ಬ್ರೇಕಿಂಗ್ ನ್ಯೂಸ್
30-08-22 10:09 pm Source: Vijayakarnataka ಡಾಕ್ಟರ್ಸ್ ನೋಟ್
ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಸಡನ್ ಆಗಿ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾದಾಗ, ಸ್ವಲ್ಪ ಸೋಂಪು ಕಾಳುಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿದು ಅದರ ರಸವನ್ನು ನುಂಗುತ್ತಾ ಬಂದರೆ, ಇಂತಹ ಸಮಸ್ಯೆಗಳಿಂದ ತಕ್ಷಣವೇ ರಿಲೀಫ್ ಸಿಗುತ್ತದೆ.
ಇದು ಕೇವಲ ಗ್ಯಾಸ್ಟ್ರಿಕ್ ವಿಚಾರದಲ್ಲಿ ಮಾತ್ರವಲ್ಲ, ಇನ್ನೂ ಅನೇಕ ತರಹದ ಆರೋಗ್ಯ ತೊಂದರೆಗಳಿಗೆ ಸೋಂಪು ಕಾಳುಗಳು ಪರಿಹಾರ ಎಂದು ಹೇಳಬಹುದು. ಅದರಲ್ಲೂ ಮುಖ್ಯವಾಗಿ ರಾತ್ರಿ ಪೂರ್ತಿ ಈ ಕಾಳುಗಳನ್ನು ನೆನೆಸಿಟ್ಟು, ಮರುದಿನ ಇದರ ಪಾನೀಯವನ್ನು ಕುಡಿಯುತ್ತಾ ಬಂದರೆ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಬನ್ನಿ ಹಾಗಾದ್ರೆ ಇಂದಿನ ಲೇಖನದಲ್ಲಿ ನೆನೆಸಿಟ್ಟ ಸೋಂಪು ಕಾಳುಗಳ ನೀರನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎನ್ನುವುದನ್ನು ನೋಡೋಣ...
ಸೋಂಪು ಕಾಳಿನ ಪಾನೀಯ ತಯಾರಿಸುವುದು ಹೇಗೆ?
ಸೋಂಪು ಕಾಳು ಹಾಕಿ ಚಹಾ ಕೂಡ ತಯಾರಿಸಬಹುದು ಹೇಗೆ ಗೊತ್ತಾ?
ಒಂದು ಪ್ಯಾನ್ ನಲ್ಲಿ ನೀರು ಮತ್ತು 1ಟೀ ಚಮಚ ಸೋಂಪು ಕಾಳುಗಳನ್ನು ಹಾಕಿ ಮೀಡಿಯಂ ಉರಿಯಲ್ಲಿ ಸ್ವಲ್ಪ ಹೊತ್ತು ಹಾಗೇ ಬಿಡಬೇಕು. ಆದರೆ ಕುದಿಸಬಾರದು. ಏಕೆಂದರೆ ಇದರಿಂದ ಎಲ್ಲಾ ಪೌಷ್ಟಿಕ ಸತ್ವಗಳು ಮಾಯವಾಗುತ್ತವೆ. ಅದರಿಂದ ನೀರಿನ ಬಣ್ಣ ಹಳದಿ ಬಣ್ಣಕ್ಕೆ ಬದಲಾಗುವವರೆಗೆ ಬೇಯಿಸಿ ಇದನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಕುಡಿಯಬಹುದು.
ಈ ಎರಡು ಪಾನೀಯಗಳ ಪ್ರಯೋಜನಗಳು
ಇದರಲ್ಲಿ ಮ್ಯಾಂಗನೀಸ್, ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರ ಜೊತೆಗೆ ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಅಂಶಗಳು ಸಹ ಇರುತ್ತವೆ. ಇದರಿಂದ ಸಿಗುವ ಆರೋಗ್ಯ ಲಾಭಗಳನ್ನು ನೋಡುವುದಾದರೆ...
ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು
ರಕ್ತದ ಒತ್ತಡ ನಿವಾರಣೆ ಮಾಡುತ್ತದೆ
ಸೋಂಪು ಕಾಳುಗಳಲ್ಲಿ ಪೊಟಾಶಿಯಂ ಹೆಚ್ಚಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಜೊತೆಗೆ ಹೃದಯದ ಬಡಿತವನ್ನು ಸಹ ನಿಯಂತ್ರಿಸುತ್ತದೆ.
ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ವಿಟಮಿನ್ ಎ ಪ್ರಮಾಣ ಹೆಚ್ಚಾಗಿರುವ ಸೋಂಪು ಕಾಳುಗಳು ನಿಮ್ಮ ಕಣ್ಣುಗಳ ಆರೋಗ್ಯವನ್ನು ಉತ್ತೇಜಿಸುತ್ತದೆ. ಕಣ್ಣುಗಳಿಗೆ ಕಾಂತಿಯನ್ನು ಕೊಟ್ಟು ದೃಷ್ಟಿದೋಷವನ್ನು ಸರಿಪಡಿಸುತ್ತದೆ. ವಯಸ್ಸಾದ ನಂತರದಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆ ದೂರವಾಗುತ್ತದೆ.
ರಕ್ತ ಶುದ್ಧೀಕರಣದಲ್ಲಿ ಸಹಾಯಕ
ಸೋಂಪು ಕಾಳುಗಳಲ್ಲಿ ಎಸೆನ್ಶಿಯಲ್ ಆಯಿಲ್ ಇರುತ್ತದೆ. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ದೂರ ಮಾಡುವುದು ಮಾತ್ರವಲ್ಲದೆ ರಕ್ತ ಶುದ್ಧೀಕರಣದಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಪೌಷ್ಟಿಕ ಸತ್ವಗಳು ಜಾಸ್ತಿ ಇರುವುದರಿಂದ ದೇಹವು ಪೌಷ್ಟಿಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಅನು ಕೂಲವಾಗುತ್ತದೆ.
ಮುಟ್ಟಿನ ನೋವು ನಿವಾರಕ
ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಎದುರಾಗುವ ನೋವು ಅಥವಾ ತೊಂದರೆಯನ್ನು ಅಥವಾ ಋತುಬಂಧ ಸಂದರ್ಭದಲ್ಲಿ ಎದುರಾಗುವ ಹೊಟ್ಟೆಯ ಸೆಳೆತ ಇತ್ಯಾದಿಗಳನ್ನು ಇದು ಸರಿಪಡಿಸುತ್ತದೆ. ಸಾಕಷ್ಟು ಮಹಿಳೆಯರಿಗೆ ಬರುವಂತಹ ಅನಿಯಮಿತ ಮುಟ್ಟಿನ ತೊಂದರೆಗಳನ್ನು ಸಹ ಇದು ಹೋಗಲಾಡಿಸುತ್ತದೆ.
ದೇಹದ ತೂಕ ನಿಯಂತ್ರಕ
ಮೊಡವೆಗಳಿಂದ ಪರಿಹಾರ ಸಿಗುತ್ತದೆ
ಸೋಂಪು ಕಾಳುಗಳು ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಇವುಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಸಾಕಷ್ಟಿರುತ್ತವೆ. ಇವುಗಳು ನಿಮ್ಮ ಮೊಡವೆಗಳನ್ನು ಪರಿಹಾರ ಮಾಡಬಲ್ಲವು. ನಿಮ್ಮ ಮುಖದ ಚರ್ಮದ ಮೇಲೆ ಹೊಳಪನ್ನು ಸಹ ತಂದುಕೊಡುವಲ್ಲಿ ಸೋಂಪು ಕಾಳುಗಳು ಕೆಲಸಕ್ಕೆ ಬರುತ್ತವೆ.
ಕ್ಯಾನ್ಸರ್ ಸಮಸ್ಯೆಗೆ ರಾಮಬಾಣ
ಸೋಂಪು ಕಾಳುಗಳು ಹೊಟ್ಟೆಗೆ ಸಂಬಂಧಪಟ್ಟಂತೆ ಮತ್ತು ಚರ್ಮಕ್ಕೆ ಹೊಂದಿಕೊಂಡಂತೆ ಬರುವಂತಹ ಕ್ಯಾನ್ಸರ್ ಸಮಸ್ಯೆಗೆ ತಾತ್ಕಾಲಿಕ ತಡೆಗೋಡೆಯಾಗಿ ಕೆಲಸ ಮಾಡುತ್ತದೆ ಹಾಗೂ ಸ್ತನ ಕ್ಯಾನ್ಸರ್ ಸಮಸ್ಯೆ ಯನ್ನು ಸಹ ಹೋಗಲಾಡಿಸುತ್ತದೆ. ಇದರಲ್ಲಿ ಪ್ರಮುಖವಾಗಿ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಗುಣ ಲಕ್ಷಣಗಳು ಸಾಕಷ್ಟಿವೆ.ನ ಕ್ಯಾನ್ಸರ್ ಸಮಸ್ಯೆ ಯನ್ನು ಸಹ ಹೋಗಲಾಡಿಸುತ್ತದೆ.
Fennel Seeds Water Health Benefits Are Still Unknown To You.
07-08-25 05:50 pm
Bangalore Correspondent
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
07-08-25 03:26 pm
Mangalore Correspondent
Dharmasthala Temple, NIA, Bomb: ಕುಕ್ಕರ್ ಬಾಂಬ್...
07-08-25 11:19 am
ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ ; ಯೂಟ್ಯೂಬ್, ಮಾಧ್...
06-08-25 11:11 pm
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm