ಬಿಪಿ, ಕೊಲೆಸ್ಟ್ರಾಲ್, ಹೃದಯದ ಸಮಸ್ಯೆ ಇದ್ದವರಿಗೆ, ಆಲೂಗಡ್ಡೆ ಬಹಳ ಒಳ್ಳೆಯದು...

16-06-22 07:45 pm       Source: Vijayakarnataka   ಡಾಕ್ಟರ್ಸ್ ನೋಟ್

ವಿಶ್ವದ ಯಾವ ಮೂಲೆ ಮೂಲೆಗೆ ಹೋದರೂ ಕೂಡ, ಆಲೂಗಡ್ಡೆ ಮಾತ್ರ ಎಲ್ಲಾ ಕಡೆ ಸಿಕ್ಕಿಯೇ ಸಿಗುತ್ತದೆ. ತನ್ನಲ್ಲಿ ಹಲವಾರು ಪೋಷಕಾಂಶ ಗಳನ್ನು ಹೊಂದಿರುವಂತಹ, ಈ ತರಕಾರಿ, ಬಿಪಿ,...

ಆಲೂಗಡ್ಡೆ ಎಂದರೆ ಹೆಚ್ಚಿನವರು ಇಷ್ಟಪಡುತ್ತಾರೆ. ತಮ್ಮ ಪ್ರತಿ ಆಹಾರಪದ್ಧತಿಯಲ್ಲಿ ಆಲೂಗಡ್ಡೆಯನ್ನು ನೆನೆಸಿಕೊಳ್ಳದೇ ಇರುವುದಿಲ್ಲ. ಆದರೆ ಕೆಲವರು ಆಲೂಗಡ್ಡೆ ಸೇವನೆಯಿಂದ, ಹೊಟ್ಟೆ ಉಬ್ಬರ ಆಗುತ್ತದೆ, ಇಲ್ಲಾಂದ್ರೆ ಗ್ಯಾಸ್ಟ್ರಿಕ್ ಆಗುತ್ತದೆ ಎನ್ನುವ ಒಂದೇ ಕಾರಣಕ್ಕೆ, ಈ ತರಕಾರಿಯಿಂದ ದೂರ ನಿಲ್ಲು ತ್ತಾರೆ. ಇನ್ನು ಒಂದು ವೇಳೆ ಶೀತ, ನೆಗಡಿಯಂತಹ ಸಮಸ್ಯೆಗಳು ಕಂಡು ಬಂದರೆ, ಆಲೂಗಡ್ಡೆಯನ್ನು ತಿನ್ನಬಾರದು ಎನ್ನುವ ಕಾರಣಕ್ಕೆ ವಯಸ್ಸಾದವರು ಹಾಗೂ ಪುಟ್ಟ ಮಕ್ಕಳನ್ನು ಮನೆಯಲ್ಲಿರುವ ಸದಸ್ಯರು ಆಲೂಗಡ್ಡೆಯಿಂದ ದೂರ ಉಳಿಸುತ್ತಾರೆ.

ಆದರೆ ನಿಜ ಹೇಳಬೇಕೆಂದರೆ, ಆಹಾರಕ್ರಮದಲ್ಲಿ ಆಲೂಗಡ್ಡೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಮುಖ್ಯವಾಗಿ ಅಧಿಕ ರಕ್ತದಒತ್ತಡ ಮತ್ತು ಹೃದಯದ ಸಮಸ್ಯೆ ಗಳು ಇದ್ದವರು, ತಮ್ಮ ಆಹಾರಪದ್ಧತಿಯಲ್ಲಿ ಮಿತಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇರಿಸುತ್ತಾ ಬರುವುದರಿಂದ, ಸಾಕಷ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದಾಗಿದೆ.

ಆಲೂಗಡ್ಡೆಯ ಪ್ರಯೋಜನಗಳು

ಮಾರುಕಟ್ಟೆಯಲ್ಲಿ ಸಿಗುವ ಒಂದೊಂದು ಬಗೆಯ ತರಕಾರಿ ಒಂದೊಂದು ರೀತಿಯ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಉದಾಹರಣೆಗೆ ನೋಡುವುದಾದರೆ ಕ್ಯಾರೆಟ್ ತಿಂದರೆ, ತ್ವಚೆಗೆ ಹಾಗೂ ಕಣ್ಣಿಗೆ ಒಳ್ಳೆಯದು ಎಂದು ಹೇಳುತ್ತಾರೆ. ಸೌತೆಕಾಯಿ ಸೇವಿಸಿದರೆ, ದೇಹದಲ್ಲಿ ನೀರಿನಾಂಶದ ಕೊರತೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ, ಅಂತೆಯೇ ಆಲೂಗಡ್ಡೆಯನ್ನು ಕೂಡ ಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ, ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಸಿಕ್ಕಂತೆ ಆಗುತ್ತದೆ.

ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಆಲೂಗಡ್ಡೆಯನ್ನು ಅತಿಯಾದ ತಾಪಮಾನದಲ್ಲಿ ಬೇಯಿಸಿದರೆ ಅದರಲ್ಲಿ ಕಂಡುಬರುವ, ಎಲ್ಲಾ ಪೌಷ್ಟಿಕಾಂಶಗಳು ನಷ್ಟ ಉಂಟಾಗುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಸಾಧ್ಯವಾದರೆ, ಆಲೂಗಡ್ಡೆಯನ್ನು ಮೈಕ್ರೋವೇವ್ ಓವನ್ ಮೂಲಕ ಬಿಸಿಮಾಡಿ ಸೇವನೆ ಮಾಡುವುದರಿಂದ, ಇದರಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳ ಜೊತೆಗೆ, ಖನಿಜಾಂಶಗಳು ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ಹಾಗೆ ಉಳಿದು, ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತದೆ.

ಅಧಿಕರಕ್ತದೊತ್ತಡದ ಸಮಸ್ಯೆಗೆ ಒಳ್ಳೆಯದು

High Blood Pressure Overview: Symptoms, Dangers, and How to Lower It

  • ಇಂದಿನ ದಿನಗಳಲ್ಲಿ, ಮಧುಮೇಹ ಕಾಯಿಲೆಗಳಂತೆ, ರಕ್ತದ ಒತ್ತಡದ ಸಮಸ್ಯೆ ಕೂಡ, ದೀರ್ಘಕಾಲದ ವರೆಗೆ ಕಾಡುವ ಸಮಸ್ಯೆಯಾಗಿ ಬಿಟ್ಟಿದೆ. ಒಂದು ವೇಳೆ ರಕ್ತದೊತ್ತಡದ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ದೇಹದ ರಕ್ತದಲ್ಲಿ ಏರುಪೇರು ಉಂಟಾಗಿ, ಹೃದಯಕ್ಕೆ ಸಮಸ್ಯೆ ಬರುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು, ತಮ್ಮ ಆಹಾರ ಪದ್ಧತಿ ಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳುವುದರ ಜೊತೆಗೆ, ವೈದ್ಯರ ಸಲಹೆ ಗಳನ್ನು ಕೂಡ ಚಾಚೂ ತಪ್ಪದೆ ಅನುಸರಿಸುವುದರಿಂದ, ಈ ಸಮಸ್ಯೆಯಿಂದ ಪಾರಾಗಬಹುದು.
  • ಇನ್ನು ರಕ್ತದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಆಲೂಗಡ್ಡೆ ಕೂಡ ಪ್ರಮುಖ ಪಾತ್ರ ವಹಿಸು ತ್ತದೆ. ಇದಕ್ಕೆ ಮುಖ್ಯ ಕಾರಣ ಇದರಲ್ಲಿ, ಪೊಟ್ಯಾಷಿಯಂ ಅಂಶ ಅಧಿಕ ಪ್ರಮಾಣದಲ್ಲಿ ಕಂಡಬರುವು ದರಿಂದ ರಕ್ತದ ಒತ್ತಡಕ್ಕೆ ಪ್ರಮುಖ ಕಾರಣವಾಗಿರುವ ಅಧಿಕ ಪ್ರಮಾಣದ ಸೋಡಿಯಂ ಅಂಶದ ವಿರುದ್ಧವಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ಶೇಖರಣೆಯಾಗುವ ಅತಿಯಾದ ನೀರಿ ನಾಂಶವು ಬೆವರಿನ ಹಾಗೂ ಮೂತ್ರ ವಿಸರ್ಜನೆಯ ಮೂಲಕ ಹೊರಹೋಗಲು ನೆರವಾಗುತ್ತದೆ
  • ಇಲ್ಲಿ ಮುಖ್ಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ಈಗಾಗಲೇ ಅಧಿಕ ರಕ್ತದೊತ್ತಡದಂತಹ ಸಮಸ್ಯೆಯನ್ನು ಎದುರಿಸುತ್ತಿರುವವರು, ಆದಷ್ಟು ಉಪ್ಪಿನಾಂಶ ಇರುವ ಆಹಾರಗಳನ್ನು ಕಡಿಮೆ ಸೇವಿಸಬೇಕು. ಉದಾಹರಣೆಗೆ ನೋಡುವುದಾದರೆ, ಉಪ್ಪಿನಾಂಶ ಹೆಚ್ಚಿರುವ ಸ್ನ್ಯಾಕ್ಸ್, ಆಲೂಗಡ್ಡೆ ಚಿಪ್ಸ್, ಸಂಸ್ಕರಿಸಿದ ಆಹಾರ ಪದಾರ್ಥಗಳು ಇತ್ಯಾದಿ. ಇದರ ಜೊತೆಗೆ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು
  • ಪೊಟ್ಯಾಶಿಯಂ ಅಂಶಗಳು ಹೆಚ್ಚಿರುವ ಹಣ್ಣು ತರಕಾರಿಗಳನ್ನು ನೋಡುವುದಾದರೆ, ಆಲೂಗಡ್ಡೆ, ಬಾಳೆ ಹಣ್ಣು, ಪಾಲಕ್ ಸೊಪ್ಪು, ಬ್ರೊಕೋಲಿ, ಇಂತಹ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು

ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನಾಂಶ ಕಡಿಮೆ ಆಗುತ್ತದೆ

high cholesterol: ಕೊಲೆಸ್ಟ್ರಾಲ್ ಪರೀಕ್ಷೆ ಯಾಕೆ ಮಾಡಿಸಬೇಕು ಗೊತ್ತಾ? - Vijaya  Karnataka

  • ಕೆಟ್ಟ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಇರುವ ಯಾವುದೇ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ, ರಕ್ತದಲ್ಲಿ ಏರುಪೇರಾಗುವ ಜೊತೆಗೆ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಂಡು ಬರುವ ಅಪಾಯ ಹೆಚ್ಚಿರುತ್ತದೆ. ಇದೇ ಕಾರಣಕ್ಕಾಗಿ ಇಂದಿನ ಯುವಜನತೆಯರು, ಸಣ್ಣ ವಯಸ್ಸಿಗೆಯೇ ರಕ್ತದಒತ್ತಡ ಮತ್ತು ಹೃದಯದ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ.
  • ಆದರೆ ಈ ಸಮಸ್ಯೆಗಳು ಬರಬಾರದೆಂದರೆ, ಆಲೂಗಡ್ಡೆಯನ್ನು ವಾರದಲ್ಲಿ ಎರಡು ಬಾರಿಯಾದರೂ, ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಕೆಟ್ಟ ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್ ಅಂಶಗಳು ನಿವಾರಣೆಯಾಗಿ, ಹೃದಯಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳಿಂದ ಹಾಗೂ ಹೃದ ಯದ ರಕ್ತನಾಳದ ಕಾಯಿಲೆಗಳಿಂದ ದೂರ ಉಳಿಯಲು ಅನುಕೂಲವಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ

  • ಇನ್ನು ವಿಟಮಿನ್ ಸಿ ಹೆಚ್ಚಿರುವ ಹಣ್ಣು-ತರಕಾರಿಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಲ್ಲಿ ಇವುಗಳ ಪಾತ್ರ ಬಲು ದೊಡ್ಡದು.
  • ಅಂತೆಯೇ ಆಲೂಗಡ್ಡೆಯಲ್ಲಿ ಕಂಡು ಬರುವ ವಿಟಮಿನ್ ಸಿ ಅಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾದಂತೆ ನೋಡಿ ಕೊಂಡು, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಂದರೆ ಮುನಷ್ಯನ ದಿನದ ಅಗತ್ಯಕ್ಕೆ ಬೇಕಾಗುವ ಬೇಕಾಗಿರುವ ವಿಟಮಿನ್-ಸಿ ಅಂಶ, ಈ ಆಲೂಗಡ್ಡೆಯಲ್ಲಿ ಸಿಗುತ್ತದೆ ಎಂದ್ರೆ, ಮತ್ತೆ ಯಾಕೆ ನಾವು ತಿನ್ನದೇ ಇರಬೇಕು, ಅಲ್ಲವೇ?

ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಯಥೇಚ್ಛವಾಗಿ ಸಿಗುತ್ತದೆ

potatoes health benefits: ಬಿಪಿ, ಕೊಲೆಸ್ಟ್ರಾಲ್, ಹೃದಯದ ಸಮಸ್ಯೆ ಇದ್ದವರಿಗೆ,  ಆಲೂಗಡ್ಡೆ ಬಹಳ ಒಳ್ಳೆಯದು... - Vijaya Karnataka

  • ಪ್ರತಿಯೊಂದು ಜೇವಿಯಲ್ಲಿಯೂ ಕೂಡ, ರಕ್ತದಲ್ಲಿ ಕಂಡುಬರುವ ಒಂದು ಪ್ರಮುಖವಾದ ಅಂಶ ಎಂದರೆ ಅದು ಹಿಮೋಗ್ಲೋಬಿನ್. ಒಂದು ವೇಳೆ ಇದರಲ್ಲಿ ಏನಾದರೂ ಕೊರತೆ ಉಂಟಾದರೆ, ಹಲ ವಾರು ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ಒಂದು ವೇಳೆ ದೇಹದಲ್ಲಿ ಹಿಮೋ ಗ್ಲೋಬಿನ್ ಅಂಶದ ಕೊರತೆ ಉಂಟಾದರೆ, ವೈದ್ಯರು ಕೂಡ ವಿಟಮಿನ್ ಬಿ6 ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಲು ಸಲಹೆ ನೀಡುತ್ತಾರೆ.
  • ಇನ್ನು ಆಲೂಗಡ್ಡೆಯ ವಿಷ್ಯಕ್ಕೆ ಬರುವುದಾದರೆ ವಿಟಮಿನ್ ಬಿ6 ಅಂಶ ಇದರಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಸಿಗುವುದರಿಂದ ಹಿಮೋಗ್ಲೋಬಿನ್ ಅಂಶದ ಕೊರತೆ ಉಂಟಾಗದಂತೆ ನೋಡಿ ಕೊಳ್ಳುವುದರ ಜೊತೆಗೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

Can Someone How Suffering High Blood Pressure, Heart Problem Eat Potatoes These Things You Must Know.