರದ ರೀಮೇಕ್ ಆಗಿದ್ದ ‘ಗೋಕರ್ಣ’ ಸಿನಿಮಾ ಬೆಂಗಳೂರಿನಲ್ಲಿ 175 ದಿನಗಳ ಸತತ ಪ್ರದರ್ಶನ ಕಂಡಿತ್ತು.

Kannada Movie Gokarna Actor Sanjay To Play Lead In Prem S Film.