ಈ ಹಣ್ಣು-ತರಕಾರಿಗಳ ಜ್ಯೂಸ್‌‌ನ ಎದುರು, ಸಕ್ಕರೆ ಕಾಯಿಲೆ ಸೈಲೆಂಟ್ ಆಗಿ ಬಿಡುತ್ತೆ!

19-07-22 07:03 pm       Source: Vijayakarnataka   ಡಾಕ್ಟರ್ಸ್ ನೋಟ್

ಸಕ್ಕರೆಕಾಯಿಲೆ ಅಥವಾ ಮಧುಮೇಹ ಕಾಯಿಲೆ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಒಮ್ಮೆ ಮನುಷ್ಯನಿಗೆ ಅಂಟಿ ಬಿಟ್ಟರೆ, ಮತ್ತೆ ಅದರಿಂದ ಹೊರ ಬರುವುದು ಸಾಧ್ಯವಿಲ್ಲದ ಮಾತು. ಆದರೆ ಕೆಲವೊಂದು...

ಹಿಂದೊಮ್ಮೆ ಪರಂಗಿಯವರ ಕಾಯಿಲೆ, ಅಂದರೆ ವಿದೇಶಿಯರ ಕಾಯಿಲೆ ಎಂದೇ ಪರಿಚಿತವಾಗಿದ್ದ ಮಧುಮೇಹ ಅಥವಾ ಸಕ್ಕರೆಕಾಯಿಲೆ ಇಂದು ಇಂದು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಆವರಿಸಿ ಬಿಟ್ಟಿದೆ. ಈ ಕಾಯಿಲೆ ಹೇಗೆಂದರೆ, ಒಮ್ಮೆ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ, ಮತ್ತೆ ಅಷ್ಟು ಬೇಗ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ! ಆದರೆ ಕಟ್ಟುನಿಟ್ಟಿನ ಆಹಾರ ಪದ್ಧತಿ ಸರಿಯಾದ ಜೀವನಶೈಲಿ ಹಾಗೂ ವೈದ್ಯರ ಸಲಹೆಗಳನ್ನು ಸರಿಯಾಗಿ ಅನುಸರಿಸಿಕೊಂಡು ಹೋದರೆ ಮಾತ್ರ, ತಕ್ಕಮಟ್ಟಿಗಾದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಬನ್ನಿ ಇಂದಿನ ಲೇಖನದಲ್ಲಿ ಯಾವೆಲ್ಲಾ ಹಣ್ಣು- ತರಕಾರಿಗಳ ಜ್ಯೂಸ್ ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ನೋಡೋಣ...

ಪಾಲಕ್ ಸೊಪ್ಪು

14 Amazing Spinach Juice Benefits For Skin, Hair & Health !

  • ಹಸಿರೆಲೆ ಸೊಪ್ಪು ತರಕಾರಿಗಳ ಪ್ರಯೋಜನಗಳು ನಮಗೆಲ್ಲಾ ಗೊತ್ತೇ ಇದೆ. ಅದರಲ್ಲೂ ಪಾಲಕ್ ಸೊಪ್ಪು ಅಂತೂ ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಬ್ಬಿಣಾಂಶ, ಐಯೋಡಿನ್, ಪೊಟಾಶಿಯಂ, ಮೆಗ್ನಿಶಿಯಂ, ಕ್ಯಾರೊಟೀನ್ ಅಂಶಗಳು ಹೇರಳವಾಗಿ ಕಂಡು ಬರುವುದರಿಂದ, ಇದನ್ನು ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆರೋಗ್ಯ ವೃದ್ಧಿಯಾವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ಕೂಡ ನಿಯಂತ್ರಣ ದಲ್ಲಿ ಇರುತ್ತದೆ.
  • ವಿಶೇಷವಾಗಿ ಈ ಹಸಿರೆಲೆ ಸೊಪ್ಪಿನಲ್ಲಿ ಇರುವ ಕಬ್ಬಿಣಾಂಶ ಮತ್ತು ಕರಗುವ ನಾರಿನಾಂಶ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಹೆಚ್ಚಿಸಿ, ನಾವು ಸೇವನೆ ಮಾಡಿದ ಆಹಾರದಲ್ಲ ಕಂಡು ಬರುವ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ ಅಂಶವು ಶೀಘ್ರವಾಗಿ ರಕ್ತಕ್ಕೆ ಸೇರದಂತೆ ತಡೆಯುತ್ತವೆ.
  • ಈ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದನ್ನು ತಡೆಯುತ್ತದೆ. ಇದರಿಂದ ಸಕ್ಕರೆಕಾಯಿ ಕೂಡ ನಿಯಂತ್ರಣಕ್ಕೆ ಬರುತ್ತದೆ. ಹೀಗಾಗಿ ಮಧುಮೇಹ ಇರುವ ರೋಗಿಗಳು ಪಾಲಕ್ ಸೊಪ್ಪಿನ ಜ್ಯೂಸ್ ಕುಡಿದರೆ ಒಳ್ಳೆಯದು ಇಲ್ಲಾಂದ್ರೆ ಸೂಪ್ ರೀತಿ ಮಾಡಿಕೊಂಡು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.

ಹಾಗಲಕಾಯಿ ರಸ

3 ways to make karela tasty | HealthShots

  • ಇತರ ಯಾವುದೇ ಬಗೆಯ ಹಸಿರೆಲೆ ತರಕಾರಿಗಳಿಗೆ ಹೋಲಿಸಿದರೆ, ತುಂಬಾನೇ ಕಹಿಯಾಗಿರುವ ತರಕಾರಿ ಎಂದರೆ ಅದು ಹಾಗಲಕಾಯಿ. ಆದ್ರೆ ನಿಮಗೆ ಗೊತ್ತಿರಲಿ, ರುಚಿಯಲ್ಲಿ ಕಹಿಯಾದರೂ ಕೂಡ, ಆರೋಗ್ಯಕ್ಕೆ ಬಲು ಸಿಹಿ ಈ ತರಕಾರಿ!
  • ಅದರಲ್ಲೂ ಮಧುಮೇಹಿಗಳ ಆರೋಗ್ಯಕ್ಕೆ ಅಂತೂ ಸಂಜೀವಿನಿ ಈ ತರಕಾರಿ. ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಸಕ್ಕರೆ ಕಾಯಿಲೆ ಇದ್ದವರು, ಪ್ರತಿದಿನ ವೈದ್ಯರ ಸಲಹೆಗಳನ್ನು ಪಡೆದು, ಈ ತರಕಾರಿಯ ರಸವನ್ನು ಕುಡಿಯುವ ಅಭ್ಯಾಸ ಮಾಡುತ್ತಾ ಬಂದರೆ, ರಕ್ತದಲ್ಲಿ ಸಕ್ಕರೆ ಅಂಶ ತಟ್ಟನೆ ಏರಿಕೆಯಾಗುವುದನ್ನು ತಡೆಯಬಹುದು.

ದಾಳಿಂಬೆಯ ಜ್ಯೂಸ್

  • ಹಣ್ಣುಗಳ ವಿಷ್ಯಕ್ಕೆ ಬರುವುದಾದರೆ, ಮನುಷ್ಯನ ಆರೋಗ್ಯ ವೃದ್ಧಿಗೆ ಬೇಕಾಗುವ ಎಲ್ಲಾ ಬಗೆಯ ಪೌಷ್ಟಿಕ ಸತ್ವಗಳು, ವಿಟಮಿನ್ಸ್ ಗಳು, ಖನಿಜಾಂಶಗಳು ಯಥೇಚ್ಛವಾಗಿ ಸಿಗುತ್ತದೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ದಾಳಿಂಬೆ ಹಣ್ಣು. ಹೌದು ಹುಳಿ ಸಿಹಿ ಮಿಶ್ರಿತವಾಗಿರುವ ಈ ಹಣ್ಣಿನ ಬೀಜಗಳನ್ನು ಪ್ರತಿದಿನ ಮಧುಮೇಹ ಇರುವ ರೋಗಿಗಳು ಸೇವನೆ ಮಾಡುತ್ತಾ ಬರುವುದರಿಂದ, ರಕ್ತದಲ್ಲಿ ಸಕ್ಕರೆ ಅಂಶ ಥಟ್ಟನೆ ಏರಿಕೆಯಾಗದಂತೆ ತಡೆಯಬಹುದು.
  • ಅಷ್ಟೇ ಅಲ್ಲದೆ ಈ ಹಣ್ಣಿನಲ್ಲಿ ಪಾಲಿಫೆನಾಲಿಕ್ ಆಂಟಿ ಆಕ್ಸಿಡೆಂಟ್ ಉತ್ತಮ ಪ್ರಮಾಣದಲ್ಲಿ ಸಿಗುವು ದರಿಂದ, ಸಕ್ಕರೆ ಕಾಯಿಲೆಯನ್ನು ಮಿತಿಮೀರಿ ಹೋಗದಂತೆ ತಡೆಯುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು, ಪ್ರತಿದಿನ ಒಂದು ಗ್ಲಾಸ್ ಆದರೂ ಈ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿದರೆ ಬಹಳ ಒಳ್ಳೆಯದು.

ಟೊಮೆಟೊ ಹಣ್ಣಿನ ಜ್ಯೂಸ್

10 Best Tomato Juice Substitutes - Substitute Cooking

  • ಗಗನಗೆ ಏರಿದ ಟೊಮೆಟೊ ಬೆಲೆ, ಈಗ ದಿಢೀರಣೆ ಕುಸಿದಿದೆ. ಅದು ಏನೇ ಇರಲಿ ಆದರೆ ಟೊಮೆಟೊ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಹಣ್ಣಿನಲ್ಲಿ ಕಂಡು ಬರುವ ಲೈಕೋಪೀನ್ ಎನ್ನುವ ಆರೋಗ್ಯಕಾರಿ ಅಂಶವು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಆಗದಂತೆ ತರಡೆಯುತ್ತದೆ.
  • ಹೀಗಾಗಿ ಸಕ್ಕರೆ ಕಾಯಿಲೆ ಇರುವ ರೋಗಿಗಳು ಪ್ರತಿದಿನ, ಸಣ್ಣ ಲೋಟದಷ್ಟು ಲೋಟದಷ್ಟು ತಾಜಾ ಟೊಮೆಟೊ ಹಣ್ಣಿನ ರಸವನ್ನು ಸೇವಿಸುತ್ತಾ ಬಂದರೆ ಸಕ್ಕರೆಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುತ್ತದೆ.
  • ಇನ್ನು ಟೊಮೆಟೊ ಹಣ್ಣಿನ ಜ್ಯೂಸ್ ರೆಡಿ ಮಾಡುವಾಗ, ಚೆನ್ನಾಗಿ ಹಣ್ಣಾದ, ಮಧ್ಯಮ ಗಾತ್ರದ ಒಂದೆರಡು ಟೊಮೆಟೊಗಳನ್ನು ತೆಗೆದುಕೊಳ್ಳಿ. ಈ ಹಣ್ಣನ್ನು ಚೆನ್ನಾಗಿ ತೊಳೆದ ಬಳಿಕ ಕೇವಲ ತಿರುಳನ್ನು ಮಾತ್ರವೇ ಸಂಗ್ರಹಿಸಿ, ಜ್ಯೂಸ್ ಮಾಡಿಕೊಳ್ಳಿ. ನೆನೆಪಿಡಿ ಈ ಪಾನೀಯಕ್ಕೆ ಸಕ್ಕರೆಯಾಲಿ ಅಥವಾ ಬೇರೆ ಯಾವುದೇ ಸಿಹಿ ಅಂಶಗಳನ್ನು ಬೆರೆಸಬೇಡಿ.

Drinks That Help You To Manage Your Blood Sugar Level Naturally.