ಅಕ್ಕಿ ಇಡ್ಲಿಕ್ಕಿಂತಲೂ ರವೆ ಇಡ್ಲಿಯಲ್ಲಿದೆ, ಸಕತ್ ಆರೋಗ್ಯ ಪ್ರಯೋಜನಗಳು!

12-07-22 09:54 pm       Source: Vijayakarnataka   ಡಾಕ್ಟರ್ಸ್ ನೋಟ್

ಮೊಸರು, ತುಪ್ಪದಲ್ಲಿ ಹುರಿದ ಗೋಡಂಬಿ ಬೀಜಗಳು, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು ಇವೆಲ್ಲಾ ಬಳಸಿ ಮಾಡುವ ರವೆ ಇಡ್ಲಿ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ, ಮಧುಮೇಹದಂತಹ ಕಾಯಿಲೆ...

ಇತ್ತೀಚಿನ ದಿನಗಳಲ್ಲಿ ಹೇಗೆ ಆಗಿ ಬಿಟ್ಟಿದೆ ಎಂದರೆ, ವಾತಾವರಣದಲ್ಲಿ ಸ್ವಲ್ಪ ಆಚೆ ಈಚೆ ಆದರೂ ಸಾಕು, ಕೂಡಲೇ ಅನಾರೋಗ್ಯ ಸಮಸ್ಯೆಗಳು ಕಂಡುಬರಲು ಶುರುವಾಗುತ್ತದೆ! ಈ ಸಮಯದಲ್ಲಿ ಕಾಡುವ ಸಣ್ಣ-ಪುಟ್ಟ ಸಮಸ್ಯೆಗಳಾದ ಶೀತ ಕೆಮ್ಮು ಸಾಧಾರಣ ಜ್ವರದಂತಹ ಸಮಸ್ಯೆಗಳು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಅಷ್ಟೇ ಯಾಕೆ, ಈ ಸಮಸ್ಯೆಗಳಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕೂಡ ಕಮ್ಮಿ ಆಗಿ, ಆಗಾಗ ಹುಷಾರು ತಪ್ಪುವ ಸಮಸ್ಯೆ ಕೂಡ ಕಾಡುತ್ತಲೇ ಇರುತ್ತದೆ.

ಹೀಗಾಗಿ ಆರೋಗ್ಯಕಾರಿ ಜೀವನಶೈಲಿ ನಡೆಸಬೇಕೆಂದರೆ, ಸರಿಯಾದ ಆಹಾರ ಪದ್ಧತಿಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಅನುಸರಿಸುವುದರ ಜೊತೆಗೆ ಒಳ್ಳೆಯ ಜೀವನ ಶೈಲಿಯನ್ನು ಅನುಸರಿ ಸುವುದು ತುಂಬಾನೇ ಮುಖ್ಯ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ನಮ್ಮ ಆಹಾರ ಪದ್ಧತಿಯಲ್ಲಿ ವಾರಕ್ಕೆ ಒಮ್ಮೆ ಯಾದರೂ ರವೆ ಇಡ್ಲಿಯನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಹಲವಾರು ಕಾಯಿಲೆಗಳಿಂದ ಕೂಡ ದೂರವಿರಬಹುದು...

ರವೆ ಇಡ್ಲಿ

rava idli health benefits, ಅಕ್ಕಿ ಇಡ್ಲಿಕ್ಕಿಂತಲೂ ರವೆ ಇಡ್ಲಿಯಲ್ಲಿದೆ, ಸಕತ್  ಆರೋಗ್ಯ ಪ್ರಯೋಜನಗಳು! - once in a week eat rava idli and get these all health  benefits - Vijaya Karnataka

ರವೆ ಇಡ್ಲಿ ತಯಾರು ಮಾಡುವಾಗ ಬಳಸುವ ಮೊಸರು, ತುಪ್ಪದಲ್ಲಿ ಹುರಿದ ಗೋಡಂಬಿ, ಅಳತೆಗೆ ತಕ್ಕ ರವೆ, ಹಾಗೂ ಸರಿಯಾದ ಪ್ರಮಾಣದಲ್ಲಿ ಅಕ್ಕಿ, ಕ್ಯಾರೆಟ್ ತುರಿ, ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು, ಇವೆಲ್ಲವೂ ಈ ಇಡ್ಲಿಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಒಳ್ಳೆಯದು

How 'Dawn Phenomenon' Raises Blood Sugar – Cleveland Clinic

  • ನಮಗೆಲ್ಲಾ ಗೊತ್ತೇ ಇರುವ ಹಾಗೆ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಎನ್ನುವುದು ದೀರ್ಘಕಾಲದ ವರೆಗೆ ಕಾಡುವ ಕಾಯಿಲೆ. ಈ ಕಾಯಿಲೆ ಒಮ್ಮೆ ಮನುಷ್ಯನಲ್ಲಿ ಕಾಣಿಸಿಕೊಂಡರೆ, ಮತ್ತೆ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಹಾಗಾಗಿ ಈ ಕಾಯಿಲೆ ನಮಗೆ ಅಂಟಿಕೊಳ್ಳುವ ಮುನ್ನವೇ ಎಚ್ಚರಿಕೆ ವಹಿಸಿಕೊಳ್ಳಬೇಕು.
  • ಇನ್ನು ಮಧುಮೇಹ ಸಮಸ್ಯೆ ಈಗಾಗಲೇ ಇದ್ದರೆ, ಗೋಧಿಯಿಂದ ತಯಾರು ಮಾಡುವ ರವೆ ಉತ್ಪನ್ನ ಗಳನ್ನು ಮಿತವಾಗಿ ಸೇವನೆ ಮಾಡಿದರೆ, ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳ ಬಹುದು. ಇದರಿಂದಾಗಿ ಮಧುಮೇಹ ಕಾಯಿಲೆ ಕೂಡ ನಿಯಂತ್ರಣಕ್ಕೆ ಬರಲು ನೆರವಾಗುವುದು. ಇದಕ್ಕೊಂದು ಒಳ್ಳೆಯ ಆಹಾರ ಎಂದರೆ ರೆವೆ ಇಡ್ಲಿ! ಹೌದು ರವೆಯಿಂದ ತಯಾರು ಮಾಡುವ ರವೆ ಇಡ್ಲಿ ಸಕ್ಕರೆ ಕಾಯಿಲೆ
  • ಇರುವ ರೋಗಿಗಳಿಗೆ ಒಳ್ಳೆಯ ಆಹಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುಖ್ಯವಾಗಿ ರವೆ ಇಡ್ಲಿರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ನೋಡಿಕೊಳ್ಳುವುದರ ಜೊತೆಗೆ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ವಹಣೆ ಮಾಡಿ, ಇನ್ಸುಲಿನ್ ಅಂಶ ಅಚ್ಚುಕಟ್ಟಾಗಿ ರಕ್ತದಲ್ಲಿ ನಿರ್ವಹಣೆ ಆಗುವಂತೆ ಮಾಡುತ್ತದೆ.

ತೂಕ ಇಳಿಸುವವರಿಗೆ....

Hyperthyroidism Weight Gain: Causes, Risk, and Statistics

  • ಇಂದಿನ ದಿನಗಳಲ್ಲಿ ಹೆಚ್ಚಿನವರು ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಕೆಟ್ಟ ಜೀವನಶೈಲಿ ಅನುಸರಿಸುವುದರಿಂದಾಗಿ, ದೇಹದ ತೂಕ ಹಾಗೂ ಬೊಜ್ಜಿನ ಸಮಸ್ಯೆಯನ್ನು ಕೈಯಾರೇ ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ. ಅದರಲ್ಲೂ ಸರಾಸರಿ ತೂಕಕ್ಕಿಂತ ದೇಹದ ತೂಕವು ಹೆಚ್ಚಾಗಿ ಬೊಜ್ಜು ಆವರಿಸಿಕೊಂಡರೆ
  • ಕೊನೆಗೆ ಅದನ್ನು ಇಳಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ! ಇದಕ್ಕಾಗಿ ಸರಿಯಾದ ವ್ಯಾಯಾಮ ಮತ್ತು ಕಠಿಣ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಬಹುದು.
  • ಅದರಲ್ಲೂ ತಮ್ಮ ಆಹಾರ ಪದ್ಧತಿಯಲ್ಲಿ ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರುವ ರವೆ ಡ್ಲಿ ಯನ್ನು ಸೇವನೆ ಮಾಡುತ್ತಾ ಬರುವುದರಿಂದ ದೇಹದ ತೂಕವನ್ನು ಕ್ರಮೇಣವಾಗಿ ಇಳಿಸಿಕೊಳ್ಳಲು ನೆರವಾಗುತ್ತದೆ.

ಕಾರ್ಬೊಹೈಡ್ರೇಟ್ ಅಂಶಗಳ ಪ್ರಮಾಣ

  • ನಿಮಗೆ ಗೊತ್ತಿರಲಿ, ನಾವು ಸೇವಿಸುವ ಆಹಾರ ಪದ್ಧತಿಯಲ್ಲಿ ಕಾರ್ಬೊಹೈಡ್ರೇಟ್ ಅಂಶಗಳ ಪ್ರಮಾಣ ಹೆಚ್ಚಾಗಿ ಕಂಡು ಬಂದರೆ, ದೇಹದ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
  • ಈ ನಿಟ್ಟಿನಲ್ಲಿ ನೋಡುವು ದಾದರೆ ಕಾರ್ಬೊಹೈಡ್ರೇಟ್ ಅಂಶಗಳ ಪ್ರಮಾಣ ರವೆ ಇಡ್ಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವುದರಿಂದ ಇದನ್ನು ಮಿತವಾಗಿ ನಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಂಡರೆ ಬಹಳ ಒಳ್ಳೆಯದು.
  • ಮುಖ್ಯವಾಗಿ ದಿನಿತ್ಯ ಕಠಿಣ ವ್ಯಾಯಾಮ ಮಾಡುವವರಿಗೆ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸದಾ ಭಾಗವಹಿಸುವವರಿಗೆ, ಇಲ್ಲಾಂದ್ರೆ ದಿನನಿತ್ಯ ನಿಂತು ಕೊಂಡೇ ಕೆಲಸ ನಿರ್ವಹಿಸುವವರಿಗೆ, ಇದು ಒಂದು ಒಳ್ಳೆಯ ಉಪಹಾರ ಎಂದು ಹೇಳಬಹುದು.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ

  • ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದರೆ, ರಕ್ತದಲ್ಲಿ ಏರುಪೇರು ಉಂಟಾಗಿ, ಹೃದಯಕ್ಕೆ ಒತ್ತಡ ಬೀಳುತ್ತದೆ, ಇದರಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ.
  • ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದರೆ, ಮೊದಲು ಎಣ್ಣೆ ಪದಾರ್ಥ ಹೆಚ್ಚಿರುವ ಆಹಾರಗಳಿಂದ ದೂರವಿರಬೇಕು. ಮುಖ್ಯವಾಗಿ ಜಿಡ್ಡಿನ ಅಂಶ ಹೆಚ್ಚಿರುವ ಆಹಾರಗಳನ್ನು ಸೇವನೆ ಮಾಡಲೇಬಾರದು.
  • ಹೀಗಾಗಿ ಮೊದಲು ಇಂತಹ ವಿಷ್ಯಗಳನ್ನು ಗಮನ ನೀಡಬೇಕು. ಅಷ್ಟೇ ಅಲ್ಲದೆ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಲು ಸರಿಯಾದ ಆಹಾರ ಪದ್ಧತಿಯ ಜೊತೆಗೆ ರವೆ ಇಡ್ಲಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ರಕ್ತಹೀನತೆ ಸಮಸ್ಯೆ

  • ಪದೇಪದೇ ಆಯಾಸ ಆಗುವುದು, ಆಗಾಗ ತಲೆ ಸುತ್ತು ಬರುವುದು, ಇದ್ದಕ್ಕಿದ್ದಂತೆ ಮೈ ಬೆವರುವುದು, ದೇಹದಲ್ಲಿ ರಕ್ತದ ಕೊರತೆ ಎದ್ದು ಕಾಣುವುದು, ಇವೆಲ್ಲವೂ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಆಗಿರ ಬಹುದು ಎಂದು ತಿಳಿಸುವ ರೋಗ ಲಕ್ಷಣಗಳು.
  • ಒಂದು ವೇಳೆ ಈ ಲಕ್ಷಣಗಳನ್ನೆಲ್ಲಾ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಕೊನೆಗೆ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗಿ ರಕ್ತಹೀನತೆ ಸಮಸ್ಯೆ ಕೂಡ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ.
  • ಹೀಗಾಗಿ ಕಬ್ಬಿಣದ ಅಂಶ ಹೆಚ್ಚಾಗಿರುವ ರವೆ ಇಡ್ಲಿ ವಾರದಲ್ಲಿ ಒಂದೆರಡು ಬಾರಿಯಾದರೂ ಸೇವನೆ ಮಾಡುವುದರಿಂದ, ನಮ್ಮ ದಿನದ ಅಗತ್ಯತೆಗೆ ತಕ್ಕಂತೆ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಲಭ್ಯವಾಗುತ್ತ ಹೋಗುತ್ತದೆ ಹಾಗೂ ರಕ್ತಹೀನತೆ ಸಮಸ್ಯೆ ಕೂಡ ದೂರವಾಗುತ್ತಾ ಹೋಗುತ್ತದೆ.

Once In A Week Eat Rava Idli And Get These All Health Benefits.